Wednesday, December 8, 2010

ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, 28-416, ಆರ್.ಟನ್, ಕನ್ನಯ್ಯ ನಾಯ್ಡು ಕಾಲೋನಿ, ಗಂಗನಪಲ್ಲಿ, ಚಿತ್ತೂರು-517 001, ಆಂಧ್ರ ಪ್ರದೇಶ- ಕೃಪೆ: ಸಾಯಿಅಮೃತಧಾರಾ.ಕಾಂ 

ಶ್ರೀ.ಮುರುಗೇಶ್ ಎಂಬ ಅನನ್ಯ ಸಾಯಿಭಕ್ತರು ತಮ್ಮ ಮನೆಯ ಒಂದು ಭಾಗವನ್ನೇ ಸಾಯಿಬಾಬಾರವರ ಮಂದಿರವನ್ನಾಗಿ ಪರಿವರ್ತಿಸಿ ನಡೆಸುತ್ತಿದ್ದಾರೆ ಎಂಬುದು ಈ ಮಂದಿರದ ವಿಶೇಷ. ಈ ಮಂದಿರವು ಚಿತ್ತೂರಿನಿಂದ ಸ್ವಲ್ಪ ದೂರದಲ್ಲಿರುವ ಗಂಗನಪಲ್ಲಿ ಎಂಬ ಗ್ರಾಮದಲ್ಲಿರುತ್ತದೆ.


ಈ ಮಂದಿರದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:
  • ಈ ಮಂದಿರವು 1997ನೇ ಇಸವಿಯ ವಿಜಯದಶಮಿಯ ಪವಿತ್ರ ದಿನದಂದು ಉದ್ಘಾಟನೆಗೊಂಡಿತು. 
  • ಈ ಮಂದಿರದಲ್ಲಿ ಒಂದು ದೊಡ್ದದಾದ ಮತ್ತು ಮತ್ತೊಂದು ಚಿಕ್ಕ ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. 
  • ಸಾಯಿಬಾಬಾರವರ ವಿವಿಧ ಭಂಗಿಯ ಆಳೆತ್ತರದ ಚಿತ್ರಪಟವನ್ನು ಮಂದಿರದ ಒಳಗಡೆ ತೂಗುಹಾಕಲಾಗಿದೆ. 







ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ

ಆರತಿ  ಸಮಯ 
ಕಾಕಡ ಆರತಿ
6:00 AM
ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:00 PM
ಶೇಜಾರತಿ
9:30 PM

 ಪ್ರತಿದಿನ ಬೆಳಗಿನ ಜಾವ 7 ಘಂಟೆಗೆ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ಶ್ರೀರಾಮನವಮಿ.
  2. ಗುರುಪೂರ್ಣಿಮೆ.
  3. ವಿಜಯದಶಮಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ
28-416, ಆರ್.ಟನ್, ಕನ್ನಯ್ಯ ನಾಯ್ಡು ಕಾಲೋನಿ
ಗಂಗನಪಲ್ಲಿ, ಚಿತ್ತೂರು-517 001, ಆಂಧ್ರ ಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಮುರುಗೇಶ್

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 


+91 93933 06224

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment