Friday, October 10, 2014

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಉಮಾ ಅಂದೋಳ ಆಸ್ಪತ್ರೆಯ ಪಕ್ಕ, ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ, ಗುಲ್ಬರ್ಗ-585 101,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರದ ಭೂಮಿ ಪೂಜೆಯನ್ನು 26ನೇ ಆಗಸ್ಟ್  2007 ರಂದು ನೆರವೇರಿಸಲಾಯಿತು.

ಈ ಮಂದಿರವನ್ನು 15ನೇ ಡಿಸೆಂಬರ್ 2009 ರಂದು  ಮಂದಿರದ ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 80x120 ಚದರ ಅಡಿ ವಿಸ್ತೀರ್ಣವಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಎ.ಬಿ.ನರಸಿಂಹಾಚಾರ್ಯ ಅವರು ಮಂದಿರದ ಮುಖ್ಯ ಪುರೋಹಿತರಾಗಿರುತ್ತಾರೆ. ಅವರೇ  ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 4 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು. ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತ ಶಿಲೆಯಲ್ಲಿ ಮಾಡಿದ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವು ಪ್ರತಿ ಗುರುವಾರದಂದು ಬೆಳಿಗ್ಗೆ 6:00 ರಿಂದ 11:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 5:30 ರಿಂದ ರಾತ್ರಿ 9:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಇನ್ನಿತರ ದಿನಗಳಲ್ಲಿ ಮಂದಿರವು ಬೆಳಿಗ್ಗೆ 7:00 ರಿಂದ 9:00 ಗಂಟೆಯವರೆಗೆ ಹಾಗೂ ಪುನಃ ಸಾಯಂಕಾಲ 6:00 ರಿಂದ 8:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ:

ಸಂಜೆ : 6:30 ಗಂಟೆ

ಪ್ರತಿ ಗುರುವಾರಗಳಂದು ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಅಲ್ಲದೇ, ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ವಿಶೇಷ ಅಭಿಷೇಕವನ್ನು ಹಮ್ಮಿಕೊಳ್ಳಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 26ನೇ ಆಗಸ್ಟ್ ಮಂದಿರದ ವಾರ್ಷಿಕೋತ್ಸವ. 
2.ಹೊಸವರ್ಷ. 
3.ಯುಗಾದಿ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಎಂ.ಜಿ. ರಸ್ತೆಯಲ್ಲಿರುವ ಗುಬ್ಬಿ ಕಾಲೋನಿಯಲ್ಲಿರುವ ಉಮಾ ಅಂದೋಳ ಆಸ್ಪತ್ರೆಯ ಪಕ್ಕದಲ್ಲಿರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 3 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಉಮಾ ಅಂದೋಳ ಆಸ್ಪತ್ರೆಯ ಪಕ್ಕ, 
ಗುಬ್ಬಿ ಕಾಲೋನಿ, ಎಂ.ಜಿ.ರಸ್ತೆ,  
ಗುಲ್ಬರ್ಗ-585 101,
ಕರ್ನಾಟಕ, ಭಾರತ. 

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಎ.ಬಿ.ನರಸಿಂಹಾಚಾರ್ಯ  - ಪುರೋಹಿತರು

ದೂರವಾಣಿ ಸಂಖ್ಯೆ: 

+91 97317 75345


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment