Monday, February 28, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ಟ್ರಸ್ಟ್, 3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಶ್ರೀಕಂಟೇಶ್ವರ ನಗರ,  ಮಹಾಲಕ್ಷ್ಮಿ ಲೇಔಟ್ ಬಡಾವಣೆ, ಬೆಂಗಳೂರು-560 096, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯದ ಭೂಮಿಪೂಜೆಯನ್ನು 1983ನೇ ಇಸವಿಯಲ್ಲಿ ಮಾಡಲಾಯಿತು. 

ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ದೇವಾಲಯವು ಜುಲೈ 1983 ರಲ್ಲಿ ಪ್ರಾರಂಭವಾಯಿತು. ಶಿರಡಿ ಸಾಯಿಬಾಬಾರವರ ದೇವಾಲಯವನ್ನು 25ನೇ ಮಾರ್ಚ್ 2010 ರಂದು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಉದ್ಘಾಟಿಸಿದರು. 

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರಿಗೆ ಪ್ರತ್ಯೇಕ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ ಮತ್ತು ವಿಗ್ರಹದ ಮುಂಭಾಗದಲ್ಲಿ ಸಾಯಿ ಕೋಟಿ ಸ್ತೂಪವನ್ನು ನಿರ್ಮಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಪುಟ್ಟ ವಿಗ್ರಹವನ್ನು ಸಾಯಿ ಕೋಟಿ ಸ್ತೂಪದ ಮೇಲೆ ಇರಿಸಲಾಗಿದೆ. 

ದೇವಾಲಯದಲ್ಲಿ ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ದೇವರುಗಳಿಗೆ ಪ್ರತ್ಯೇಕ ಗರ್ಭಗುಡಿಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಸುಂದರ ಕಪ್ಪು ಶಿಲೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.  

ಈಶ್ವರ ದೇವಾಲಯದ ಗರ್ಭಗುಡಿಯ ಹೊರಗಡೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಪ್ರಾಂಗಣದಲ್ಲಿ ಕಪ್ಪು ಶಿಲೆಯ ನವಗ್ರಹ ದೇವರುಗಳನ್ನು ಸ್ಥಾಪಿಸಲಾಗಿದೆ. 

ದೇವಾಲಯದ ಹೊರಭಾಗದಲ್ಲಿ ಪವಿತ್ರ ಅರಳಿ ಮರದ ಕೆಳಗಡೆ ನಾಗದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. 














ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಮತ್ತು ಗುರುವಾರ 6:00 ಘಂಟೆಗೆ  
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಪ್ರತಿದಿನ ಸಂಜೆ 6:30 ಕ್ಕೆ ಮತ್ತು ಗುರುವಾರ ಸಂಜೆ 6 ಘಂಟೆಗೆ
ಶೇಜಾರತಿ: ಪ್ರತಿದಿನ ರಾತ್ರಿ 8:30 ಕ್ಕೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ

ಪ್ರತಿದಿನ ಎಲ್ಲಾ ದೇವರುಗಳಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 5/- ರುಪಾಯಿಗಳು. 
ಪ್ರತಿದಿನ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 150/- ರುಪಾಯಿಗಳು. 
ಪ್ರತಿ ತಿಂಗಳು ದೇವಾಲಯದಲ್ಲಿ ಸಂಕಷ್ಟ ಚತುರ್ಥಿಯನ್ನು ಸಂಜೆ 6:30ಕ್ಕೆ ಹಮ್ಮಿಕೊಳ್ಳಲಾಗುತ್ತದೆ. ಸೇವಾಶುಲ್ಕ 61/- ರುಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6:30ಕ್ಕೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 61/- ರುಪಾಯಿಗಳು. 
ಪ್ರತಿ ತಿಂಗಳ ತ್ರಯೋದಶಿಯ ದಿನದಂದು ಸಂಜೆ ಪ್ರದೋಷ ಪೂಜೆಯನ್ನು ಆಚರಿಸಲಾಗುತ್ತದೆ. ಅಭಿಷೇಕಕ್ಕೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ. 

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ - ದೇವಾಲಯದ ವಾರ್ಷಿಕೋತ್ಸವ.
2. ಶಿವರಾತ್ರಿ. 
3.ವಿನಾಯಕ ಚತುರ್ಥಿ.
4. ನವರಾತ್ರಿ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ಅಶೋಕ ಹೈಟ್ಸ್ ಅಪಾರ್ಟ್ ಮೆಂಟ್ ಹತ್ತಿರ. 

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ವಿನಾಯಕ, ಶ್ರೀಕಂಟೇಶ್ವರ, ಪ್ರಸನ್ನ ಪಾರ್ವತಿ, ಸುಬ್ರಮಣ್ಯಸ್ವಾಮಿ ಟ್ರಸ್ಟ್,
3ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಶ್ರೀಕಂಟೇಶ್ವರ ನಗರ,
ಮಹಾಲಕ್ಷ್ಮಿ ಲೇಔಟ್ ಬಡಾವಣೆ, ಬೆಂಗಳೂರು-560 096, ಕರ್ನಾಟಕ.


ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಹೆಚ್.ಕೆ.ರಂಗನಾಥ.

ದೂರವಾಣಿ:
+91 80 2337 5248 / +91 94489 92963 

ಮಾರ್ಗಸೂಚಿ:
ಮಹಾಲಕ್ಷ್ಮಿ ಲೇಔಟ್ ಕಡೆಯ ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ಹಿಂದಕ್ಕೆ ಸುಮಾರು 2 ನಿಮಿಷ  ನಡೆದರೆ ಅಶೋಕ ಹೈಟ್ಸ್ ಅಪಾರ್ಟ್ ಮೆಂಟ್ಸ್ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಮೊದಲನೇ ಮುಖ್ಯರಸ್ತೆ ಯಲ್ಲಿ ಸುಮಾರು 2 ನಿಮಿಷ ನಡೆದು 3ನೇ  ಅಡ್ಡರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಮಂದಿರ ಸಿಗುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment