Saturday, April 9, 2011

ವಿಲಾಸ್ ರಾವ್ ದೇಶಮುಖ್, ಗೋಪಿನಾಥ್ ಮುಂಡೆ ಮತ್ತು ಬಾಳಾಸಾಹೇಬ್ ತೋರಟ್ ಶಿರಡಿ ಭೇಟಿ - 10ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಕೇಂದ್ರ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ.ವಿಲಾಸ್ ರಾವ್ ದೇಶಮುಖ್, ಭಾರತೀಯ ಜನತಾ  ಪಕ್ಷದ  ಸಂಸತ್ ಸದಸ್ಯ ಮತ್ತು ಲೋಕಸಭೆಯ ಉಪಾಧ್ಯಕ್ಷ ಶ್ರೀ.ಗೋಪಿನಾಥ್ ಮುಂಡೆ ಮತ್ತು ಮಹಾರಾಷ್ಟ್ರ ಸರ್ಕಾರದ  ಕಂದಾಯ  ಸಚಿವ ಶ್ರೀ.ಬಾಳಾಸಾಹೇಬ್ ತೋರಟ್ ರವರು ಇದೇ ತಿಂಗಳ 9ನೇ ಏಪ್ರಿಲ್ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. 


ಸಮಾಧಿ ದರ್ಶನದ ನಂತರ ಶ್ರೀ.ವಿಲಾಸ್ ರಾವ್ ದೇಶಮುಖ್ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಪಾಂಡುರಂಗ ಅಭಂಗ್ ರವರು ಸಾಯಿಬಾಬಾರವರ ವಿಗ್ರಹ ಮತ್ತು ಶಾಲು ನೀಡುವ ಮುಖಾಂತರ ಸನ್ಮಾನಿಸಿದರು. 


ಶ್ರೀ.ಗೋಪಿನಾಥ್ ಮುಂಡೆ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡ್ಕರ್ ರವರು ಸಾಯಿಬಾಬಾರವರ ವಿಗ್ರಹ ಮತ್ತು ಶಾಲು ನೀಡುವ ಮುಖಾಂತರ ಸನ್ಮಾನಿಸಿದರು. 



ಶ್ರೀ.ಬಾಳಾಸಾಹೇಬ್ ತೋರಟ್ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಶೈಲೇಶ್ ಕುಟೆಯವರು ಸಾಯಿಬಾಬಾರವರ ವಿಗ್ರಹ ಮತ್ತು ಶಾಲು ನೀಡುವ ಮುಖಾಂತರ ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment