Thursday, October 2, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಆಚರಿಸಲಾಗುತ್ತಿರುವ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವದ ಮೊದಲನೇ ದಿನದ ಕಾರ್ಯಕಲಾಪಗಳು ಇದೇ ತಿಂಗಳ 2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. 

ಮುಂಬೈನ ದ್ವಾರಕಾಮಾಯಿ ಮಂಡಳಿಯವರು ಸಮಾಧಿ ಮಂದಿರದ ಪ್ರಾಂಗಣದ ಮಹಾದ್ವಾರದಲ್ಲಿ ಭಗವಾನ್ ದತ್ತಾತ್ರೇಯ, ಸ್ವಾಮಿ ಸಮರ್ಥ ಹಾಗೂ ಗಜಾನನ ಮಹಾರಾಜ್ ರವರುಗಳ ವಿಗ್ರಹಗಳನ್ನು ಇರಿಸಿದ್ದು, ಎಲ್ಲಾ ಸಾಯಿ ಭಕ್ತರನ್ನು ಬಹಳವೇ ಆಕರ್ಷಿಸುತ್ತಿವೆ.



2ನೇ ಅಕ್ಟೋಬರ್ 2014, ಗುರುವಾರ ದಂದು ಬೆಳಿಗ್ಗೆ 5 ಗಂಟೆಗೆ ಸಮಾಧಿ ಮಂದಿರದಿಂದ ಶ್ರೀ ಸಾಯಿಬಾಬಾರವರ ಭಾವಚಿತ್ರ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಡನೆ ವಿಧ್ಯುಕ್ತವಾಗಿ ಪ್ರಾರಂಭವಾದವು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಕಾರ್ಯನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸ್ಥಳೀಯ ಗ್ರಾಮಸ್ಥರು ಭಾಗವಹಿಸಿದ್ದರು. 


ಮೆರವಣಿಗೆಯು ದ್ವಾರಕಾಮಾಯಿಯನ್ನು ತಲುಪಿದ ನಂತರ ಶ್ರೀ ಸಾಯಿ ಸಚ್ಚರಿತೆಯ ಅಖಂಡ ಪಾರಾಯಣವನ್ನು ಪ್ರಾರಂಭಿಸಲಾಯಿತು. ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡಿದರೆ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆಯವರು ಎರಡನೇ ಅಧ್ಯಾಯವನ್ನು ಪಾರಾಯಣ ಮಾಡಿ ಅಖಂಡ ಪಾರಾಯಣಕ್ಕೆ ಚಾಲನೆ ನೀಡಿದರು. 


ಅಖಂಡ ಪಾರಾಯಣದ ಸಲುವಾಗಿ 2ನೇ ಅಕ್ಟೋಬರ್ 2014 ರಂದು ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗಿತ್ತು. 

ಬೆಳಿಗ್ಗೆ 7.15 ಕ್ಕೆ  ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಅವರ ಪತ್ನಿಯವರು ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಪಾದ ಪೂಜೆಯನ್ನು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಸಂಜೆ 4.00 ಗಂಟೆಗೆ ಔರಂಗಾಬಾದ್ ನ ಹರಿ ಭಕ್ತ ಪರಾಯಣ ಶ್ರೀ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರು ಕೀರ್ತನೆಯನ್ನು ಮಾಡಿದರು. ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ನಂತರ 7.30 ರಿಂದ  to 10.00 ಗಂಟೆಯವರೆಗೆ ಸಾಯಿನಗರ ಮೈದಾನದಲ್ಲಿ ನಿರ್ಮಿಸಲಾಗಿರುವ ವಿಶೇಷ ವೇದಿಕೆಯಲ್ಲಿ ಶ್ರೀಮತಿ.ರಾಗಿಣಿ ಜಿತೇಂದ್ರ ಕಾಮಾಟಿಕರ್ ರವರಿಂದ   ಭಕ್ತಿಗೀತೆ ಹಾಗೂ ಭಾವಗೀತೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸ್ಥಾನಾದ ವತಿಯಿಂದ ಆಹ್ವಾನಿತ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. 



96ನೇ ಪುಣ್ಯತಿಥಿ ಉತ್ಸವದ ಮುಖ್ಯ ದಿನವಾದ ಶುಕ್ರವಾರ, 3ನೇ ಅಕ್ಟೋಬರ್ 2014 ರಂದು ಲಕ್ಷಾಂತರ ಸಾಯಿ ಭಕ್ತರು ಶಿರಡಿಗೆ ಆಗಮಿಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.

ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವು ದ್ವಾರಕಾಮಾಯಿಯಲ್ಲಿ ಸುಸಂಪನ್ನಗೊಂಡಿತು. ನಂತರ ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಸಮಾಧಿ ಮಂದಿರಕ್ಕೆ ತರಲಾಯಿತು. ಈ ಮೆರವಣಿಗೆಯಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಶಿರಡಿಯ ಗ್ರಾಮಸ್ಥರುಗಳು ಭಾಗವಹಿಸಿದ್ದರು.

ಬೆಳಿಗ್ಗೆ 9.00 ಗಂಟೆಗೆ ಭಿಕ್ಷಾ ಜೋಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಈ ಕಾರ್ಯಕ್ರಮದಲ್ಲಿ  ಶ್ರೀ ಸಾಯಿಬಾಬಾ ಸಂಸ್ಥಾನದ ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಶಿರಡಿಯ ಗ್ರಾಮಸ್ಥರು ಹಾಗೂ ಸಾವಿರಾರು ಮಂದಿ ಸಾಯಿ ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ 10.00 ಗಂಟೆಗೆ ಸಮಾಧಿ ಮಂದಿರದ ವೇದಿಕೆಯಲ್ಲಿ ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಕೀರ್ತನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 10.30 ಕ್ಕೆ ಸಮಾಧಿ ಮಂದಿರದಲ್ಲಿ ಆರಾಧನಾ ವಿಧಿ ಹಾಗೂ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.  ಇದನ್ನು ತ್ರಿ-ಸದಸ್ಯ ಸಮಿತಿಯ ಸದಸ್ಯರೂ ಹಾಗೂ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಅನಿಲ್ ಕಾವಡೆಯವರು ನೆರವೇರಿಸಿದರು. ಮಧ್ಯಾನ್ಹ 12.30 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು. ಆರತಿಯ ನಂತರ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಮರಾಠಿ ಭಾಷೆಯಲ್ಲಿ ರಚಿಸಿದ್ದ "ಸಾಯಿ ಚರಿತ್ರ ದರ್ಶನ" ಎಂಬ ಪುಸ್ತಕದ ಅಸ್ಸಾಮಿ ಅನುವಾದಿತ ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರಾಗಿದ್ದ ಶ್ರೀ.ಡಿ.ಎಂ.ಸುಕ್ತಾನಕರ್, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾಸಾಹೇಬ್ ಶಿಂಧೆ, ನಿರ್ವಾಹಕ ಅಧಿಕಾರಿಗಳಾದ ಶ್ರೀ.ಬಿ.ಡಿ.ಸಬಲೆ, ಶ್ರೀ.ಎಸ್.ಎನ್.ಗಾರ್ಕಲ್, ಶ್ರೀ.ಎಸ್.ವಿ.ಗಮೆ, ಶ್ರೀ.ಡಿ.ಟಿ.ಉಗಲೆ, ಶ್ರೀ.ಯು.ಪಿ.ಗೋಂದ್ಕರ್, ಎಲ್ಲಾ ವಿಭಾಗದ ಮುಖ್ಯಸ್ಥರೂ ಭಾಗವಹಿಸಿದ್ದರು. ಸಂಜೆ 5 ಗಂಟೆಗೆ ಖಂಡೋಬ ಮಂದಿರಕ್ಕೆ ಮೆರವಣಿಗೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸಂಜೆ 6.15 ಕ್ಕೆ ಧೂಪಾರತಿ ಹಮ್ಮಿಕೊಳ್ಳಲಾಗಿತ್ತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ ಭೂಪಾಲ್ ನ ಶ್ರೀ.ಸತ್ಯನಾರಾಯಣ ನಾಯರ್ ರವರಿಂದ ಭಜನೆ ಮತ್ತು ಘಜಲ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಯಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನಂದಿಸಿದರು. ರಾತ್ರಿ 9.15 ಕ್ಕೆ ಶಿರಡಿ ಗ್ರಾಮದ ಸುತ್ತಲೂ ಶ್ರೀ ಸಾಯಿಬಾಬಾರವರ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿರಡಿಯ ಗ್ರಾಮಸ್ಥರು  ಹಾಗೂ ಸಾಯಿ ಭಕ್ತರುಗಳು ಭಾಗವಹಿಸಿದ್ದರು.



ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಸಾಯಿಬಾಬಾ ಪೇಪರ್ ಪ್ರಾಡಕ್ಟ್ಸ್ ನ ಶ್ರೀ.ಆರ್.ಶರವಣರವರು ನೀಡಿದ ಉದಾದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಹಾಗೂ ದೇವಾಲಯದ ಆವರಣವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು.



3ನೇ ಅಕ್ಟೋಬರ್ 2014 ಮುಖ್ಯ ದಿನವಾದ ಕಾರಣ ಸಮಾಧಿ ಮಂದಿರವನ್ನು ರಾತ್ರಿಯಿಡೀ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗಿತ್ತು.

2ನೇ ಅಕ್ಟೋಬರ್ 2014, ಗುರುವಾರ ದಂದು ಪ್ರಾರಂಭವಾದ ಶ್ರೀ ಸಾಯಿಬಾಬಾರವರ 96ನೇ ಮಹಾ ಸಮಾಧಿ ಉತ್ಸವವು 4ನೇ ಅಕ್ಟೋಬರ್ 2014, ಶನಿವಾರ ದಂದು ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರ ಕಲ್ಯಾಚ ಕೀರ್ತನೆ ಹಾಗೂ ದಹಿ ಹಂಡಿ ಕಾರ್ಯಕ್ರಮಗಳೊಂದಿಗೆ ಸಂಪೂರ್ಣವಾಯಿತು.

ಆ ದಿನ ಬೆಳಿಗ್ಗೆ ಗುರುಸ್ಥಾನದಲ್ಲಿ ಪ್ರತಿಷ್ಟಾಪಿಸಲಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕವನ್ನು ಹಾಗೂ ಸಮಾಧಿ ಮಂದಿರದಲ್ಲಿ ಪಾದ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ಮತ್ತು ಅವರ ಧರ್ಮಪತ್ನಿಯವರು ನೆರವೇರಿಸಿದರು. ಬೆಳಿಗ್ಗೆ 10.00 ಗಂಟೆಗೆ  ಶ್ರೀ.ಹೆಚ್.ಬಿ.ಪಿ.ಮನೋಹರ ಬುವಾ ಬಾಲಕೃಷ್ಣ ದೀಕ್ಷಿತ್ ರವರಿಂದ ಗೋಪಾಲಕಾಲ ಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾನ್ಹ 12.00 ದಹಿ ಹಂಡಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧ್ಯಾನ್ಹ 12.10 ಕ್ಕೆ ಮಧ್ಯಾನ್ಹ ಆರತಿಯನ್ನು ನೆರವೇರಿಸಲಾಯಿತು.  ಸಂಜೆ 6.15 ಕ್ಕೆ ಧೂಪಾರತಿಯನ್ನು ನೆರವೇರಿಸಲಾಯಿತು. ಸಂಜೆ 7.30 ರಿಂದ ರಾತ್ರಿ 10.00  ಗಂಟೆಯವರೆಗೆ ಸಾಯಿ ನಗರದ ಮೈದಾನದಲ್ಲಿ  ದೊರ್ಹಾಳೆಯ ಶ್ರೀ.ಶ್ರವಣ್ ಮಾಧವ ಚೌಧರಿಯವರಿಂದ ಸಾಯಿ ಕಥಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.




ಹಲವಾರು ಸಾಯಿ ಭಕ್ತರುಗಳು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಉತ್ಸವದ ಮೂರೂ ದಿನಗಳಂದು ಶ್ರೀ ಸಾಯಿ ಪ್ರಸಾದಾಲಯದಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಉಚಿತ ಮಹಾಪ್ರಸಾದ ಭೋಜನವನ್ನು ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಐವತ್ತು ಸಾವಿರಕ್ಕೂ ಹೆಚ್ಚು ಸಾಯಿ ಭಕ್ತರು ಈ ಉಚಿತ ಪ್ರಸಾದ ಭೋಜನದ ಪ್ರಯೋಜನವನ್ನು ಪಡೆದರು. ಸಾಯಿಬಾಬಾರವರ  ದರ್ಶನವನ್ನು ಪಡೆದ ಸುಮಾರು ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಲಾಡು ಪ್ರಸಾದದ ಪೊಟ್ಟಣಗಳನ್ನು  ದರ್ಶನದ ಸಾಲಿನಲ್ಲಿ ವಿತರಿಸಲಾಯಿತು. ಉತ್ಸವದ ಮುಖ್ಯ ದಿನದಂದು ಬೆಳಿಗ್ಗೆ 9.00 ಕ್ಕೆ ಆಯೋಜಿಸಿದ್ದ ಭಿಕ್ಷಾ ಜೋಳಿ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ  ಭಾಗವಹಿಸಿದ್ದ ಸ್ಥಳೀಯರು ಹಾಗೂ ಸಾಯಿಭಕ್ತರು 59,000 ರೂಪಾಯಿ ನಗದು ಹಾಗೂ 61 ಚೀಲಗಳಷ್ಟು ಅಕ್ಕಿ, ರಾಗಿ ಮತ್ತು ಗೋಧಿಯನ್ನು ಭಿಕ್ಷೆಯ ರೂಪದಲ್ಲಿ ನೀಡಿದರು.

ಎಂದಿನಂತೆ ಈ ವರ್ಷವೂ ಶ್ರೀ ಸಾಯಿಬಾಬಾರವರ ಮಹಾಸಮಾಧಿಯ ಮುಖ್ಯ ದಿನದಂದು ಶಿರಡಿಯ ಗ್ರಾಮಷ್ಟರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ವಿಶೇಷ ಭೋಜನವನ್ನು ಶ್ರೀ ಸಾಯಿಬಾಬಾ ಪ್ರಸಾದಾಲಯದಲ್ಲಿ ಏರ್ಪಡಿಸಲಾಗಿತ್ತು.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ ನಾಗರಾಜ್ ಅನ್ವೇಕರ್ 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment