Sunday, October 5, 2014

ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ" ಗ್ರಂಥಗಳ ಲೋಕಾರ್ಪಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಕುರಿತು ರಚಿಸಲಾದ ಪವಿತ್ರ ಗ್ರಂಥ ಶ್ರೀ ಸಾಯಿ ಸಚ್ಚರಿತ್ರೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಶ್ರೀ ಸಾಯಿಬಾಬಾ ಸಂಸ್ಥಾನದವರು ಹೊರತಂದಿರುವ ಈ ಪವಿತ್ರ ಗ್ರಂಥವು ಸಾಯಿ ಭಕ್ತರಿಗೆ ಭಗವದ್ಗೀತೆ ಹಾಗೂ ಜ್ಞಾನೇಶ್ವರಿಯಷ್ಟೇ ಮಹತ್ವವಿರುವ ಗ್ರಂಥವಾಗಿರುತ್ತದೆ. ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಅಂಗವಾಗಿ ಇದೇ ತಿಂಗಳ 3ನೇ ಅಕ್ಟೊಬರ್ 2014,ಶುಕ್ರವಾರ ದಂದ ಸಮಾಧಿ ಮಂದಿರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ಅಸ್ಸಾಮಿ ಭಾಷೆಯಲ್ಲಿ ರಚಿಸಲಾದ "ಸಾಯಿ ಚರಿತ್ರ ದರ್ಶನ" ಮತ್ತು "ಶ್ರೀ ಸಾಯಿನಾಥ ಸಗುಣೋಪಾಸನ"  ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.  ದಿವಂಗತ ಶ್ರೀ.ಹೇಮಾಡಪಂತರು  ಮರಾಠಿ ಮೂಲ ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಂಗ್ಲ ಭಾಷೆಗೆ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ತರ್ಜುಮೆ ಮಾಡಿದ್ದರು. ಅದರ ಅಸ್ಸಾಮಿ ಅನುವಾದವೇ ಈ "ಸಾಯಿ ಚರಿತ್ರ ದರ್ಶನ" ಗ್ರಂಥವಾಗಿರುತ್ತದೆ.  ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀ.ಕಾವಡೆಯವರು ಶ್ರೀ ಸಾಯಿಬಾಬಾರವರ ಜೀವನ ಹಾಗೂ ಉಪದೇಶಗಳನ್ನು ಇನ್ನೂ ಹೆಚ್ಚು ಭಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಈ ಅಸ್ಸಾಮಿ ಗ್ರಂಥವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು. 



ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಶ್ರೀ.ಕಾವಡೆಯವರು ಮಾನವನ ಜೀವನದಲ್ಲಿ ಸದ್ಗುರುವಿನ ಪೂಜೆಗೆ ಹೆಚ್ಚಿನ ಮಹತ್ವವಿರುತ್ತದೆ, ಈ ನಿಟ್ಟಿನಲ್ಲಿ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯು ಮುಂದಿನ ಯುವ ಪೀಳಿಗೆಯು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅಷ್ಟೇ ಅಲ್ಲದೇ ಈ ಗ್ರಂಥವು ಪ್ರತಿಯೊಬ್ಬರನ್ನೂ ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ.  ಈ ಗ್ರಂಥವು "ಮಾನವ ಸೇವೆಯೇ ಮಾಧವ ಸೇವೆ" ಎಂಬ ಸಂದೇಶವನ್ನು ಇಡೀ ಜಗತ್ತಿಗೆ ಸ್ಪಷ್ಟವಾಗಿ ಸಾರುತ್ತದೆ ಎಂದು ನುಡಿದರು. ಈ  ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾನದ ಮಾಜಿ ಅಧ್ಯಕ್ಷರಾದ ಶ್ರೀ.ಸುಕ್ತಾನಕರ್ ರವರು ಈ ಗ್ರಂಥದ ಮರಾಠಿ  ಅವತರಣಿಕೆಯ ಬಿಡುಗಡೆ ಸಮಾರಂಭದಲ್ಲಿ ತಾವು ಭಾಗವಹಿಸಿದ್ದು ಈಗ ಪುನಃ ಇದೇ ಗ್ರಂಥದ ಅಸ್ಸಾಮಿ ಅನುವಾದಿತ ಗ್ರಂಥದ ಬಿಡುಗಡೆ ಸಮಾರಂಭದಲ್ಲೂ ತಾವು ಭಾಗವಹಿಸುವ ಭಾಗ್ಯ ತಮಗೆ ದೊರೆಯುತ್ತಿರುವುದು ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದು ನುಡಿದರು. ಅಲ್ಲದೆ, ಈ ಅಸ್ಸಾಮಿ ಗ್ರಂಥವು ಅಸ್ಸಾಂ ರಾಜ್ಯದಲ್ಲಿ ಸಾಯಿ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. 

ದಿವಂಗತ ಶ್ರೀ. ಹೇಮಾಡಪಂತರು ಮೂಲ ಮರಾಠಿ ಗ್ರಂಥವನ್ನು ಓವಿ ಶೈಲಿಯಲ್ಲಿ ರಚಿಸಿದರು. ಆ ಓವಿ ಗ್ರಂಥವನ್ನು ಮರಾಠಿ ಗದ್ಯ ಶೈಲಿಯಲ್ಲಿ ಶ್ರೀ.ಕೆ.ಎಲ್.ಕೊಲೊನೆಲ್ ಮತ್ತು ಶ್ರೀ.ನಿಂಬಾಳ್ಕರ್ ರವರು ಹೊರತಂದರು.  ನಂತರ ಇದೇ ಮರಾಠಿ ಗ್ರಂಥವನ್ನು ಸಂಕ್ಷಿಪ್ತ ರೂಪದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು "ಸಾಯಿ ಚರಿತ್ರ ದರ್ಶನ" ಎಂಬ ಹೆಸರಿನಲ್ಲಿ ಹೊರತಂದರು.ಈ ಪುಸ್ತಕವು ಈಗಾಗಲೇ ಗುಜರಾತಿ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ತರ್ಜುಮೆಗೊಂಡಿರುತ್ತದೆ. ಪ್ರಸ್ತುತ  ಗೌಹಟಿಯ ಶ್ರೀ.ನಿಶಾಂತ್ ಹಜಾರಿಕಾ ಮತ್ತು ಶ್ರೀಮತಿ.ರೂಮಾ ಗೃಹರವರುಗಳು ಅಸ್ಸಾಮಿ ಭಾಷೆಯಲ್ಲಿ ಇದೇ ಗ್ರಂಥವನ್ನು ತರ್ಜುಮೆ ಮಾಡಿದ್ದು, ಗೌಹಟಿಯ ಅಸ್ಸಾಂ ಬುಕ್ ಡಿಪೋ ನ ಶ್ರೀ. ಅಭಿಜಿತ್ ಗೃಹ ರವರು  ಗ್ರಂಥವನ್ನು ಹೊರತಂದಿರುತ್ತಾರೆ. 

ಈ  ಶುಭ ಸಂದರ್ಭದಲ್ಲಿ ಶ್ರೀ. ಅಭಿಜಿತ್ ಗೃಹ ರವರು ತರ್ಜುಮೆ ಮಾಡಿರುವ ಶ್ರೀ ಸಾಯಿ ಸಗುಣೋಪಾಸನ ಎಂಬ ಮತ್ತೊಂದು ಅಸ್ಸಾಮಿ ಗ್ರಂಥವನ್ನು ಕೂಡ ಬಿಡುಗಡೆ ಮಾಡಲಾಯಿತು. 

ಶ್ರೀ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ವಂದನಾರ್ಪಣೆಯನ್ನು ನೆರವೇರಿಸಿದರು. 

ಮರಾಠಿಯಿಂದ ಅಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment