Thursday, April 11, 2013

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ  ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ-1" ರ ಉದ್ಘಾಟನೆ- ಕೃಪೆ:ಸಾಯಿಅಮೃತಧಾರಾ.ಕಾಂ

ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ಶ್ರೀ.ಕೆ.ವಿ.ರಮಣಿಯವರು ನೀಡಿದ 110 ಕೋಟಿ ರೂಪಾಯಿಗಳ ಕಾಣಿಕೆಯಿಂದ ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ-1" ಅನ್ನು ಇದೇ ತಿಂಗಳ ಪವಿತ್ರ ಗುಡಿ ಪಾಡ್ವ ದಿನವಾದ 11ನೇ ಏಪ್ರಿಲ್ 2013, ಗುರುವಾರದಂದು ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್ ರವರು ಉದ್ಘಾಟಿಸಿದರು.

ದಾನಿಗಳಾದ ಶ್ರೀ.ಕೆ.ವಿ.ರಮಣಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಜಯಂತ್ ಡಿ.ಕುಲಕರ್ಣಿಯವರು ಸನ್ಮಾನ ಪತ್ರವನ್ನು ನೀಡುವ ಮುಖಾಂತರ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಶ್ರೀ.ಪೃಥ್ವಿರಾಜ್ ಚವಾಣ್, ವ್ಯವಸಾಯ ಖಾತೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಖೆ ಪಾಟೀಲ್, ಮಂತ್ರಿಗಳಾದ ಶ್ರೀ.ಹರ್ಷವರ್ಧನ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಡಿ.ಕುಲಕರ್ಣಿ ಮತ್ತು ಹಲವಾರು ಗಣ್ಯರು ಕೂಡ ಉಪಸ್ಥಿತರಿದ್ದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment