Thursday, October 2, 2014

ಶಿರಡಿ ಸಮಾಧಿ ಮಂದಿರದಿಂದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರ - ಕೃಪೆ: ಸಾಯಿಅಮೃತಧಾರಾ. ಕಾಂ

ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ  96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್ ರವರು ಇದೇ ತಿಂಗಳ  1ನೇ ಅಕ್ಟೋಬರ್ 2014 ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಶ್ರೀ ಸಾಯಿಬಾಬಾ ಸಂಸ್ಥಾನವು ಹಲವಾರು ವರ್ಷಗಳಿಂದ ಆರಾಧನಾ ವಿಧಿ ಮತ್ತು ಪೂಜೆಗಳನ್ನು ಸಮಾಧಿ ಮಂದಿರದ ಮೊದಲನೇ ಮಹಡಿಯಲ್ಲಿ ನಡೆಸಿಕೊಂಡು ಬರುತ್ತಿದೆ. ಶ್ರೀ ಸಾಯಿಬಾಬಾರವರ ಸಮಾಧಿಯ ಸ್ಥಳವಾದ ಬೂಟಿವಾಡಾಕ್ಕೆ 2018ನೇ ಇಸವಿಗೆ ಸರಿಯಾಗಿ 100 ಸಂವತ್ಸರಗಳು ತುಂಬಲಿದೆ. ಈ ಪರಮ ಪವಿತ್ರ  ಸ್ಥಳದ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಇಷ್ಟು ವರ್ಷಗಳಿಂದ  ಸಮಾಧಿ ಮಂದಿರದಿಂದ ನೇರ ಪ್ರಸಾರವನ್ನು ಮಾಡುತ್ತಿರಲಿಲ್ಲ. ಆದರೆ, ಈ ವರ್ಷದಿಂದ  ಸಾಯಿ ಭಕ್ತರು ಹಾಗೂ ಶಿರಡಿಯ ಸ್ಥಳೀಯ ಗ್ರಾಮಸ್ಥರ ಅನೂಕೂಲಕ್ಕಾಗಿ  ಸಿಸಿ ಟಿವಿಯ ಮೂಲಕ 2ನೇ ಅಕ್ಟೋಬರ್ 2014 ರಿಂದ  4ನೇ ಅಕ್ಟೋಬರ್  2014 ರವರೆಗೆ  ಶಿರಡಿ ಸಮಾಧಿ ಮಂದಿರದಲ್ಲಿ ನಡೆಯುವ  ಶ್ರೀ ಸಾಯಿಬಾಬಾರವರ 96ನೇ ಮಹಾಸಮಾಧಿ ಉತ್ಸವದ ಆರಾಧನಾ ವಿಧಿ ಮತ್ತು ಪೂಜೆಗಳ ನೇರ ಪ್ರಸಾರವನ್ನು ಮಾಡುತ್ತಿದ್ದೇವೆ. ಆರಾಧನಾ ವಿಧಿ ಮತ್ತು ಪೂಜೆಯನ್ನು ಸಲ್ಲಿಸುತ್ತಿರುವವರು ಹಾಗೂ ನಾಮ ನಿರ್ದೇಶನ ಮಾಡಿದ ಕೆಲವು ಬ್ರಾಹ್ಮಣ ದಂಪತಿಗಳನ್ನು ಹೊರತುಪಡಿಸಿ, ಇತರ ಯಾರಿಗೂ ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ ಸಮಯದಲ್ಲಿ ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ. ಈ ಆರಾಧನಾ ವಿಧಿ ಮತ್ತು ಪೂಜೆಯನ್ನು ನೆರವೇರಿಸಿದ ಮೇಲಿನ ಎಲ್ಲರಿಗೂ ಹಾಗೂ ಕೆಲವು ಗಣ್ಯ ವ್ಯಕ್ತಿಗಳು ಮತ್ತು ಸ್ಥಳೀಯರಿಗೆ ಸಾಯಿ ಪ್ರಸಾದಾಲಯದ ವಿಐಪಿ ವಿಭಾಗದಲ್ಲಿ ಪ್ರಸಾದ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದ ಕಾರಣ, ಯಾವ ಸಾಯಿ ಭಕ್ತರೂ ದರ್ಶನದ ಸಾಲಿನಲ್ಲಿ ಬರುವಾಗ  ಆರಾಧನಾ ವಿಧಿ ಮತ್ತು ಪೂಜೆ ನಡೆಯುತ್ತಿರುವ  ಸಮಾಧಿ ಮಂದಿರದ ಮೊದಲನೇ ಮಹಡಿಗೆ ಪ್ರವೇಶ ಮಾಡದೇ ಶ್ರೀ ಸಾಯಿಬಾಬಾ ಸಂಸ್ಥಾನದೊಂದಿಗೆ ಸಹಕರಿಸಬೇಕೆಂದು ಶ್ರೀ ಜಾಧವ್ ರವರು ಈ ಮೂಲಕ  ಮನವಿ ಮಾಡಿಕೊಂಡಿದ್ದಾರೆ.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment