Wednesday, April 10, 2013

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ- ಸಾಯಿ ಸಗುಣೋಪಾಸನ ಮಂಡಳಿ, ನಂ.2338, ನೆಲಮಹಡಿ, 8ನೇ ಅಡ್ಡರಸ್ತೆ, 2ನೇ ಹಂತ, ಕುಮಾರಸ್ವಾಮಿ ಲೇಔಟ್, ಬೆಂಗಳೂರು-560 078, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ 2ನೇ ಹಂತದಲ್ಲಿರುವ ಚಂದ್ರಾನಗರ ಬಸ್ ನಿಲ್ದಾಣದ ಹತ್ತಿರ ಇರುತ್ತದೆ. ಚಂದ್ರಾನಗರ ಬಸ್ ನಿಲ್ದಾಣದಿಂದ ಕೇವಲ ಐದು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ದೇವಾಲಯದ ಉದ್ಘಾಟನೆಯನ್ನು 13ನೇ ಮಾರ್ಚ್ 2013 ರಂದು ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಕೆ.ಎನ್.ಜಗನ್ನಾಥ ಶಾಸ್ತ್ರಿಯವರು ಹಲವಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಎನ್.ವಿವೇಕಾನಂದ ಶರ್ಮರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯ ನೆಲಮಹಡಿಯಲ್ಲಿರುವ ಗರ್ಭಗುಡಿಯಲ್ಲಿ ಅಮೃತಶಿಲೆಯ 2 ಅಡಿ 7 ಅಂಗುಲ ಎತ್ತರದ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ, ಅಲ್ಲದೇ, ಪುಟ್ಟದಾದ ಸಾಯಿಬಾಬಾರವರ ಅಮೃತಶಿಲೆಯ ಮತ್ತೊಂದು ವಿಗ್ರಹವನ್ನು ಇರಿಸಲಾಗಿದ್ದು ಅದನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತಿದೆ.

ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.





ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 7:00 ರಿಂದ 10:30 ಗಂಟೆಯವರೆಗೆ.
ಸಂಜೆ : 6:00 ರಿಂದ 8:30 ರವರೆಗೆ.

ಗುರುವಾರದಂದು ಬೆಳಿಗ್ಗೆ 7:00 ರಿಂದ 12:30 ರವರೆಗೆ ಹಾಗೂ ಸಂಜೆ 6:00 ರಿಂದ 8:30 ರವರೆಗೆ ಮಂದಿರವನ್ನು ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ          : ಬೆಳಿಗ್ಗೆ 7:00 ಗಂಟೆಗೆ.
ಮಧ್ಯಾನ್ಹ ಆರತಿ         : ಮಧ್ಯಾನ್ಹ 12:00 ಗಂಟೆಗೆ (ಗುರುವಾರದಂದು ಮಾತ್ರ).
ಧೂಪಾರತಿ               : ಸಂಜೆ 06:00 ಗಂಟೆಗೆ.
ಶೇಜಾರತಿ               : ರಾತ್ರಿ 8:00 ಗಂಟೆಗೆ.

ಪ್ರತಿದಿನ ಬೆಳಿಗ್ಗೆ 7:30 ಕ್ಕೆ ಸಾಯಿಬಾಬಾರವರ ಪುಟ್ಟ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಂಜೆ 5:30 ರಿಂದ 8:30 ರವರೆಗೆ ವಿಷ್ಣು ಸಹಸ್ರನಾಮ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ಪ್ರತಿ ತಿಂಗಳ ಅಮಾವಾಸ್ಯೆಯ ದಿನದಂದು ಸಂಜೆ 5:30 ರಿಂದ 8:30 ರವರೆಗೆ ಲಲಿತಾ ಸಹಸ್ರನಾಮ ಹೋಮವನ್ನು ಹಮ್ಮಿಕೊಳ್ಳಲಾಗುತ್ತದೆ. ಯಾವುದೇ ಸೇವಾ ಶುಲ್ಕ ಇರುವುದಿಲ್ಲ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 13ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
ದತ್ತ ಜಯಂತಿ.




ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ 2ನೇ ಹಂತದಲ್ಲಿರುವ ಚಂದ್ರಾನಗರ ಬಸ್ ನಿಲ್ದಾಣದ ಹತ್ತಿರ ಇರುತ್ತದೆ.

ವಿಳಾಸ:
ಸಾಯಿ ಸಗುಣೋಪಾಸನ ಮಂಡಳಿ
ನಂ.2338, ನೆಲಮಹಡಿ,
8ನೇ ಅಡ್ಡರಸ್ತೆ, 2ನೇ ಹಂತ,
ಕುಮಾರಸ್ವಾಮಿ ಲೇಔಟ್,
ಬೆಂಗಳೂರು-560 078,
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಕೆ.ಎನ್.ವಿವೇಕಾನಂದ ಶರ್ಮ (ಅಧ್ಯಕ್ಷರು)

ದೂರವಾಣಿ ಸಂಖ್ಯೆಗಳು:
+91 99865 85665/+91 90600 90049

ಇ ಮೇಲ್ ವಿಳಾಸ: 
knvivekanand@gmail.com


ಮಾರ್ಗಸೂಚಿ: 
ಚಂದ್ರಾನಗರ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ಕುಮಾರಸ್ವಾಮಿ ಲೇ ಔಟ್ ಮತ್ತು ಇಸ್ರೋ ಲೇ ಔಟ್ ನ ಮಧ್ಯದ ದಾರಿಯಲ್ಲಿ ಇರುತ್ತದೆ.  ಮೆಜಿಸ್ಟಿಕ್ ಬಸ್  ನಿಲ್ದಾಣದಿಂದ ಕುಮಾರಸ್ವಾಮಿ ಲೇ ಔಟ್ ಬಡಾವಣೆಗೆ ಹೋಗುವ 210X ಬಸ್ ಸಂಖ್ಯೆಗೆ ಚಂದ್ರಾನಗರ ಬಸ್ ನಿಲ್ದಾಣದಲ್ಲಿ ನಿಲುಗಡೆ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment