Wednesday, February 23, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಆನಂದಮಯಿ ಮಂದಿರ, ಶ್ರೀ ಶಿರಡಿ ಸಾಯಿ ಅನಂದಮಯಿ ಟ್ರಸ್ಟ್, ಹುಣಸೆಮರದಪಾಳ್ಯ,ಮೈಸೂರು ರಸ್ತೆ ಪಕ್ಕ, ಅಮೃತ್ ಡಿಸ್ಟಿಲ್ಲರಿ ಹತ್ತಿರ, ಕೆಂಗೇರಿ ಹೋಬಳಿ, ಬೆಂಗಳೂರು, ಕರ್ನಾಟಕ  - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯದ ಭೂಮಿಪೂಜೆಯನ್ನು ಜನವರಿ 1995 ರಲ್ಲಿ ನೆರವೇರಿಸಲಾಯಿತು. 

ಈ ದೇವಾಲಯವನ್ನು 20ನೇ ಜುಲೈ 2002 ರಂದು ಸಾಯಿಭಕ್ತರ ಸಹಕಾರದೊಂದಿಗೆ ದೇವಾಲಯದ ಟ್ರಸ್ಟ್ ನ ಸದಸ್ಯರು ಉದ್ಘಾಟಿಸಿದರು. 

ಈ ದೇವಾಲಯವು ಹಲವು ವಿಶೇಷತೆಗಳಿಂದ ಕೂಡಿದೆ. 1. ಈ ದೇವಾಲಯದ ರಾಜಗೋಪುರವನ್ನು ಶಿರಡಿ ದೇವಾಲಯದ ಮಾದರಿಯಲ್ಲೇ ನಿರ್ಮಿಸಲಾಗಿದೆ. 2. ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಶಿರಡಿಯಲ್ಲಿರುವಂತೆ ಖಂಡೋಬ ಮಂದಿರವನ್ನು ದೇವಾಲಯದ ದ್ವಾರದಲ್ಲಿ ನಿರ್ಮಿಸಲಾಗಿದೆ. 3. ದೇವಾಲಯದ ಆವರಣದ ಎಡಭಾಗದಿಂದ ಪ್ರಾರಂಭ ಮಾಡಿ ೧೦೮ ಹಾಸುಕಲ್ಲುಗಳನ್ನು ದೇವಾಲಯದ ಸುತ್ತಲೂ ನೆಡಲಾಗಿದ್ದು ಈ ಕಲ್ಲುಗಳು ಸರಿಯಾಗಿ ದೇವಾಲಯದ ಬಲಭಾಗದಲ್ ಮಹಾದ್ವಾರದ ಮುಂಭಾಗದಲ್ಲಿ ಕೊನೆಗೊಳ್ಳುತ್ತವೆ. ಈ ರೀತಿಯ ವ್ಯವಸ್ಥೆ ಇರುವುದರಿಂದ ಸಾಯಿಭಕ್ತರು ಸಾಯಿ ನಾಮ   ಜಪವನ್ನು ಮಾಡುತ್ತಾ  "ಹೆಜ್ಜೆ ಪ್ರದಕ್ಷಿಣೆ" ಮಾಡಲು ಅನುಕೂಲವಾಗಿದೆ. 4.ಇಲ್ಲಿ ದ್ವಾರಕಾಮಾಯಿಯನ್ನು ಶಿರಡಿಯಲ್ಲಿರುವಂತೆ ನಿರ್ಮಿಸಲಾಗಿದ್ದು ಶಿರಡಿಯ ದ್ವಾರಕಾಮಾಯಿಯಲ್ಲಿರುವ ಎಲ್ಲಾ ವಸ್ತುಗಳನ್ನು ಇಲ್ಲಿ ಸಾಂಕೇತಿಕವಾಗಿ ಇರಿಸಲಾಗಿದೆ. 

ದೇವಾಲಯದಲ್ಲಿ ಅಮೃತ ಶಿಲೆಯ ಖಂಡೋಬ ಮತ್ತು ಅವನ ಪತ್ನಿಯರ ವಿಗ್ರಹಗಳು, ಸಾಯಿಬಾಬಾ, ಗಣಪತಿ, ದತ್ತಾತ್ರೇಯ ವಿಗ್ರಹಗಳನ್ನು ನೋಡಬಹುದು. ಅಲ್ಲದೆ, ಕಪ್ಪು ಶಿಲೆಯ ಶಿವಲಿಂಗ, ಆಂಜನೇಯ, ಸುಬ್ರಮಣ್ಯ, ಕೃಷ್ಣ, ರಾಮ, ಸೀತ, ಲಕ್ಷ್ಮಣ, ರಾಜರಾಜೇಶ್ವರಿ ವಿಗ್ರಹಗಳನ್ನು ಕೂಡ ಸಾಯಿಭಕ್ತರು ನೋಡಬಹುದು. ಅಲ್ಲದೆ, ಸಾಯಿಬಾಬಾ ಮತ್ತು ಲಕ್ಷ್ಮಿನರಸಿಂಹ  ದೇವರ ಪಂಚಲೋಹ ವಿಗ್ರಹಗಳನ್ನು ಕೂಡ ಇರಿಸಲಾಗಿದೆ. 

ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ವಿಗ್ರಹದ ಎದುರುಗಡೆಯಲ್ಲಿ ನಂದಿಯ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಪವಿತ್ರ ಧುನಿಯನ್ನು ಶಿರಡಿಯಲ್ಲಿರುವಂತೆ ದ್ವಾರಕಾಮಾಯಿಯಲ್ಲಿ ನಿರ್ಮಿಸಲಾಗಿದೆ. 

ಸಾಯಿಬಾಬಾ ಮಂದಿರದ ಹಿಂಭಾಗದಲ್ಲಿ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಇಲ್ಲಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ ಮತ್ತು ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
























ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 8 ಘಂಟೆಗೆ (ಗುರುವಾರ ಮತ್ತು ಭಾನುವಾರ ಹೊರತುಪಡಿಸಿ)

ಗುರುವಾರ ಮತ್ತು ಭಾನುವಾರಗಳಂದು ರಾತ್ರಿ 8:30 ಕ್ಕೆ ಶೇಜಾರತಿ ನಡೆಯುತ್ತದೆ. 
ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 30/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 
  1. ಶ್ರೀರಾಮನವಮಿ. 
  2. ಪ್ರತಿ ವರ್ಷದ 20ನೇ ಜುಲೈ (ಹತ್ತಿರದ ಭಾನುವಾರದಂದು) ದೇವಾಲಯದ ವಾರ್ಷಿಕೋತ್ಸವ. 
  3. ಗುರುಪೂರ್ಣಿಮಾ. 
  4. ವಿಜಯದಶಮಿ (ಸಾಯಿಬಾಬಾ ಸಮಾಧಿ ದಿವಸ). 
  5. ದತ್ತಜಯಂತಿ. 
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಟ್ರಸ್ಟ್ ನ ವತಿಯಿಂದ ದೇವಾಲಯದ ಎದುರುಗಡೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗಾಗಿ ಶಾಲೆಯನ್ನು ನಡೆಸಲಾಗುತ್ತಿದೆ. 

ದೇಣಿಗೆಗಾಗಿ ಮನವಿ: 

ದೇವಾಲಯದ ವತಿಯಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ನಡೆಸುತ್ತಿರುವ ಶಾಲೆಯ ಖರ್ಚುವೆಚ್ಚಗಳಿಗಾಗಿ ಮತ್ತು ದೇವಾಲಯದ ಇತರ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಣ ಸಹಾಯ ಮಾಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿ ಆನಂದಮಯಿ ಟ್ರಸ್ಟ್, ಬೆಂಗಳೂರು" ಇವರಿಗೆ ಸಂದಾಯವಾಗುವಂತೆ ಚೆಕ್ ಅಥವಾ ಡಿಡಿಯನ್ನು ಈ ಕೆಳಗೆ ನೀಡಿರುವ ದೇವಾಲಯದ ವಿಳಾಸಕ್ಕೆ ಸಂದಾಯ ಮಾಡಬಹುದು. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಅಮೃತ್ ಡಿಸ್ಟಿಲ್ಲರಿ ಹತ್ತಿರ, ಮೈಸೂರು ರಸ್ತೆಯಿಂದ 2 ಕಿಲೋಮೀಟರ್ ಒಳಗಡೆ. 

ವಿಳಾಸ:
ಶ್ರೀ ಶಿರಡಿ ಸಾಯಿ ಆನಂದಮಯಿ ಮಂದಿರ,
ಶ್ರೀ ಶಿರಡಿ ಸಾಯಿ ಅನಂದಮಯಿ ಟ್ರಸ್ಟ್,
ಹುಣಸೆಮರದಪಾಳ್ಯ,ಮೈಸೂರು ರಸ್ತೆ ಪಕ್ಕ,
ಅಮೃತ್ ಡಿಸ್ಟಿಲ್ಲರಿ ಹತ್ತಿರ, ಕೆಂಗೇರಿ ಹೋಬಳಿ, ಬೆಂಗಳೂರು, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಕ್ಯಾಪ್ಟನ್.ವಿ ವಿ.ಮಹೇಶ್ / ಶ್ರೀಮತಿ. ಸಂಯುಕ್ತ ಮಹೇಶ್

ದೂರವಾಣಿ:
+91 80 2843 7345 / +91 94481 16146 / +91 99804 79992

ಈ ಮೇಲ್ ವಿಳಾಸ:
vvmahesh@yahoo.com

ಮಾರ್ಗಸೂಚಿ:
ಹುಣಸೆಮರದಪಾಳ್ಯ  ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯದ ಎದುರುಗಡೆ ಬಸ್ ನಿಲ್ದಾಣ  ಇರುತ್ತದೆ.  ಬಸ್ ಸಂಖ್ಯೆಗಳು: 221 F, 221 H, 230, 230A.



ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment