Wednesday, January 11, 2012

ಸಾಯಿಭಕ್ತ ಸೇವಾ ಧುರೀಣ - ಶ್ರೀ.ಆರ್.ಎ.ಕುಮಾರಸ್ವಾಮೀಜಿ - ಕೃಪೆ: ಸಾಯಿಅಮೃತಧಾರಾ.ಕಾಂ 


ವಿನಯಶೀಲ,ಸಗುಣವಂತ ಸಾಯಿಭಕ್ತರಾದ ಶ್ರೀ.ಆರ್.ಎ.ಕುಮಾರಸ್ವಾಮೀಜಿಯವರು ಆಂಧ್ರಪ್ರದೇಶದ ನೆಲ್ಲೂರು ಮತ್ತು ಮಹಾರಾಷ್ಟ್ರದ ಶಿರಡಿಯಲ್ಲಿರುವ ಶ್ರೀ.ಶಿರಡಿ ಸಾಯಿ ಸೇವಾ ಸದನ ಆಶ್ರಮದ ಸಂಸ್ಥಾಪಕರಾಗಿರುತ್ತಾರೆ. ಇವರು 6ನೇ ಡಿಸೆಂಬರ್ 1955   ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪೆದ್ದರಾಜುಪಲ್ಲಿಯಲ್ಲಿ ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ವಿಶ್ವನಾಥನ್ ಮತ್ತು ತಾಯಿಯವರು ದಿವಂಗತ ಶ್ರೀಮತಿ.ಲಕ್ಷ್ಮಿ ನರಸಮ್ಮನವರು. ಇವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯದಿದ್ದರೂ ಕೂಡ ಬಾಲ್ಯದಲ್ಲಿಯೇ ಇವರ ತಾತನವರಾದ ಶ್ರೀ.ಶ್ರೀ.ಶ್ರೀ.ಸ್ವಾಮಿ ಸಂಜೀವಯ್ಯ ಮಹಾರಾಜ್ ರವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ಪ್ರಗತಿಯನ್ನು ಹೊಂದಿದರು. ನಂತರ 1978 ನೇ ಇಸವಿಯಲ್ಲಿ ಸಾಯಿ ಮಹಾಭಕ್ತರಾದ ಪರಮ ಪೂಜ್ಯ ಶ್ರೀ.ಎಕ್ಕಿರಾಲ ಭಾರದ್ವಾಜ ರವರ ಸಂಪರ್ಕಕ್ಕೆ ಬಂದು ಅವರ ಮಾರ್ಗದರ್ಶನದಲ್ಲಿ ಇವರು ಅನನ್ಯ ಸಾಯಿಭಕ್ತರಾಗಿ ರೂಪುಗೊಂಡರು. ಇವರು ಸಾಯಿಬಾಬಾರವರ ಮೇಲೆ ರಚನೆಯಾಗಿರುವ ಅನೇಕ ಉದ್ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ ಅದರಿಂದ ಪಡೆದ ಜ್ಞಾನದಿಂದ ಸಾವಿರಾರು ಸಾಯಿಭಕ್ತರಿಗೆ ಬಾಬಾರವರ ಜೀವನ ಮತ್ತು ಉಪದೇಶಗಳನ್ನು ತಲುಪಿಸುವ ಬಹಳ ಒಳ್ಳೆಯ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿರುತ್ತಾರೆ. 

ಇವರು 2003ನೇ ಇಸವಿಯಲ್ಲಿ ಶಿರಡಿಯಲ್ಲಿ ಶ್ರೀ ಶಿರಡಿ ಸಾಯಿ ಸೇವಾ ಸದನ ಎಂಬ ಆಶ್ರಮವನ್ನು ಆರಂಭಿಸಿದರು. ಶಿರಡಿಗೆ ಬರುವ ಸಾಯಿ ಭಕ್ತರಿಗೆ ಅತಿ ಕಡಿಮೆ ದರದಲ್ಲಿ ಊಟ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸುವುದು ಈ ಆಶ್ರಮ ಸ್ಥಾಪನೆಯ ಮುಖ್ಯ ಉದ್ದೇಶ. ಈ ಆಶ್ರಮವು ಒಟ್ಟು ಇಪ್ಪತ್ತು ಸುಸಜ್ಜಿತ ಕೋಣೆಗಳು ಹಾಗೂ ಧ್ಯಾನ ಮಂದಿರವನ್ನು ಹೊಂದಿರುತ್ತದೆ. ಈ ಧ್ಯಾನ ಮಂದಿರವನ್ನು ಸತ್ಸಂಗಗಳಿಗೆ, ಧ್ಯಾನ ಶಿಬಿರಕ್ಕೆ, ಮದುವೆ, ಹುಟ್ಟಿದ ಹಬ್ಬ, ಅನ್ನಪ್ರಾಶನ, ಭಜನೆ, ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮತ್ತು ನವವಿಧ ಭಕ್ತಿ ತತ್ವಗಳನ್ನು ಆಧರಿಸಿ ಉಪದೇಶ ನೀಡುವ ವಿದ್ವಾಂಸರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಈ ಆಶ್ರಮದಲ್ಲಿ ಅನ್ನದಾನಕ್ಕೆ ದೇಣಿಗೆಯನ್ನು ನೀಡಲು ಕೂಡ ಸಾಯಿ ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. 

ಶ್ರೀ.ಆರ್.ಎ.ಕುಮಾರಸ್ವಾಮೀಜಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:

ವಿಳಾಸ: 

ಶ್ರೀ.ಶಿರಡಿ ಸಾಯಿ ಸೇವಾ ಸದನ, 
112/24, ಗಾಯಕವಾಡಿ ವಸ್ತಿ, 
ಕಾಳಿಕಾ ನಗರ, ಶಿರಡಿ-423  109, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 

+91 2423 325911 / +91 93259 12011 / +91 94402 76643


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment