Friday, July 29, 2011

ಬೆಂಗಳೂರು, ಮೈಸೂರು, ಮತ್ತು ಕೋಲಾರ ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಪೂಜೆ - 19ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರು ನಾನಾ ಸಾಹೇಬ್ ನಿಮೋಣ್ಕರ್ ರವರಿಗೆ ನೀಡಿದ್ದ ಪವಿತ್ರ ಪಾದುಕೆಗಳನ್ನು ಸಾಯಿಭಕ್ತರ ದರ್ಶನಕ್ಕೊಸ್ಕರ ಬೆಂಗಳೂರು, ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಅನೇಕ ಸಾಯಿಬಾಬಾ ದೇವಸ್ಥಾನ ಹಾಗೂ ಸಾಯಿ ಭಕ್ತರ ಮನೆಗಳಿಗೆ ಇದೇ ತಿಂಗಳ 14ನೇ ಜುಲೈ 2011 ರಿಂದ 19ನೇ ಜುಲೈ 2011 ರ ವರೆಗೆ ತರಲಾಗಿತ್ತು.  ಪವಿತ್ರ ಪಾದುಕೆಗಳನ್ನು ನಿಮೋಣ್ಕರ್ ವಂಶಸ್ಥರಾದ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ (ನಿಮೋಣ್ಕರ್) ರವರು ಶಿರಡಿಯ ಸಮೀಪದ ನಿಮೋಣ್ ಗ್ರಾಮದಿಂದ ತೆಗೆದುಕೊಂಡು ಬಂದಿದ್ದರು. 

ಪಾದುಕೆಗಳನ್ನು ಹೊಂದಿರುವ ಶ್ರೀ.ನಂದಕುಮಾರ್ ರೇವನ್ನಾಥ್ ದೇಶಪಾಂಡೆ (ನಿಮೋಣ್ಕರ್)

ಸಾವಿರಾರು ಸಾಯಿ ಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ದರ್ಶನವನ್ನು ಪಡೆದರು. 

1. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸಾಯಿಭಕ್ತ ಸುಬ್ರಮಣಿಯವರ  ಮನೆಯಲ್ಲಿ  ಇದೇ ತಿಂಗಳ 14ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು.




2. ಕರ್ನಾಟಕದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ಸಾಯಿಬಾಬಾ ಮಂದಿರದಲ್ಲಿ ಇದೇ ತಿಂಗಳ 16ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು.  ಅದರ ಪತ್ರಿಕಾ ವರದಿ ಸಂಯಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ 17ನೇ ಜುಲೈ 2011 ರಂದು ಪ್ರಕಟವಾಯಿತು. ಅಲ್ಲದೆ, ಸ್ಥಳೀಯ ಕೇಬಲ್ ವಾಹಿನಿಯಾದ ಪಲ್ಲವಿ ವಾರ್ತೆಯವರು ಪಾದುಕಾ ಪೂಜೆಯ ದೃಶ್ಯವನ್ನು ಸ್ಥಳೀಯ ಕೇಬಲ್ ಜಾಲದಲ್ಲಿ 16ನೇ ಜುಲೈ 2011 ರಂದು ನೇರಪ್ರಸಾರ ಮಾಡಿದರು.


 ಬಂಗಾರಪೇಟೆಯ ಸಾಯಿಮಂದಿರದ ಪಾದುಕ ಪೂಜೆಯ ವೀಡಿಯೋ (ಕೃಪೆ: ಪಲ್ಲವಿ ವಾರ್ತೆ) 

3.ಮೈಸೂರಿನ ರಾಮಕೃಷ್ಣ ನಗರದ ಸಾಯಿಬಾಬಾ ಮಂದಿರದಲ್ಲಿ ಇದೇ ತಿಂಗಳ 17ನೇ ಜುಲೈ 2011 ರಂದು ಪಾದುಕಾ ಪೂಜೆಯನ್ನು ನಡೆಸಲಾಯಿತು. 







4.ಮೈಸೂರಿನ ಸಾಯಿಭಕ್ತ ಶ್ರೀ.ಶೇಷಾದ್ರಿಯವರ  ಮನೆಯಲ್ಲಿ  ಇದೇ ತಿಂಗಳ 18ನೇ ಜುಲೈ 2011 ರಂದು  ಪಾದುಕಾ ಪೂಜೆಯನ್ನು ನಡೆಸಲಾಯಿತು. ಬೆಳಗಿನ ಕಾಕಡಾ ಆರತಿ ಮತ್ತು ಪಾದುಕೆಗಳಿಗೆ ಅಭಿಷೇಕವನ್ನು ಕೂಡ ಇವರ ಮನೆಯಲ್ಲಿ ನೆರವೇರಿಸಲಾಯಿತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment