Tuesday, April 30, 2013

ಪಗ್ವಾರಾದ ಶಿರಡಿ ಸಾಯಿಬಾಬಾ ಮಂದಿರ- ಶ್ರೀ ಸಾಯಿಬಾಬಾ ಮಂದಿರ ಕಮಿಟಿ, ಸುಖಚೈನ್ ಸಾಹೀಬ್ ರಸ್ತೆ, ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ, ಪಗ್ವಾರಾ, ಕಪುರ್ತಲಾ ಜಿಲ್ಲೆ, ಪಂಜಾಬ್,ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಪಂಜಾಬ್ ರಾಜ್ಯದ ಕಪುರ್ತಲಾ ಜಿಲ್ಲೆಯ ಪಗ್ವಾರಾ ನಗರದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ. ಗೋವಿಂದ ಗೋಧಾಮ್ ಗೋಶಾಲೆಯಿಂದ ಎರಡು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 2ನೇ ಜುಲೈ 2010 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 2ನೇ ಅಕ್ಟೋಬರ್ 2011 ರಂದು ದೇವಾಲಯದ ಸಂಸ್ಥಾಪಕ ಅಧ್ಯಕ್ಷ ಹಾಗೂ ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ರಾಜನ್ ಶರ್ಮರವರು  ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ರಾಜನ್ ಶರ್ಮರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಪಲ್ಲಕ್ಕಿಯನ್ನು ದೇವಾಲಯದ ಒಳಗಡೆ ಇರಿಸಲಾಗಿದೆ.






ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ 6:00 ರಿಂದ ರಾತ್ರಿ 9:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ          : ಬೆಳಿಗ್ಗೆ 6:30 ಗಂಟೆಗೆ.
ಮಧ್ಯಾನ್ಹ ಆರತಿ         : ಮಧ್ಯಾನ್ಹ 12:00 ಗಂಟೆಗೆ
ಧೂಪಾರತಿ               : ಸಂಜೆ 6:30 ಗಂಟೆಗೆ.
ಶೇಜಾರತಿ                : ರಾತ್ರಿ 9:00 ಗಂಟೆಗೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 2ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಸಂಸ್ಥಾಪಕ ಅಧ್ಯಕ್ಷರೂ ಹಾಗೂ ಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ರಾಜನ್ ಶರ್ಮರವರು ಭಾರತದ ಎಲ್ಲ ಕಡೆಗಳಲ್ಲಿ ಉಚಿತವಾಗಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.

ಪಗ್ವಾರ ಬಳಿಯಿರುವ ಆಶ್ರಮದಲ್ಲಿರುವ ಕುಷ್ಟ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ.

ಪಗ್ವಾರ ಬಳಿಯಿರುವ ಅಂಧರ ಆಶ್ರಮದಲ್ಲಿರುವ ಅಂಧರಿಗೆ ಉಚಿತವಾಗಿ ಊಟವನ್ನು ವಿತರಣೆ ಮಾಡಲಾಗುತ್ತಿದೆ.


ದೇಣಿಗೆಗೆ ಮನವಿ:

ದೇವಾಲಯದ ಟ್ರಸ್ಟ್ ನಿಯಮಿತವಾಗಿ ಹಲವಾರು ಸಾಮಾಜಿಕ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿಬಾಬಾ ಮಂದಿರ ಕಮಿಟಿ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಖಾತೆ ಸಂಖ್ಯೆ: 07202191002037" ಗೆ ಸಲ್ಲುವಂತೆ ನಗದು/ಚೆಕ್/ಡಿಡಿ ರೂಪದಲ್ಲಿ ಸಂದಾಯ ಮಾಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಪಗ್ವಾರಾದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ.

ವಿಳಾಸ:
ಶ್ರೀ ಸಾಯಿಬಾಬಾ ಮಂದಿರ ಕಮಿಟಿ,
ಸುಖಚೈನ್ ಸಾಹೀಬ್ ರಸ್ತೆ,
ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ,
ಪಗ್ವಾರಾ, ಕಪುರ್ತಲಾ ಜಿಲ್ಲೆ,
ಪಂಜಾಬ್,ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ರಾಜನ್ ಶರ್ಮ (ಅಧ್ಯಕ್ಷರು)

ದೂರವಾಣಿ ಸಂಖ್ಯೆ:
+91 98142 22345

ಇ ಮೇಲ್ ವಿಳಾಸ: 
sairajan12@yahoo.in


ಮಾರ್ಗಸೂಚಿ: 
ದೇವಾಲಯವು ಪಗ್ವಾರಾ ನಗರದ ಸುಖಚೈನ್ ಸಾಹೀಬ್ ರಸ್ತೆಯಲ್ಲಿರುವ ಗೋವಿಂದ ಗೋಧಾಮ್ ಗೋಶಾಲೆಯ ಹತ್ತಿರ ಇರುತ್ತದೆ. ಗೋವಿಂದ ಗೋಧಾಮ್ ಗೋಶಾಲೆಯಿಂದ ಎರಡು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment