Saturday, June 25, 2011

ಸಾಯಿ ಭಜನ ಗಾಯಕ ಮತ್ತು ಸಮಾಜ ಸೇವಕ  - ಶ್ರೀ.ಸಾಯಿ ನಾರಾಯಣ ಸಿಂಗ್ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ಸಾಯಿ ನಾರಾಯಣ್ ಸಿಂಗ್ ರವರು ಕರ್ನಾಟಕ ರಾಜ್ಯದ ಮೈಸೂರಿನ ಖ್ಯಾತ ಸಾಯಿ ಭಜನ ಗಾಯಕ ಹಾಗೂ ಸಮಾಜ ಸೇವಕರು.  ಇವರು 21ನೇ ಏಪ್ರಿಲ್ 1970 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಶ್ಯಾಮ್ ಸಿಂಗ್ ಮತ್ತು ತಾಯಿಯವರು ಶ್ರೀಮತಿ.ಪದ್ಮ ಸಿಂಗ್. ಇವರು ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 

ಇವರು 2009 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ಸಾಯಿಬಾಬಾರವರ ಪಥಕ್ಕೆ ಬಂದರು. ಇವರು ತಮ್ಮ ಸತ್ಸಂಗದ ಮುಖಾಂತರ ಮೈಸೂರಿನ ಮತ್ತು ಬೆಂಗಳೂರಿನ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಭಜನ ಸತ್ಸಂಗ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಶಿರಡಿಗೆ ಪ್ಯಾಕೇಜ್ ಟೂರ್ ಗಳನ್ನು ನಡೆಸುತ್ತಿದ್ದಾರೆ. ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದ್ದಾರೆ. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ತಾವು ನೀಡುತ್ತಾ ಬಂದಿರುತ್ತಾರೆ.ಅಷ್ಟೇ ಅಲ್ಲದೆ, ಇವರು ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿರುತ್ತಾರೆ.

ಪ್ರಸ್ತುತ ಇವರು ಮೈಸೂರಿನ ನಿವಾಸದಲ್ಲಿ ತಮ್ಮ ಮಗನೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.  ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ಸಂಪರ್ಕದ ವಿವರಗಳು:


ವಿಳಾಸ: 
ಸಾಯಿನಾಥ ಸೇವಾ ಸಂಸ್ಥೆ,
ನಂ.438, ಎಲ್.ಐ.ಜಿ.-II,
1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ,
ಶಾರದಾದೇವಿ ನಗರ,
ಮೈಸೂರು-570 023, ಕರ್ನಾಟಕ.


ದೂರವಾಣಿ ಸಂಖ್ಯೆಗಳು: 
+91 94485 44389 / +91 80888 84389 / +91 82123 41389

ಈ ಮೇಲ್ ವಿಳಾಸ:
ssssmys@yahoo.in


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment