Saturday, February 19, 2011

ಸಾಯಿ ಭಜನ ಗಾಯಕ - ಶ್ರೀ.ಮುಕುಂದ ರೋಲೆ - ಕೃಪೆ: ಸಾಯಿ ಅಮೃತಧಾರಾ.ಕಾಂ 

ಸಾಯಿ ಭಜನ ಗಾಯಕ ಶ್ರೀ.ಮುಕುಂದ ರೋಲೆ

ಶ್ರೀ.ಮುಕುಂದ ರೋಲೆಯವರು 25ನೇ ಮೇ 1964 ರಂದು ಕರ್ನಾಟಕದ ಮಂಡ್ಯ ನಗರದಲ್ಲಿ ದಿವಂಗತ ಶ್ರೀ.ರೋಲೆ ವೆಂಕಟಾಚಲಯ್ಯ ಮತ್ತು ದಿವಂಗತ ಶ್ರೀಮತಿ. ಆರ್.ವಿ.ಕಮಲಮ್ಮನವರ ಕಿರಿಯ ಮಗನಾಗಿ ಜನಿಸಿದರು. ಇವರ ತಂದೆಯವರು ಪ್ರಸಿದ್ದ ಕಲಾಕಾರರು, ಸಂಗೀತ ವಿದ್ವಾಂಸರು ಮತ್ತು ಹರಿಕಥಾ ವಿದ್ವಾನ್ ಆಗಿದ್ದರು. ಇವರು ಇವರ ತಂದೆಯವರಿಂದ ತಮ್ಮ 8ನೇ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸವನ್ನು ಪ್ರಾರಂಭಿಸಿದರು. 

ಇವರ ತಂದೆ ತಾಯಿಯವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರಾಗಿದ್ದರು. ಮಂಡ್ಯದ ಹಳೆ ನಗರ ಪ್ರದೇಶದ ಸಾಯಿ ಭಜನ ಮಂಡಳಿಯಲ್ಲಿ ಮಂಡ್ಯ ನಗರದಲ್ಲಿ ವಾಸವಿರುವ ತನಕವೂ ಕೂಡ ಪ್ರತಿ ಗುರುವಾರ ತಪ್ಪದೆ ಸಾಯಿ ಭಜನೆಯನ್ನು ಮಾಡುತ್ತಿದ್ದರು. ಮುಕುಂದ ರೋಲೆಯವರು ಕೂಡ ಮಂಡ್ಯ ನಗರದ ಬಾಲ ವಿಕಾಸ ಕೇಂದ್ರದಲ್ಲಿ ತಪ್ಪದೆ ಭಜನೆಯನ್ನು ಹಾಡುತ್ತಿದ್ದರು. ನಂತರ ಇವರ ಮನೆಯವರು ಬೆಂಗಳೂರಿನ ದೊಮ್ಮಲೂರು ಬಡಾವಣೆಯಲ್ಲಿ ಬಂದು ನೆಲೆಸಿದರು. ದೊಮ್ಮಲೂರಿನ ಸಾಯಿಬಾಬಾ ಸೇವಾ ಸಮಿತಿಯಲ್ಲಿ ಪ್ರತಿ ಗುರುವಾರ ತಪ್ಪದೆ ಭಜನೆಯ ಕಾರ್ಯಕ್ರಮವನ್ನು ಮುಂದುವರಿಸಿದರು. ಬೆಂಗಳೂರಿನಲ್ಲಿರುವಾಗ ಮುಕುಂದ ರೋಲೆಯವರು ತಮ್ಮ ತಂದೆ ತಾಯಿಯವರಿಂದ ಅನೇಕ ಸಾಯಿ ಭಜನೆಗಳನ್ನು ಹಾಡುವುದನ್ನು ಕಲಿತರು. ಇವರಿಗೆ "ಹೇ ಗೋವಿಂದ ಹೇ ಗೋಪಾಲ" ಮತ್ತು "ಹೇ ಮಾಧವ ಮಧುಸೂದನ" ಭಜನೆಗಳನ್ನು ಹಾಡುವುದೆಂದರೆ ಬಹಳ ಇಷ್ಟವಾದ ವಿಷಯವಾಗಿತ್ತು. 1989ನೇ ಇಸವಿಯಲ್ಲಿ ಇವರದೇ ಆದ "ಮುಕುಂದ ಮಿತ್ರ ಮಂಡಳಿ ಭಜನ ವೃಂದ" ವನ್ನು ಸ್ಥಾಪಿಸಿ ಇವರ ಸಹೋದರ ದಿವಂಗತ ಶ್ರೀ.ನಂದಾ ರಮೇಶ್ ರೋಲೆಯವರೊಂದಿಗೆ ಅಲಸೂರಿನ ಕೇಂಬ್ರಿಡ್ಜ್ ಬಡಾವಣೆಯಲ್ಲಿರುವ ಪ್ರತಿಷ್ಟಿತ ಸಾಯಿ ಸಮಾಜದಲ್ಲಿ ಪ್ರತಿ ಗುರುವಾರ ಭಜನೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುತ್ತಾರೆ.

ಶ್ರೀ.ಮುಕುಂದ ರೋಲೆಯವರು ಬೆಂಗಳೂರಿನ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಚೆನ್ನೈನ ಮೈಲಾಪುರ ಸಾಯಿಬಾಬಾ ಮಂದಿರ, ಕೊಯಂಬತ್ತೂರಿನ ನಾಗಸಾಯಿ ಮಂದಿರ ಮತ್ತು ದ್ವಾರಕಾಮಾಯಿ ಮಂದಿರ, ಟಿ.ಟಿ.ಪಾಳ್ಯದ ವೆಂಕೂಸಾಬಾಬಾ ಮಂದಿರ, ಸೇಲಂನ ಸಾಯಿಬಾಬಾ ಪಾದುಕಾ ಟ್ರಸ್ಟ್ ಮತ್ತಿತರ ಕಡೆಗಳಲ್ಲಿ ತಮ್ಮ ಭಜನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಶ್ರೀ.ಮುಕುಂದ ರೋಲೆಯವರು ಆಕಾಶವಾಣಿಯ "ಬಿ" ಶ್ರೇಣಿಯ ಕಲಾವಿದರಾಗಿದ್ದು ಕಳೆದ 25 ವರ್ಷಗಳಿಂದ ಭಾವಗೀತೆ ಹಾಗೂ ಸುಗಮ ಸಂಗೀತದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

ಶ್ರೀ.ಮುಕುಂದ ರೋಲೆಯವರು ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಅಭಿನಯಿಸಿದ ಕೆಲವು ಧಾರಾವಾಹಿಗಳೆಂದರೆ ಕೃಷ್ಣ ನೀ ಬೇಗನೆ ಬಾರೋ, ರೀ ಮರೀಬೇಡಿ, ಕಥಾ ವ್ಯಕ್ತಿ, ಕಲಿಕರ್ಣ, ಬೇಡವಾದ ಮಗು ಮತ್ತಿತರ ಧಾರಾವಾಹಿಗಳು.

ಬೆಂಗಳೂರಿನ ಅನೇಕ ಪ್ರತಿಷ್ಟಿತ ವಾದ್ಯಗೋಷ್ಠಿ ತಂಡದ ಸದಸ್ಯರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ. ಇವರು ಪ್ರತಿನಿಧಿಸುತ್ತಿರುವ ಕೆಲವು ವಾದ್ಯಗೋಷ್ಠಿಗಳೆಂದರೆ ನ್ಯೂ ಫೈವ್ ಸ್ಟಾರ್ ಮ್ಯುಸಿಕ್, ಶ್ರುತಿ ಮೆಲೋಡಿ ಏನ್ ಮ್ಯುಸಿಕ್ ಮತ್ತು ಇನ್ನು ಹಲವಾರು ವಾದ್ಯಗೋಷ್ಠಿಗಳು.

ಇವರು ದೇವಾಲಯಗಳಲ್ಲಿ ನೀಡಿದ ಭಜನೆಯ ಕಾರ್ಯಕ್ರಮಗಳಿಗೆ, ವಾದ್ಯಗೋಷ್ಠಿಯ ಕಾರ್ಯಕ್ರಮಗಳಿಗೆ ಮತ್ತು ಭಾವಗೀತೆಯ ಕಾರ್ಯಕ್ರಮಗಳಿಗಾಗಿ ಅನೇಕ ಪ್ರಶಸ್ತಿಗಳು, ಬಿರುದು ಪತ್ರಗಳನ್ನು ಮತ್ತು ಸನ್ಮಾನಗಳನ್ನೂ ಪಡೆದಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರು ಹಾಡಿರುವ ಸಾಯಿಬಾಬಾರವರ 6 ಭಜನೆಯ ಸಿಡಿಗಳನ್ನು ಇವರ ಧರ್ಮಪತ್ನಿಯವರಾದ ಶ್ರೀಮತಿ.ಇಂದಿರಾಣಿ ಮುಕುಂದ ಅವರು ಇತ್ತೀಚಿಗೆ ಜನವರಿ 2011 ರಲ್ಲಿ ಬಿಡುಗಡೆಗೊಳಿಸಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರ ಧರ್ಮಪತ್ನಿ ಮತ್ತು ಮಕ್ಕಳು ಇವರೊಡನೆ ವೃಂದಗಾನದಲ್ಲಿ ಹಾಡುವ ಮುಖಾಂತರ ಇವರಿಗೆ ಬಹಳ ಒಳ್ಳೆಯ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. 

ಶ್ರೀ.ಮುಕುಂದ ರೋಲೆಯವರು ತಮ್ಮ ಕೊನೆಯ ಉಸಿರಿರುವ ತನಕ ಸಾಯಿ ಭಜನೆಗಳನ್ನು  ಹಾಡುತ್ತಿರಬೇಕು ಮತ್ತು ಸಾಯಿ ಭಜನೆಗಳನ್ನು ಇಂದಿನ ಯುವ ಜನಾಂಗಕ್ಕೆ ಕಲಿಸಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ. 

ಶ್ರೀ.ಮುಕುಂದ ರೋಲೆಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಸಂಪರ್ಕದ ವಿವರಗಳು 
ಗಾಯಕರ ಹೆಸರು
ಶ್ರೀ.ವಿ.ಮುಕುಂದ ರೋಲೆ 
ವಿಳಾಸ
ಮುಕುಂದ ಮಿತ್ರ ಮಂಡಳಿ ಭಜನ ವೃಂದ, ನಂ.8,  ಫ್ಲಾಟ್ ಸಂಖ್ಯೆ 3-ಬಿ, ಎಂ.ಎಸ್. ಕ್ರಿಸ್ಟಲ್ ಅಪಾರ್ಟ್ ಮೆಂಟ್, ಮಲ್ಲೇಶಪಾಳ್ಯ  ಮುಖ್ಯರಸ್ತೆ, ಮಲ್ಲೇಶಪಾಳ್ಯ, ಬೆಂಗಳೂರು - 560 075, ಕರ್ನಾಟಕ, ಭಾರತ.
ದೂರವಾಣಿ
+91 98440 68330 / +91 98445 40431

ಈ ಮೇಲ್
ಇಲ್ಲ
ಅಂತರ್ಜಾಲ
ಇಲ್ಲ 
ಅಲ್ಬಮ್ ಗಳು
ಭಕ್ತಿ ಅಮೃತಾಂಜಲಿ, ಭಕ್ತಿ ಪುಷ್ಪಾಂಜಲಿ, ಭಕ್ತಿ ಗೀತಾಂಜಲಿ, ಭಕ್ತಿ  ಕುಸುಮಾಂಜಲಿ, ಶ್ರೀ ಸಾಯಿ ಕೃಪಾಂಜಲಿ, ಭಕ್ತಿ ಪ್ರೇಮಾಂಜಲಿ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ಗಾನಾಮೃತಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯಾಮೃತಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ನಾಮಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ  ಮಂದಿರಂ,ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ದರ್ಶನಂ, ಬ್ರಹ್ಮಾಂಡ  ನಾಯಕ ಬಾಬಾ ಶಿರಡಿ ಸಾಯಿ ದಿವ್ಯ ಅವತಾರ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment