Wednesday, September 24, 2014

ಶಿರಡಿಯಲ್ಲಿ "ಆನಂದಿ ವಾಸ್ತು" ದಿನದರ್ಶಿಕೆಯ ಲೋಕಾರ್ಪಣೆ -ಕೃಪೆ:ಸಾಯಿಅಮೃತಧಾರಾ.ಕಾಂ

ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಇದೇ ತಿಂಗಳ 23ನೇ ಸೆಪ್ಟೆಂಬರ್ 2014, ಮಂಗಳವಾರದಂದು ಶಿರಿಡಿ ಸಮಾಧಿ ಮಂದಿರದಲ್ಲಿ  "ಆನಂದಿ ವಾಸ್ತು" ಎಂಬ ಹೆಸರಿನ ದಿನದರ್ಶಿಕೆಯನ್ನು ಲೋಕಾರ್ಪಣೆಯನ್ನು ಮಾಡಿದರು. ಈ ದಿನದರ್ಶಿಯು ವಾಸ್ತು ಶಾಸ್ತ್ರ ಆಧಾರಿತವಾಗಿದ್ದು  ಇದನ್ನು ಖ್ಯಾತ ವಾಸ್ತು ಹಾಗೂ ಜ್ಯೋತಿಷ್ಯ ತಜ್ಞರಾದ ಶ್ರೀ.ಆನಂದ ಪಿಂಪಾಲಕರ್ ರವರು ತಯಾರಿಸಿದ್ದಾರೆ. 


ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಆನಂದ ಪಿಂಪಾಲಕರ್ ರವರು ಈ ದಿನದರ್ಶಿಕೆಯಲ್ಲಿ ಶುಭ ನುಡಿಗಳು, ಭೂಮಿ ಪೂಜೆಯ ಮಹೂರ್ತಗಳು, ವಾಸ್ತು ಶಾಂತಿ ವಿಚಾರ, ವಿವಾಹ, ಪುಂಸವನ, ನಾಮಕರಣ, ಕೇಶ ಮುಂಡನ (ಚೌಲ), ಉಪನಯನ,ದಿನದ ವಿಶೇಷತೆ, ಸಂಖ್ಯಾ ಶಾಸ್ತ್ರ, ದಿನದಲ್ಲಿ ಬರುವ ಒಳ್ಳೆಯ ಮಹೂರ್ತ ಸಮಯಗಳು, ನಕ್ಷತ್ರ ವಿಚಾರ, ದೇವರ ಪೂಜೆಯ ವಿವರಗಳು, ವಾಸ್ತು ಸಲಹೆಗಳು, ಸಂಕಷ್ಟದ ದಿನದಂದು ಚಂದ್ರೋದಯದ ವಿವರಗಳು, ವಾಸ್ತು  ಪ್ರಕಾರವಾಗಿ ಉದ್ಯಾನವನದ ನಿರ್ಮಾಣ - ಹಾಗೂ ಇನ್ನೂ ಹತ್ತು ಹಲವಾರು ವಿಷಯಗಳನ್ನು ಕೂಲಂಕುಶವಾಗಿ ವಿವರಿಸಲಾಗಿದೆ ಎಂದು ಅವರು ತಿಳಿಸಿದರು. ಅಷ್ಟೇ ಅಲ್ಲದೇ ಶ್ರೀ ಸಾಯಿಬಾಬಾ ಸಂಸ್ಥಾನದ ಸಿಬ್ಬಂದಿ ವರ್ಗದವರಿಗೆ ಸುಮಾರು ಒಂಬತ್ತು ಸಾವಿರ ಪ್ರತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ  ಎಂಬ ವಿಷಯವನ್ನು  ಸಹ ಅವರು ತಿಳಿಸಿದರು. ಅಲ್ಲದೇ, ಈ ದಿನದರ್ಶಿಯನ್ನು ಜನ ಸಾಮಾನ್ಯರು ಓದಿ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಹಾಗೂ ಇಷ್ಟಪಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್, ಶ್ರೀ.ಅನಿಲ್ ಸಾಠೆ, ಡಾ.ಸಂದೀಪ್ ಓಸ್ವಾಲ್, ಶ್ರೀಮತಿ.ಪ್ರಿಯಾ ರಣದಿವೆ, ಶ್ರೀ.ಉಮೇಶ್ ಗಂದತ್, ಮತ್ತು ಶ್ರೀ.ಭೂಪೇಂದ್ರ ಸೋನಾವಾನೆಯವರುಗಳು ಕೂಡ ಉಪಸ್ಥಿತರಿದ್ದರು. 

ಮರಾಠಿಯಿಂದ ಆಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment