Saturday, July 2, 2011

ಶ್ರೀ ವರಪ್ರದ ಸಾಯಿ ಮಾರುತಿ ಮಂದಿರದ ವತಿಯಿಂದ ಶ್ರೀ ಸಾಯಿ ಕೋಟಿ ನಾಮಜಪ ಲೇಖನ ಯಜ್ಞ ಮತ್ತು ಶಿರಡಿ ಸಾಯಿಬಾಬಾರವರ ಲಕ್ಷ ಮುಲಮಂತ್ರ ಹೋಮ- 3ನೇ ಜುಲೈ 2011 -  ಕೃಪೆ: ಸಾಯಿಅಮೃತಧಾರಾ.ಕಾಂ  



ಶ್ರೀ ಶಿರಡಿ ಸಾಯಿನಾಥ ಸ್ವಾಮಿಯ ಪ್ರೇರೇಪಣೆಯಿಂದ ಬೆಂಗಳೂರಿನ ಹೊಸಕೆರೆಹಳ್ಳಿ ಬಡಾವಣೆಯಲ್ಲಿರುವ ಶ್ರೀ ವರಪ್ರದ ಸಾಯಿ ಮಾರುತಿ ಮಂದಿರದ ವತಿಯಿಂದ ಮುಂದಿನ ವರ್ಷದ ಮಂದಿರದ ವಾರ್ಷಿಕೋತ್ಸವದಂದು ಅಂದರೆ 15ನೇ ಏಪ್ರಿಲ್ 2012, ಭಾನುವಾರದಂದು ಶಿರಡಿ ಸಾಯಿಬಾಬಾರವರ ಲಕ್ಷ ಮುಲಮಂತ್ರ ಹೋಮವನ್ನು ನೆರವೇರಿಸಲು ನಿರ್ಧರಿಸಲಾಗಿದೆ. ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಶ್ರೀ ಸಾಯಿ ಕೋಟಿನಾಮ ಲೇಖನ ಯಜ್ಞವನ್ನು ಏರ್ಪಡಿಸಿ ಸಾಯಿ ಕೋಟಿನಾಮ  ಪುಸ್ತಕವನ್ನು ಮುದ್ರಿಸಿರುತ್ತಾರೆ. ಆಸಕ್ತಿಯುಳ್ಳ ಸಾಯಿಭಕ್ತರು ಪುಸ್ತಕವನ್ನು ತೆಗೆದುಕೊಂಡು "ಓಂ ಶ್ರೀ ಸಾಯಿ" ಎಂಬ ಪವಿತ್ರ ನಾಮವನ್ನು ಎಂದು ಯಾವುದೇ ಭಾಷೆಯಲ್ಲಿ ಆದರೂ ಸರಿ ಖಾಲಿ ಬಿಟ್ಟಿರುವ ಪ್ರತಿ ಚೌಕಿಯಲ್ಲಿ ಬರೆದು  ಮುಂದಿನ ವರ್ಷದ ಮಾರ್ಚ್ 2012 ರೊಳಗೆ ಈ ಕೆಳಗೆ ನೀಡಿರುವ ಮಂದಿರದ ಕಾರ್ಯಾಲಯಕ್ಕೆ ತಲುಪಿಸಬೇಕಾಗಿ ವಿನಂತಿಸಲಾಗಿದೆ. 

ಲಕ್ಷ ಹೋಮದ ದಿವಸ ಅಂದರೆ 15ನೇ ಏಪ್ರಿಲ್ 2012 ರ ಭಾನುವಾರ ಶುಭದಿನದಂದು ಕೋಟಿನಾಮ ಲೇಖನ ಯಜ್ಞದ ದಶಾಂಶ ಲಕ್ಷ ಮುಲಮಂತ್ರ ಹೋಮ ನಡೆಯುವುದರಿಂದ ಸುಮಾರು ಹತ್ತು ಸಾವಿರ ಜನರಿಗೆ ಅನ್ನದಾನವನ್ನು ಏರ್ಪಡಿಸಿರುತ್ತದೆ. ಕೋಟಿನಾಮ ಪುಸ್ತಕ ಪಡೆಯಲು ಅಥವಾ ಅನ್ನದಾನ ಸೇವೆಯಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾಯಿಭಕ್ತರು ಈ ಕೆಳಕಂಡ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 

ವಿಳಾಸ:
ಶ್ರೀ ವರಪ್ರದ ಮಾರುತಿ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), 
ನಂ.27, "ಅಯೋಧ್ಯಾ", 6ನೇ ಅಡ್ಡರಸ್ತೆ, 
ನಾರಾಯಣ ರಾವ್ ಬಡಾವಣೆ, ಹೊಸಕೆರೆಹಳ್ಳಿ, 
ಬನಶಂಕರಿ 3ನೇ ಹಂತ, ಬೆಂಗಳೂರು-560 085, ಕರ್ನಾಟಕ                                              

ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ಶ್ರೀಧರ್ / ಶ್ರೀ.ಕೃಷ್ಣಮುರ್ತಿ (ಬಾಬು) / ಶ್ರೀಮತಿ.ದೀಪಾ / ಶ್ರೀಮತಿ.ಸುಜಾತ  /ಶ್ರೀ.ಕೃಷ್ಣಕುಮಾರ್ /ಶ್ರೀಮತಿ.ಗೀತಾ ರಾವ್ /ಶ್ರೀ.ಮನೋಜ್ ಚಕ್ರವರ್ತಿ                                                            

ದೂರವಾಣಿ ಸಂಖ್ಯೆಗಳು:                                                                                                                                
+ 91 99166 83942 / +91 98444 45442 / +91 91411 64250 / +91 99162 08208 / +91 98450 48457 / +91 78995 70206 / +91 93423 40708


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment