Monday, April 4, 2011

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುಡಿಪಾಡ್ವ ಹಬ್ಬದ ಆಚರಣೆಯ ಒಂದು ವರದಿ - 4ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುಡಿಪಾಡ್ವ ಹಬ್ಬವನ್ನು 4ನೇ ಏಪ್ರಿಲ್ 2011, ಸೋಮವಾರದಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಮತ್ತು ಶ್ರೀಮತಿ.ಮಂಜುಶ್ರೀ ಮೋರೆಯವರು ಗುಡಿ ಪೂಜೆಯನ್ನು ನೆರವೇರಿಸಿದರು. ನಂತರ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸಾಯಿಬಾಬಾ ಸಮಾಧಿ  ಮತ್ತು ಪಾದುಕೆಗಳ ಪೂಜೆಯನ್ನು ಕೂಡ ನೆರವೇರಿಸಿದರು. ಈ ಸಂದರ್ಭದಲ್ಲಿ ಕಲ್ಕತ್ತಾದ ಸಾಯಿಭಕ್ತ ಶ್ರೀ.ಅಶೋಕ್ ಜೈಸ್ವಾಲ್ ರವರು ಸಮಾಧಿ ಮಂದಿರವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಿದರು. ಅಲ್ಲದೆ, ದೆಹಲಿಯ ಸಾಯಿಭಕ್ತ ಶ್ರೀ.ಮುಕೇಶ್ ಗುಪ್ತ ಮತ್ತು ಬೆಂಗಳೂರಿನ ಸಾಯಿಭಕ್ತ ಶ್ರೀ.ಅಮಿತ್ ಬಜಾಜ್ ರವರು ಜಂಟಿಯಾಗಿ 2 ಟಾಟಾ ವಿಂಗರ್ ಆಂಬುಲೆನ್ಸ್ ವಾಹನಗಳನ್ನು ಗುಡಿಪಾಡ್ವದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು. 





ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment