Monday, July 4, 2011

ಗುರುಪೂರ್ಣಿಮೆಯ ಅಂಗವಾಗಿ ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶಿರಡಿ ಸಾಯಿಬಾಬಾರವರ ಪವಿತ್ರ ಪಾದುಕೆಗಳ ಆಗಮನ - 4ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಗುರುಪೂರ್ಣಿಮೆಯ ಅಂಗವಾಗಿ ಸಾಯಿಬಾಬಾರವರ ಪವಿತ್ರ ಪಾದುಕೆಗಳನ್ನು ಇದೇ ತಿಂಗಳ 14 ಜುಲೈ 2011 ರಂದು ಶಿರಡಿಯಿಂದ ಬೆಂಗಳೂರಿಗೆ  ತರಲಾಗುತ್ತಿದ್ದು 14ನೇ ಜುಲೈ 2011 ರಿಂದ 19ನೇ ಜುಲೈ 2011 ರವರಗೆ ಪವಿತ್ರ ಪಾದುಕೆಗಳು ಬೆಂಗಳೂರು, ಕೋಲಾರ ಮತ್ತು ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಾಯಿ ಮಂದಿರಗಳಲ್ಲಿ ಮತ್ತು ಭಕ್ತರ ಮನೆಗಳಲ್ಲಿ ದರ್ಶನಕ್ಕೆ ಲಭ್ಯವಿರುತ್ತದೆ.

ಸಾಯಿಭಕ್ತರು ಈ ಸುವರ್ಣಾವಕಾಶವನ್ನು ಉಪಯೋಗಿಸಿಕೊಂಡು ಸಾಯಿಬಾಬಾರವರ ಪಾದುಕೆಗಳ ದರ್ಶನವನ್ನು ಪಡೆದು ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ. 

ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ಲಗತ್ತಿಸಿರುವ ಆಮಂತ್ರಣ ಪತ್ರವನ್ನು ಸಾಯಿಭಕ್ತರು ನೋಡಬಹುದು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment