Tuesday, May 31, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ನಿವಾಸ, ನಂ.4ಬಿ, ಹೆಚ್.ಟಿ.ಲೇನ್, ಆದಿತ್ಯ ಲೇಔಟ್, ಕಲ್ಕೆರೆ ಮುಖ್ಯ ರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ   

ದೇವಾಲಯದ ವಿಶೇಷತೆಗಳು: 

ಈ ಮಂದಿರವು ರಾಮಮುರ್ತಿನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 4ನೇ ಫೆಬ್ರವರಿ 2010 ರಂದು ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 16ನೇ ಮೇ 2010 ರಂದು ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲ್ಲೂಕಿನ ಬೂದಿಗೆರೆ ಗ್ರಾಮದ ವೇದ ಬ್ರಹ್ಮ ಶ್ರೀ.ಶಿವಕುಮಾರ್ ರವರು ನೆರವೇರಿಸಿದರು. 

ತಮ್ಮ ಮನೆಯ ಒಂದು ಕೋಣೆಯನ್ನೇ ಸಾಯಿ ಮಂದಿರವನ್ನಾಗಿ ಶ್ರೀಮತಿ.ಜಯಂತಿಯವರು ಮಾರ್ಪಡಿಸಿದ್ದಾರೆ. ಈ ಮಂದಿರಕ್ಕೆ ಎಲ್ಲಾ ಮತಕ್ಕೆ ಸೇರಿದ ಸಾಯಿ ಭಕ್ತರೂ ಬಂದು ಹೋಗುವುದೇ ಒಂದು ವಿಶೇಷ. 

ಮಂದಿರದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ಸಾಯಿಭಕ್ತರು ನೋಡಬಹುದು. 




ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 8 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 9:30 ಕ್ಕೆ 

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತಿ ಗುರುವಾರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 16ನೇ ಮೇಯಂದು .
2. ಗುರು ಪೂರ್ಣಿಮೆ.
3. ದೀಪಾವಳಿ. 
4. ವಿಜಯದಶಮಿ.

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಕ್ರೈಸ್ಟ್ ದಿ ಕಿಂಗ್ ಶಾಲೆಯ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. 

ವಿಳಾಸ:
ಶ್ರೀ ಸಾಯಿ ನಿವಾಸ, 
ನಂ.4ಬಿ, ಹೆಚ್.ಟಿ.ಲೇನ್, 
ಆದಿತ್ಯ ಲೇಔಟ್, ಕಲ್ಕೆರೆ ಮುಖ್ಯ ರಸ್ತೆ, 
ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀಮತಿ.ಎಸ್.ಜಯಂತಿ. 

ದೂರವಾಣಿ ಸಂಖ್ಯೆಗಳು: 
+ 91 94489 37559 / +91 99018 39940

ಮಾರ್ಗಸೂಚಿ: 
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಕ್ರೈಸ್ಟ್ ದಿ ಕಿಂಗ್ ಶಾಲೆಯ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. ಬಸ್ ಸಂಖ್ಯೆಗಳು: 315-D, 315-P, 315-E, 313, 313-F, 300-E ಮತ್ತು ಇನ್ನು ಹಲವಾರು ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment