Thursday, April 18, 2013

ಶಿವಸಾಯಿ ಟ್ರಸ್ಟ್ ನ ವತಿಯಿಂದ ಚನ್ನೈನ ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ ಗ್ರಾಮದಲ್ಲಿ  ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಹಾಗೂ ಶ್ರೀ ಪಂಚಮುಖಿ ವಿಷ್ಣು ಗಣಪತಿ, ಶ್ರೀ ಭಕ್ತ ಆಂಜನೇಯ ಹಾಗೂ ಶಿರಡಿ ಸಾಯಿಬಾಬಾ ವಿಗ್ರಹಗಳ ಪ್ರತಿಷ್ಟಾಪನೆ ಕಾರ್ಯಕ್ರಮ - ಕೃಪೆ:ಸಾಯಿಅಮೃತಧಾರಾ.ಕಾಂ  

ಶಿವಸಾಯಿ ಟ್ರಸ್ಟ್, ಚನ್ನೈ ಇದೇ ತಿಂಗಳ 23ನೇ ಏಪ್ರಿಲ್ 2013, ಮಂಗಳವಾರ, ಪವಿತ್ರ ಮಹಾವೀರ ಜಯಂತಿಯ ದಿನದಂದು 8 ಗಂಟೆಗೆ ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್ ಗ್ರಾಮದಲ್ಲಿ    ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  

ಇದೇ ದಿನ ಬೆಳಿಗ್ಗೆ 9:30 ಕ್ಕೆ ಶ್ರೀ ಪಂಚಮುಖಿ ವಿಷ್ಣು ಗಣಪತಿ, ಶ್ರೀ ಭಕ್ತ ಆಂಜನೇಯ ಹಾಗೂ ಶಿರಡಿ ಸಾಯಿಬಾಬಾ ವಿಗ್ರಹಗಳ ಪ್ರತಿಷ್ಟಾಪನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.   

ಬೆಳಿಗ್ಗೆ 10:30 ಕ್ಕೆ ಉಚಿತ ವೈದ್ಯಕೀಯ ಶಿಬಿರ ಮತ್ತು ಅದರ ನಂತರ ಅನ್ನದಾನ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. 




ದೇವಾಲಯದ ವಿಳಾಸ: 

ನಂ.8, ಗ್ರಿನ್ವೆಲ್ನಾಥಮ್ ಗ್ರಾಮ, 
ಸೆಂಡ್ರಾಯನಪಾಳ್ಯಂ, 
ಪೂಂಡಿ ಅಂಚೆ-602 023,
ತಿರುವಳ್ಳೂರು ಜಿಲ್ಲೆ, 
ತಮಿಳುನಾಡು, ಭಾರತ  
ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಮೊಬೈಲ್ ಸಂಖ್ಯೆಗಳು: +91 94446 56167, +91 99400 24173   
ಇ-ಮೈಲ್ ವಿಳಾಸ: info@aaosai.com
ಅಂತರ್ಜಾಲ ತಾಣ: www.aaosai.com 

  

ಕನ್ನಡ ಅನುವಾದ ಶ್ರೀಕಂಠ ಶರ್ಮ 

No comments:

Post a Comment