Saturday, June 25, 2011

ಮೈಸೂರಿನ ಶಿರಡಿ ಸಾಯಿಬಾಬಾ ಸತ್ಸಂಗ - ಸಾಯಿನಾಥ ಸೇವಾ ಸಂಸ್ಥೆ, ನಂ.438, ಎಲ್.ಐ.ಜಿ.-II,1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಶಾರದಾದೇವಿ ನಗರ, ಮೈಸೂರು-570 023, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ಸತ್ಸಂಗದ ವಿಶೇಷತೆಗಳು:

ಶ್ರೀ.ಸಾಯಿನಾಥ ಸೇವಾ ಸಂಸ್ಥೆಯು ಮೈಸೂರಿನ ಶಾರದಾದೇವಿನಗರದ ಚಾಮುಂಡೇಶ್ವರಿ ದೇವಾಲಯದ ಬಳಿ ಇರುತ್ತದೆ. 

ಈ ಸತ್ಸಂಗವನ್ನು 5ನೇ ಮೇ 2010 ರಂದು ಶ್ರೀ ಸಾಯಿ ನಾರಾಯಣ ಸಿಂಗ್ ರವರು ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಪ್ರಚಾರ ಮಾಡುವ ಸಲುವಾಗಿ ಪ್ರಾರಂಭಿಸಿದರು. 

ಸಾಯಿಬಾಬಾರವರ ಅಮೃತ ಶಿಲೆಯ ಪುಟ್ಟ ವಿಗ್ರಹ ಮತ್ತು ದ್ವಾರಕಾಮಾಯಿ ಸಾಯಿಬಾಬಾರವರ ಪುಟ್ಟ ವಿಗ್ರಹವನ್ನು ಸತ್ಸಂಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಅಲ್ಲದೆ, ಭಾರತದ ಪ್ರಸಿದ್ದ ಸಿದ್ದ ಪುರುಷರ ಚಿತ್ರಪಟ, ಸಾಯಿಬಾಬಾರವರ ಸಟಕಾ, ಸಾಯಿಬಾಬಾರವರ ಮರದ ಪಾದುಕೆಗಳು ಮತ್ತು ಆಳೆತ್ತರದ ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಚಿತ್ರಪಟವನ್ನು ಸತ್ಸಂಗದಲ್ಲಿ ಸಾಯಿಭಕ್ತರು ನೋಡಬಹುದು. 





ಸತ್ಸಂಗದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:

ಗುರುವಾರದ ಆರತಿಯ ಸಮಯ: 

ಕಾಕಡಾ ಆರತಿ - ಬೆಳಿಗ್ಗೆ 4:30 ಕ್ಕೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ - ಸಂಜೆ 6:30 ಕ್ಕೆ 
ಶೇಜಾರತಿ - ರಾತ್ರಿ 9:15 ಕ್ಕೆ 

ಗುರುವಾರ ಬಿಟ್ಟು ಇತರ ದಿನಗಳಲ್ಲಿ ಸಂಜೆ 6:30 ಕ್ಕೆ ಸಾಯಿಬಾಬಾರವರಿಗೆ ಆರತಿಯನ್ನು ಮಾಡಲಾಗುತ್ತದೆ. 

ಪ್ರತಿ ಗುರುವಾರ ಬೆಳಿಗ್ಗೆ 5 ಘಂಟೆಯಿಂದ 6 ಘಂಟೆಯವರೆಗೆ ಸಾಯಿಬಾಬಾರವರ ವಿಗ್ರಹಕ್ಕೆ ಗುಲಾಬಿ ನೀರಿನ ಅಭಿಷೇಕವನ್ನು ಮಾಡಲಾಗುತ್ತದೆ. 

ಪ್ರತಿ ಗುರುವಾರ ಸಂಜೆ 7 ಘಂಟೆಯಿಂದ ಸಾಯಿ ಭಜನ ಸತ್ಸಂಗದ ಕಾರ್ಯಕ್ರಮವಿರುತ್ತದೆ. ಸಾಯಿಭಜನೆಯು ರಾತ್ರಿ 9:15 ಕ್ಕೆ ಶೇಜಾರತಿಯೊಂದಿಗೆ ಮುಕ್ತಾಯವಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ. 
2.ಗುರುಪೂರ್ಣಿಮೆ.
3.ವಿಜಯದಶಮಿ. 

ಸತ್ಸಂಗದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಶ್ರೀ ಸಾಯಿನಾಥ ಸೇವಾ ಸಂಸ್ಥೆಯು ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದೆ. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಸಂಸ್ಥೆಯು ಭರಿಸುತ್ತಿದೆ. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ಸಂಸ್ಥೆಯು ನೀಡುತ್ತಾ ಬಂದಿರುತ್ತದೆ. ಅಷ್ಟೇ ಅಲ್ಲದೆ, ಸಂಸ್ಥೆಯು  ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತನ್ನದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿರುತ್ತದೆ.

ಸತ್ಸಂಗದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಚಾಮುಂಡೇಶ್ವರಿ ದೇವಾಲಯದ ಹತ್ತಿರ, ಶಾರದಾದೇವಿನಗರ, ಮೈಸೂರು.

ವಿಳಾಸ: 
ಸಾಯಿನಾಥ ಸೇವಾ ಸಂಸ್ಥೆ,
ನಂ.438, ಎಲ್.ಐ.ಜಿ.-II,
1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ,
ಶಾರದಾದೇವಿ ನಗರ,
ಮೈಸೂರು-570 023, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಸಾಯಿ ನಾರಾಯಣ್ ಸಿಂಗ್.

ದೂರವಾಣಿ ಸಂಖ್ಯೆಗಳು: 
+91 94485 44389 / +91 80888 84389 / +91 82123 41389

ಈ ಮೇಲ್ ವಿಳಾಸ:
ssssmys@yahoo.in


ಮಾರ್ಗಸೂಚಿ: 
ಶಾರದಾದೇವಿನಗರ ದ ಬಸ್ ನಿಲ್ದಾಣದಲ್ಲಿ ಇಳಿದು ಕೇವಲ 100 ಮೀಟರ್ ದೂರ ನಡೆದರೆ ಸತ್ಸಂಗ ಸಿಗುತ್ತದೆ. ಸತ್ಸಂಗವು ಚಾಮುಂಡೇಶ್ವರಿ ದೇವಾಲಯದ ಬಳಿ ಇರುತ್ತದೆ. ಮೈಸೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 91ಎ, 135, 95, 64. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment