Tuesday, July 26, 2011

ಬೆಂಗಳೂರಿನಲ್ಲಿ ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಪ್ರದರ್ಶನ - ಕೃಪೆ: ಸಾಯಿಅಮೃತಧಾರಾ.ಕಾಂ 

ಬೆಂಗಳೂರಿನ ಕೋರಮಂಗಲದಲ್ಲಿರುವ ಶಿರಡಿ ಸಾಯಿ ಪರಿವಾರ್ ಟ್ರಸ್ಟ್ (ನೋಂದಣಿ) ಯ ವತಿಯಿಂದ ಇದೇ ತಿಂಗಳ 31ನೇ ಜುಲೈ 2011, ಭಾನುವಾರದಂದು ಸಾಯಿ ಸಚ್ಚರಿತೆ ಆಧಾರಿತ ಹಿಂದಿ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಪ್ರದರ್ಶನವನ್ನು  ಏರ್ಪಡಿಸಲಾಗಿದೆ. ಶಿರಡಿಯ ಬಳಿಯ ಶ್ರೀರಾಮಪುರದ ಖ್ಯಾತ ನಾಟಕಕಾರರಾದ ಶ್ರೀ.ಬಬ್ಲು ದುಗ್ಗಲ್ ಮತ್ತು ತಂಡದವರು ಈ ನಾಟಕವನ್ನು ನಡೆಸಿಕೊಡಲಿದ್ದಾರೆ. 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗ್ಗತಿಸಲಾಗಿದೆ. 


ಈ ನಾಟಕಕ್ಕೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಮತ್ತು ನಾಟಕದ ಕೊನೆಯಲ್ಲಿ ಸಾಯಿ ಮಹಾಪ್ರಸಾದದ ವ್ಯವಸ್ಥೆ ಕೂಡ ಇರುತ್ತದೆ. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಸುಂದರ ನಾಟಕವನ್ನು ವೀಕ್ಷಿಸಬೇಕೆಂದು ಈ ಮುಖಾಂತರ ಟ್ರಸ್ಟ್ ನ ಪದಾಧಿಕಾರಿಗಳು ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment