Tuesday, July 26, 2011

ಬೆಂಗಳೂರಿನಲ್ಲಿ ಗುರುಪೂರ್ಣಿಮಾ ಉತ್ಸವದ ಆಚರಣೆ - ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ  

ತ್ಯಾಗರಾಜನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದ ವತಿಯಿಂದ 14ನೇ ಜುಲೈ 2011 ಮತ್ತು 15ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲ ದಿನವಾದ 14ನೇ ಜುಲೈ 2011 ರಂದು ವಿವಿಧ ಸಾಯಿ ಭಜನಾ ವೃಂದದವರಿಂದ ಬೆಳಿಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಾರನೆಯ ದಿನವಾದ 15ನೇ ಜುಲೈ 2011 ರಂದು ವ್ಯಾಸ ಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. 




ಜಯನಗರದ 4ನೇ ಟಿ ಬ್ಲಾಕ್ ಬಡಾವಣೆಯ ಸಾಯಿಬಾಬಾ ಮಂದಿರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ 14ನೇ ಜುಲೈ 2011 ರಂದು ಸಂಜೆ 6:30 ರಿಂದ 8 :30 ರವರೆಗೆ  ಶ್ರೀಮತಿ.ಸರಸ್ವತಿ ಮತ್ತು ವೃಂದದವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  



ಬೆಂಗಳೂರು ಗ್ರಾಮಾಂತರದ ತೋಕತಿಮ್ಮನದೊಡ್ಡಿಯ ಸಾಯಿಮಂದಿರದ ವತಿಯಿಂದ 15ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಸುತ್ತಮುತ್ತಲ ಹಳ್ಳಿಯ ಸುಮಾರು 25   ಮಹಿಳಾ ಭಜನಾ ವೃಂದದವರಿಂದ ಬೆಳಿಗ್ಗೆ 9 ಘಂಟೆಯಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.


ಶ್ರೀ.ದ್ವಾರಕಾಮಾಯಿ ಸೇವಾ ಟ್ರಸ್ಟ್ (ನೋಂದಣಿ), ರಾಜಾಜಿನಗರದ ವತಿಯಿಂದ 15ನೇ ಜುಲೈ 2011 ರಂದು ರಾಜಾಜಿನಗರದ ರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವ ಮತ್ತು ಟ್ರಸ್ಟ್ ನ 3ನೇ ವಾರ್ಷಿಕೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಯಿತು. ಆ ದಿನ ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ.ವಿನಯ ಚಂದ್ರ ಮೆನನ್ ಮತ್ತು ವೃಂದದವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಜೆ ಸಾಯಿಬಾಬಾರವರ ಹೂವಿನ ಪಲ್ಲಕ್ಕಿಯ ಉತ್ಸವವನ್ನು ರಾಜಾಜಿನಗರದ 3ನೇ ಬ್ಲಾಕ್ ನ ಹಲವು ರಸ್ತೆಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು. 



 ಜರಗನಹಳ್ಳಿಯ ಗಂಗಾಧರೇಶ್ವರ ದೇವಾಲಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ 15ನೇ ಜುಲೈ 2011 ರಂದು ಸಂಜೆ 6 ಘಂಟೆಯಿಂದ ರಾತ್ರಿ 8:30 ರವರೆಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.ದತ್ತಾತ್ರೇಯ, ಸಾಯಿಬಾಬಾ ಮತ್ತು ದಕ್ಷಿಣಾಮುರ್ತಿ ದೇವರುಗಳಿಗೆ ಷೋಡಚೋಪಚಾರ ಪೂಜೆ, ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು. ನಂತರ "ಸಾಯಿ ರಕ್ಷಾ ಹೋಮ" ವನ್ನು ಆಚರಿಸಿ ನೆರೆದ ಎಲ್ಲ ಸಾಯಿ ಭಕ್ತರಿಗೂ ಪ್ರಸಾದ ವಿನಿಯೋಗವನ್ನು ಮಾಡಲಾಯಿತು. 


 ಜೆ.ಪಿ.ನಗರದ 3ನೇ ಹಂತದಲ್ಲಿರುವ ಸಾಯಿ ಭಕ್ತರಾದ ಶ್ರೀ.ಸಾಯಿ ಮೋಹನ್ ರವರ ಮನೆಯಲ್ಲಿ 15ನೇ ಜುಲೈ 2011 ರಂದು ಗುರುಪೂರ್ಣಿಮೆಯ ಅಂಗವಾಗಿ ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್ ಮತ್ತು ಶ್ರೀ.ಶಿವಚರಣ್ ರವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 



ವಸಂತಪುರದ ಸಾಯಿ ಆಧ್ಯಾತ್ಮಿಕ ಕೇಂದ್ರದ ವತಿಯಿಂದ 15ನೇ ಜುಲೈ 2011 ಮತ್ತು 16ನೇ ಜುಲೈ 2011 ರಂದು ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲ ದಿನವಾದ 15ನೇ ಜುಲೈ 2011 ರಂದು ವ್ಯಾಸ ಪೂಜೆ ಮತ್ತು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾರನೆಯ ದಿನವಾದ 16ನೇ ಜುಲೈ 2011 ರಂದು  ವಿವಿಧ ಸಾಯಿ ಭಜನಾ ವೃಂದದವರಿಂದ ಸಂಜೆ 4:30 ರಿಂದ ರಾತ್ರಿ 9 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.  

ಶ್ರೀಮತಿ.ಸುವೇದಿತಾ ಶ್ರೀಧರ್ ಮತ್ತು ವೃಂದದವರು, ಶ್ರೀ.ಗಂಗಾಧರ ತಿಲಕ್, ಶ್ರೀ.ಕಾರ್ತಿಕ್ ಮತ್ತು ಶ್ರೀ.ಶಿವಚರಣ್ ಮತ್ತು ಶಂಕರ ಸಾಯಿ ಭಜನ ಮಂಡಳಿಯವರಿಂದ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.




ಕನ್ನಡ ಅನುವಾದ: ಶ್ರೀಕಂಠ ಶರ್ಮ 


No comments:

Post a Comment