Monday, June 30, 2014

ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಬಗ್ಗೆ ಮರಾಠಿ ಭಾಷೆಯಲ್ಲಿ ರಚಿಸಲಾದ ಹೊಸ ಪುಸ್ತಕ "ಸಾಯಿಂಚ್ಯಾ ಸಾನಿಧ್ಯಾತ್" ಪುಸ್ತಕದ ಲೋಕಾರ್ಪಣೆ ಸಮಾರಂಭ - ಕೃಪೆ:ಸಾಯಿಅಮೃತಧಾರಾ.ಕಾಂ



ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಲಾದ ಹೊಸ ಪುಸ್ತಕ  "ಸಾಯಿಂಚ್ಯಾ ಸಾನಿಧ್ಯಾತ್" ನ ಲೋಕಾರ್ಪಣೆ ಸಮಾರಂಭವು ಮುಂದಿನ ತಿಂಗಳ ಪವಿತ್ರ ಗುರುಪೂರ್ಣಿಮೆಯ ದಿನವಾದ 12ನೇ ಜುಲೈ  2014, ಶನಿವಾರದಂದು ಶಿರಡಿಯ ಸಮಾಧಿ ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಪುಸ್ತಕದ ಲೇಖಕಿಯಾದ ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಸುದ್ದಿಗಾರರಿಗೆ ತಿಳಿಸಿದರು. 

ಲೇಖಕಿ ಶ್ರೀಮತಿ.ಮುಗ್ಧ ಸುಧೀರ್ ದಿವಾಡಕರ್ ರವರು ಶ್ರೀ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಪಡಿಸುವ ಶ್ರೀ ಸಾಯಿಲೀಲಾ ದ್ವೈಮಾಸಿಕದಲ್ಲಿ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಾ ಬಂದಿದ್ದು ಸಾಯಿಲೀಲಾ ಓದುಗರಿಗೆ ಚಿರಪರಿಚಿತರಾಗಿದ್ದಾರೆ. 

ಈ ಪುಸ್ತಕದಲ್ಲಿ ಶ್ರೀ ಸಾಯಿಬಾಬಾರವರ ಅವತರಣ ಕಾಲದಲ್ಲಿ ಅವರೊಂದಿಗೆ ಹತ್ತಿರದ ಒಡನಾಡವನ್ನು ಹೊಂದಿದ್ದ 77 ಸಾಯಿ ಮಹಾಭಕ್ತರ ಬಗ್ಗೆ ಅತ್ಯಂತ ಅಪರೂಪದ ಹಾಗೂ ನಿಖರ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಶ್ರೀಮತಿ ಮುಗ್ದ ಸುಧೀರ್ ದಿವಾಡಕರ್ ರವರು ಮಾಡಿರುತ್ತಾರೆ. ಅಷ್ಟೇ ಅಲ್ಲದೆ  ಶ್ರೀ ಸಾಯಿಬಾಬಾರವರ ಜೀವನ, ಉಪದೇಶಗಳು ಹಾಗೂ ತತ್ವಗಳನ್ನು ಆ ಮಹಾಭಕ್ತರು ತಮ್ಮ ಮಾತುಗಳಲ್ಲೇ ವರ್ಣಿಸಿರುವುದು ಈ ಪುಸ್ತಕದ ವಿಶೇಷತೆಯಾಗಿರುತ್ತದೆ. 

ಪುಸ್ತಕವು 544 ಪುಟಗಳಷ್ಟು ವಿಷಯವನ್ನು ಹೊಂದಿದ್ದು ಇದರ ಬೆಲೆಯನ್ನು  600 ರೂಪಾಯಿಗಳೆಂದು ನಿಗದಿಪಡಿಸಲಾಗಿದೆ. ಅಲ್ಲದೇ ಲೋಕಾರ್ಪಣೆಯ ವಿಶೇಷ ಕೊಡುಗೆಯಾಗಿ ಪ್ರಕಾಶಕರು 31ನೇ  ಜುಲೈ 2014 ರವರಗೆ ಈ ಪುಸ್ತಕವನ್ನು ಕೇವಲ 450 ರೂಪಾಯಿಗಳಿಗೆ ನೀಡುತ್ತಿದ್ದಾರೆ. 

ಪುಸ್ತಕವನ್ನು ಪಡೆಯಲು ಇಚ್ಚಿಸುವ ಸಾಯಿ ಭಕ್ತರು ಡಿಡಿ ಅಥವಾ ಚೆಕ್ ಮುಖಾಂತರ 31ನೇ  ಜುಲೈ 2014 ರವರಗೆ  450 ರೂಪಾಯಿಗಳಂತೆ ಹಾಗೂ ತದನಂತರ  600 ರೂಪಾಯಿಗಳಂತೆ ಈ ಕೆಳಕಂಡ ವಿಳಾಸಕ್ಕೆ ಹಣವನ್ನು ಸಂದಾಯ ಮಾಡಬಹುದಾಗಿರುತ್ತದೆ. 

ಅನುಬಂಧ್ ಪ್ರಕಾಶನ, 
202, ಬಾಲಾಜಿ ಕಾಂಪ್ಲೆಕ್ಸ್,
ಬಾಲಾಜಿ ನಗರ, 
ಪುಣೆ – 411 043
ದೂರವಾಣಿ ಸಂಖ್ಯೆ: 020-2437 2871
ಮಿಂಚಂಚೆ: anubandhprakashan.pune@gmail.com

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment