Monday, April 25, 2011

ಹರಿದ್ವಾರದ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಪರಶುರಾಮ ಆಶ್ರಮ (ನೋಂದಣಿ), ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕ, ಹರಿದ್ವಾರ-249 410, ಉತ್ತರಖಂಡ, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ

ಈ ಶಿರಡಿ ಸಾಯಿಬಾಬಾ ಮಂದಿರವು ಹರಿದ್ವಾರದ ಪ್ರಥಮ ಸಾಯಿಬಾಬಾ ಮಂದಿರವಾಗಿರುತ್ತದೆ. ಈ ಮಂದಿರವನ್ನು 5ನೇ ಮೇ 1994 ರಂದು ಹೃಷಿಕೇಶದ ಶ್ರೀ.ಎ.ಕೆ.ಟೈಲರ್ ರವರು ಉದ್ಘಾಟಿಸಿದರು. ಸಾಯಿಬಾಬಾರವರ ಪವಿತ್ರ ಧುನಿಯನ್ನು ಶಿರಡಿಯಿಂದ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಶ್ರೀ.ಕೋಟೆ ಪಾಟೀಲ್ ರವರು ಸ್ವತಃ ತಂದು ಸ್ಥಾಪಿಸಿದರು. 

ಸಾಯಿಬಾಬಾರವರ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದಲ್ಲಿ 9 ಹೋಮಕುಂಡಗಳನ್ನು ಬಳಸಲಾಯಿತು. 1 ವಾರಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು 51 ಪುರೋಹಿತರ ನೇತೃತ್ವದಲ್ಲಿ ವೈದಿಕ ಪದ್ದತಿಗೆ ಅನುಗುಣವಾಗಿ ನಡೆಯಿತು. 

45 ಕೆಜಿ ತೂಕದ ಬೆಳ್ಳಿಯ ಸಿಂಹಾಸನವನ್ನು ಮೇ 2001 ರಲ್ಲಿ ಸ್ಥಾಪಿಸಲಾಯಿತು. 

ದೇವಾಲಯವು 3 ಅಂತಸ್ತುಗಳಿಂದ ಕೂಡಿದ್ದು ಕೆಳ ಅಂತಸ್ತಿನಲ್ಲಿ ಧ್ಯಾನ ಮಂದಿರವನ್ನು ಕಟ್ಟಲಾಗಿದ್ದು ಅಲ್ಲಿ 5 ಅಡಿ 4 ಅಂಗುಲ ಉದ್ದದ ಅಮೃತ ಶಿಲೆಯ ಸುಂದರವಾದ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಮೊದಲನೇ ಮಹಡಿಯಲ್ಲಿ ಸುಸಜ್ಜಿತವಾದ 10 ಕೋಣೆಗಳನ್ನು ಹೊರಗಿನಿಂದ ಬರುವ ಸಾಯಿಭಕ್ತರ ಇಳಿದುಕೊಳ್ಳಲು ಅನುಕೂಲ ಆಗಲೆಂದು ಕಟ್ಟಲಾಗಿದೆ.  

ಎರಡನೇ ಮಹಡಿಯಲ್ಲಿ ಸಾಯಿ ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲು ಊಟದ ಹಾಲ್ ನಿರ್ಮಿಸಲಾಗಿದೆ. 

ದೇವಾಲಯದಲ್ಲಿ ಪವಿತ್ರ ಧುನಿಯನ್ನು ಕೂಡ ಸ್ಥಾಪಿಸಲಾಗಿದೆ. 

ದೇವಾಲಯದ ಆವರಣದಲ್ಲಿ 15 ಸುಸಜ್ಜಿತ ಹವಾ ನಿಯಂತ್ರಿತ ಕೋಣೆಯನ್ನು ಹೊಂದಿರುವ "ಸಾಯಿ ಭಕ್ತ ನಿವಾಸ" ವನ್ನು ಕಟ್ಟಲಾಗಿದ್ದು ಪ್ರತಿ ಕೋಣೆಯು ಟಿವಿ, ನೀರಿನ ಗೀಸರ್ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಹೊಂದಿದ್ದು ಅತ್ಯಂತ ಕಡಿಮೆ ದರದಲ್ಲಿ ಹೊರ ರಾಜ್ಯದ ಭಕ್ತರಿಗೆ ಉಳಿದುಕೊಳ್ಳಲು ನೀಡಲಾಗುತ್ತಿದೆ. ಅಲ್ಲದೆ, ಇದೇ ದೇವಾಲಯದ ಆವರಣದಲ್ಲಿ  ಸಾಮಾನ್ಯ ಕೋಣೆಗಳನ್ನು ಕೂಡ ಕಟ್ಟಲಾಗಿದ್ದು, ಇವುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. 







ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ 
ಕಾಕಡಾ ಆರತಿ - ಬೆಳಿಗ್ಗೆ 5:30 ಕ್ಕೆ 
ಮಧ್ಯಾನ್ಹ ಆರತಿ - 12 ಘಂಟೆಗೆ 
ಧೂಪಾರತಿ - ಸಂಜೆ 6:30 ಕ್ಕೆ 
ಶೇಜಾರತಿ - ರಾತ್ರಿ 9:30 ಕ್ಕೆ 

ವಿಶೇಷ ಉತ್ಸವದ ದಿನಗಳು: 
  1. ಪ್ರತಿ ವರ್ಷದ 3ನೇ ಮೇ ಯಿಂದ 5ನೇ ಮೇ ವರೆಗೆ ಸಾಯಿಮಂದಿರದ ಸ್ಥಾಪನಾ ದಿವಸದ ಅಂಗವಾಗಿ ಸಾಯಿ ಕುಂಭ ಮೇಳವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಎಲ್ಲಾ 3 ದಿನಗಳಲ್ಲಿ ಪ್ರಸಿದ್ದ ಸಾಯಿ ಭಜನ ಗಾಯಕರಿಂದ ಸಾಯಿಭಜನೆಯನ್ನು ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 1008 ಲೀಟರ್ ಹಾಲಿನ ಕೊಡಗಳು ಮತ್ತು ಪವಿತ್ರ ಗಂಗಾ ಜಲದಿಂದ ತುಂಬಿದ್ದ 108 ಕಲಶಗಳನ್ನು ಹರ ಕಿ ಪುರಿಯಿಂದ ಮಹಿಳೆಯರು ಮೆರವಣಿಗೆಯಲ್ಲಿ ತಂದು ಇರಿಸಿ ಮಾರನೇ ದಿನ ಬೆಳಗಿನ ಜಾವ ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಮಾಡಿಸಲಾಗುತ್ತದೆ. ಎಲ್ಲರಿಗೂ ಮಹಾಪ್ರಸಾದದ ವ್ಯವಸ್ತೆಯನ್ನು ಕೂಡ ಮಾಡಲಾಗುತ್ತದೆ. 
  2. ಮಹಾಶಿವರಾತ್ರಿ - ರಾತ್ರಿಯೆಲ್ಲಾ ವಿವಿಧ ಸಾಯಿ ಭಜನ ಗಾಯಕರಿಂದ ಸಾಯಿ ಭಜನೆಯ ಕಾರ್ಯಕ್ರಮ. 
  3. ಗುರು ಪೂರ್ಣಿಮೆ - ದಿನವಿಡೀ ಸಾಯಿ ಭಜನೆಯ ಕಾರ್ಯಕ್ರಮ ಮತ್ತು ಅನ್ನದಾನ. 
  4. ಶ್ರೀರಾಮನವಮಿ. 
  5. ವಿಜಯದಶಮಿ - ಸಾಯಿಬಾಬಾ ಮಹಾಸಮಾಧಿ ದಿವಸ - ದಿನವಿಡೀ ಸಾಯಿ ಭಜನೆಯ ಕಾರ್ಯಕ್ರಮ ಮತ್ತು ಅನ್ನದಾನ. 
ಸಾಮಾಜಿಕ ಕಾರ್ಯಚಟುವಟಿಕೆಗಳು:

  1. ದೇವಾಲಯದ ಆವರಣದಲ್ಲಿ ಉಚಿತ ಚಿಕಿತ್ಸಾಲಯವನ್ನು ನಿರ್ಮಿಸಲಾಗಿದ್ದು ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸಿ ಔಷಧವನ್ನು ಕೂಡ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. 
  2. ದೇವಾಲಯಕ್ಕೆ ಬರುವ ಕುಷ್ಟ ರೋಗಿಗಳಿಗೆ ವರ್ಷದಲ್ಲಿ 5 ಬಾರಿ 10 ಕೆಜಿ ಅಕ್ಕಿ, 2 ಕೆಜಿ ಬೇಳೆ, ಬಟ್ಟೆ ಮತ್ತು ಹಣವನ್ನು ನೀಡಲಾಗುತ್ತಿದೆ. 
  3. ಪ್ರತಿನಿತ್ಯ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಅನ್ನದಾನವನ್ನು ಮಾಡಲಾಗುತ್ತಿದೆ. 

ದೇಣಿಗೆಗೆ ಮನವಿ:

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ದೇವಾಲಯದ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ ದೇವಾಲಯವನ್ನು ವಿಸ್ತರಿಸುವ ಉದ್ದೇಶಕ್ಕಾಗಿ, ಒಂದೇ ಬಾರಿಗೆ 500 ಜನರಿಗೆ ಸಾಕಾಗುವಷ್ಟು ವಿಶಾಲವಾದ ಊಟದ ಮನೆಯನ್ನು ನಿರ್ಮಿಸಲು, ಫಿಜಿಯೋಥಿರೆಪಿ ಚಿಕಿತ್ಸಾಲಯ ಮತ್ತು ದಂತ ಚಿಕಿತ್ಸಾಲಯವನ್ನು ನಿರ್ಮಿಸಲು ಮತ್ತು ಭಕ್ತರು ಉಳಿದುಕೊಳ್ಳಲು 30 ಹವಾನಿಯಂತ್ರಿತ ಕೋಣೆಗಳನ್ನು ನಿರ್ಮಿಸುವ ಸಲುವಾಗಿ ಸಾಯಿ ಭಕ್ತರಿಂದ ಉದಾರವಾದ ದೇಣಿಗೆಯನ್ನು ನೀಡಲು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆ ನೀಡಲು ಇಚ್ಚಿಸುವ ಸಾಯಿ ಭಕ್ತರು ಚೆಕ್ ಅಥವಾ ಡಿಡಿ ರೂಪದಲ್ಲಿ ಈ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಕೋರಿಕೊಳ್ಳಲಾಗಿದೆ.


ಬ್ಯಾಂಕ್ ಆಫ್ ಬರೋಡ, ಝೀಲ್, ದೆಹಲಿ-51 – A/c No.21380100001589
ಇಂಡಿಯನ್ ಓವರ್ಸೀಸ್ ಬ್ಯಾಂಕ್ (ಹರಿದ್ವಾರ)-A/c No.169201000000221
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಹರಿದ್ವಾರ)-A/c.No.3129000101130436

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕ

ವಿಳಾಸ: 
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಸಾಯಿಬಾಬಾ ಚಾರಿಟಬಲ್ ಟ್ರಸ್ಟ್, ಪರಶುರಾಮ ಆಶ್ರಮ (ನೋಂದಣಿ), 
ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, 
ಬೂಪಟ್ವಾಲ ಚೌಕ, ಹರಿದ್ವಾರ-249 410, ಉತ್ತರಖಂಡ, ಭಾರತ 

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸುಭಾಶ್ ದತ್ತ / ಶ್ರೀ.ಮೋಹಿತ್ ದತ್ತ / ಶ್ರೀ.ಸುನೀಲ್ ನಾಗಪಾಲ್ / ಶ್ರೀ.ಕಪೂರ್ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
 +91 98100 38721 / +91 97607 87616 /+91 95577 47502 /+91 13342 60356 / +91 13342 62835

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಹರಿದ್ವಾರ ರೈಲ್ವೇ ನಿಲ್ದಾಣದ ಬಳಿ ಇಳಿಯುವುದು.ದೇವಾಲಯವು ರೈಲ್ವೇ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲಿದೆ. ದೇವಾಲಯವು ಹೃಷಿಕೇಶ ಬೈ ಪಾಸ್ ರಸ್ತೆ, ದುಧಾಧಾರಿ ಮಂದಿರದ ಎದುರು, ಬೂಪಟ್ವಾಲ ಚೌಕದ ಬಳಿಯಿದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment