Tuesday, July 26, 2011

ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಗುರುಪೂರ್ಣಿಮೆಯ ಆಚರಣೆ -  14ನೇ ಜುಲೈ 2011 ಇಂದ 16ನೇ ಜುಲೈ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ  14ನೇ ಜುಲೈ 2011 ರಿಂದ 16ನೇ ಜುಲೈ 2011 ರ ವರೆಗೆ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 

ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಸಾಯಿ ಸಚ್ಚರಿತ್ರೆ, ವೀಣೆ ಮತ್ತು ಸಾಯಿಬಾಬಾರವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಉಪ ಕಾರ್ಯಕಾರಿ ಅಧಿಕಾರಿಯಾದ ಡಾ.ಯಶವಂತ್ ರಾವ್ ಮಾನೆ ಮತ್ತು ನೂರಾರು ಸಾಯಿಭಕ್ತರು ಭಾಗವಹಿಸಿದ್ದರು. 


ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆಯವರು ದ್ವಾರಕಾಮಾಯಿಯಲ್ಲಿ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಪ್ರಾರಂಭಿಸಿದರು. 



ಗುರುಪೂರ್ಣಿಮೆ ಉತ್ಸವದ ಮೊದಲ ದಿನವಾದ 14ನೇ ಜುಲೈ 2011 ರಂದು ಪುಣೆಯ ಸಾಯಿಭಕ್ತರಾದ ಶ್ರೀ.ಸುನೀಲ್ ನಹಾರ್ ರವರು 4675 ಗ್ರಾಂ ತೂಕದ 2,14,676 ರುಪಾಯಿಗಳ ಬೆಳ್ಳಿಯ ಕಿರೀಟವನ್ನು ಸಾಯಿಬಾಬಾರವರ ಚರಣ ಕಮಲಗಳಿಗೆ ಅರ್ಪಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಉಪಸ್ಥಿತರಿದ್ದರು. 




ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ಸಾಯಿ ಸಚ್ಚರಿತ್ರೆ ಪಾರಾಯಣ ಮುಕ್ತಾಯದ ಅಂಗವಾಗಿ ಸಾಯಿ ಸಚ್ಚರಿತ್ರೆ, ವೀಣೆ ಮತ್ತು ಸಾಯಿಬಾಬಾರವರ ಚಿತ್ರಪಟವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಪಾಂಡುರಂಗ ಅಭಂಗ್, ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಅಶೋಕ್ ಕಂಬೇಕರ್ ಮತ್ತು ನೂರಾರು ಸಾಯಿಭಕ್ತರು ಭಾಗವಹಿಸಿದ್ದರು. 


ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ವಿಜಯವಾಡದ ಸಾಯಿ ಭಕ್ತರಾದ ಶ್ರೀ.ಎನ್.ಎಂ.ರೆಡ್ಡಿಯವರು 1250 ಗ್ರಾಂ ತೂಕದ 26,47,500 ರುಪಾಯಿ ಬೆಲೆಬಾಳುವ ಚಿನ್ನದ ಶೇಷನಾಗನನ್ನು ಸಾಯಿಬಾಬಾರವರ ಚರಣ ಕಮಲಗಳಿಗೆ ಅರ್ಪಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಉಪಸ್ಥಿತರಿದ್ದರು. 


ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಶಿರಡಿಗೆ ಸಾವಿರಾರು ಜನ ಸಾಯಿಭಕ್ತರು ಆಗಮಿಸಿದ್ದರು. 



ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು ಸಾಯಿಬಾಬಾರವರ ದರ್ಶನಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ವಿಧಾನಸಭಾ ಅಧ್ಯಕ್ಷ ಶ್ರೀ.ದಿಲೀಪ್ ವಾಲಸೆ ಪಾಟೀಲ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಹ್ಲೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಬಾಳಾಸಾಹೇಬ್ ವಿಕ್ಹೇ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. 


ಗುರುಪೂರ್ಣಿಮೆ ಉತ್ಸವದ ಎರಡನೆಯ ದಿನವಾದ 15ನೇ ಜುಲೈ 2011 ರಂದು "ಸಾಯಿ ಟೆಕ್ ಪಾರ್ಕ್" ನ ಉದ್ಘಾಟನೆಯನ್ನು  ಮಹಾರಾಷ್ಟ್ರ ವಿಧಾನಸಭಾ ಅಧ್ಯಕ್ಷ ಶ್ರೀ.ದಿಲೀಪ್ ವಾಲಸೆ ಪಾಟೀಲ್ ರವರು ನೆರವೇರಿಸಿದರು.  ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ, ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಹ್ಲೆ, ಟ್ರಸ್ಟಿಗಳಾದ ಶ್ರೀ.ಶೈಲೇಶ್ ಕುಟೆ, ಶ್ರೀ.ಸುರೇಶ ವಾಬ್ಲೆ, ಡಾ.ಏಕನಾಥ್ ಗೋನ್ಡ್ಕರ್, ಶ್ರೀ.ಅಶೋಕ್ ಕಂಬೇಕರ್, ಶ್ರೀ.ಪಾಂಡುರಂಗ ಅಭಂಗ್, ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತಿತರ ಸಾಯಿಭಕ್ತರು ಉಪಸ್ಥಿತರಿದ್ದರು. 



 
ಗುರುಪೂರ್ಣಿಮೆ ಉತ್ಸವದ ಅಂಗವಾಗಿ ಶಿರಡಿಯ ಸಮಾಧಿ ಮಂದಿರವನ್ನು ವಿವಿಧ ಬಗೆಯ ಹೂವುಗಳಿಂದ ಬಹಳ ಸುಂದರವಾಗಿ ಬೆಂಗಳೂರಿನ ಸಾಯಿ ಭಕ್ತರು ಮತ್ತು ಹೂವಿನ ವ್ಯಾಪಾರಿಯಾದ ಶ್ರೀ.ಕೆ.ಸುಬ್ರಮಣಿ ರಾಜುರವರು ಶೃಂಗರಿಸಿದ್ದರು. 



ಕನ್ನಡ ಅನುವಾದ:ಶ್ರೀಕಂಠ ಶರ್ಮ 

No comments:

Post a Comment