Monday, August 6, 2012

ಶಿರಡಿಯ ಗುರುಸ್ಥಾನ ಮಂದಿರದಲ್ಲಿ ಪಾದುಕೆಗಳ ಪ್ರತಿಷ್ಟಾಪನೆಯ ಶತಮಾನೋತ್ಯವದ ಆಚರಣೆ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿರಡಿಯ ಗುರುಸ್ಥಾನ ಮಂದಿರದಲ್ಲಿ ಪಾದುಕೆಗಳ ಪ್ರತಿಷ್ಟಾಪನೆಯ ಶತಮಾನೋತ್ಯವದ ಆಚರಣೆಯ ಅಂಗವಾಗಿ ಇದೇ ತಿಂಗಳ 1ನೇ ಆಗಸ್ಟ್ 2012, ಬುಧವಾರದಂದು ಸಾಯಿಬಾಬಾರವರ ಭಾವಚಿತ್ರವನ್ನು ಸಮಾಧಿ ಮಂದಿರದಿಂದ ಗುರುಸ್ಥಾನ ಮಂದಿರಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ, ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿ, ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಮತ್ತು ದೇವಾಲಯದ ಮುಖ್ಯಸ್ಥರಾದ ಶ್ರೀ.ರಾಮರಾವ್ ಶೆಲ್ಕೆಯವರುಗಳು ಉಪಸ್ಥಿತರಿದ್ದರು.


ಶಿರಡಿಯ ಗುರುಸ್ಥಾನ ಮಂದಿರದಲ್ಲಿ ಪಾದುಕೆಗಳ ಪ್ರತಿಷ್ಟಾಪನೆಯ ಶತಮಾನೋತ್ಯವದ ಆಚರಣೆಯ ಅಂಗವಾಗಿ ಇದೇ ತಿಂಗಳ 1ನೇ ಆಗಸ್ಟ್ 2012, ಬುಧವಾರದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಶ್ರೀ.ಜಯಂತ್ ಕುಲಕರ್ಣಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿಯವರು ಮಹಾ ರುದ್ರಾಭಿಷೇಕವನ್ನು ನೆರವೇರಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment