Friday, October 10, 2014

ಗುಲ್ಬರ್ಗಾದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ, ಕರುಣೇಶ್ವರ ನಗರ, ಗುಲ್ಬರ್ಗ-585 103,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ಈ ಮಂದಿರವನ್ನು 17ನೇ ಫೆಬ್ರವರಿ 2000 ದಂದು  ಶ್ರೀ.ಸದಾಶಿವ ಮಹಾರಾಜ್ ರವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ ಒಂದು ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಸತೀಶ್ ವಿ.ಗುತ್ತೇದಾರ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು   ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು.





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 5:15 ರಿಂದ ರಾತ್ರಿ 10:30 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 5:15 AM
ಛೋಟಾ ಆರತಿ  : 7:15 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  6:30 PM
ಶೇಜಾರತಿ        : 10:00 PM

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 17ನೇ ಫೆಬ್ರವರಿ ಮಂದಿರದ ವಾರ್ಷಿಕೋತ್ಸವ.
2.ಶ್ರೀರಾಮನವಮಿ.
3.ಗುರುಪೂರ್ಣಿಮೆ.
4.ವಿಜಯದಶಮಿ.

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ಗುಲ್ಬರ್ಗ ನಗರದ ಜೇವರ್ಗಿ ರಸ್ತೆಯಲ್ಲಿರುವ ಕರುಣೇಶ್ವರ ನಗರದಲ್ಲಿರುವ ರಾಮ ಮಂದಿರದ ಹತ್ತಿರ ಇರುತ್ತದೆ. ಮಂದಿರವು ಗುಲ್ಬರ್ಗ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ರೈಲು ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಇರುತ್ತದೆ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, 
ಜೇವರ್ಗಿ ರಸ್ತೆ, ರಾಮ ಮಂದಿರದ ಹತ್ತಿರ,
ಕರುಣೇಶ್ವರ ನಗರ,
ಗುಲ್ಬರ್ಗ-585 103,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಡಾ.ಎನ್.ಜಿ.ಗಚ್ಚಿಮನಿ/ಶ್ರೀ.ರಾಜು ಬಿ.ಕುಲಕರ್ಣಿ

ದೂರವಾಣಿ ಸಂಖ್ಯೆ: 

+91 98453 84774/+91 98807 85872


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment