Monday, August 6, 2012

ಗುರುಪೂರ್ಣಿಮೆಯ ಅಂಗವಾಗಿ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳ ಆಗಮನದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಗುರುಪೂರ್ಣಿಮೆಯ ಅಂಗವಾಗಿ ಶಿರಡಿ ಸಾಯಿಬಾಬಾರವರು ನಿಮೋಣ್ಕರ್ ರವರಿಗೆ ನೀಡಿದ  ಪವಿತ್ರ ಪಾದುಕೆಗಳನ್ನು ಕಳೆದ ತಿಂಗಳ 1ನೇ ಜುಲೈ 2012, ಭಾನುವಾರದಿಂದ 6ನೇ ಜುಲೈ 2012, ಶುಕ್ರವಾರದವರಗೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಪೂಜೆ ಹಾಗೂ ದರ್ಶನಕ್ಕಾಗಿ ಇರಿಸಲಾಗಿತ್ತು. 



ಸಾಯಿ ಮಹಾಭಕ್ತರಾದ ಶ್ರೀ.ನಾನಾ ಸಾಹೇಬ್ ನಿಮೋಣ್ಕರ್ ರವರ ಮರಿಮಗನಾದ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ, ಶ್ರೀ ಸಾಯಿಸಚ್ಚರಿತ್ರೆಯನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಶ್ರೀ.ಅನಂತರಾಮು ಮತ್ತು ತಮಿಳುನಾಡಿನ ತಿರುವಲನ್ಗಾಡಿನ ಶ್ರೀ ಶಿವ ಸಾಯಿ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ.ಸಾಯಿ ಸುಗುಣ ವೆಂಕಟರಾಮನ್ ರವರುಗಳು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ಸಾಯಿಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದು ಸಾಯಿಬಾಬಾರವರ ಕೃಪೆಗೆ ಪಾತ್ರರಾದರು. 

 





ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment