Saturday, December 25, 2010

ಟವೇರಾ ಆಂಬುಲೆನ್ಸ್ ಕಾಣಿಕೆಯಾಗಿ ನೀಡಿದ ಜನರಲ್ ಮೋಟಾರ್ಸ್ ಇಂಡಿಯಾ (ಪುಣೆ) - 20ನೇ ಡಿಸೆಂಬರ್ 2010 - ಕೃಪೆ : ಸಾಯಿ ಅಮೃತಧಾರಾ.ಕಾಂ 

ಜನರಲ್ ಮೋಟಾರ್ಸ್ ಇಂಡಿಯಾ (ಪುಣೆ) ಘಟಕದ ಮ್ಯಾನೇಜರ್ ಶ್ರೀ.ರಾಕೇಶ್ ಸಬರ್ವಾಲ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಇದೇ ತಿಂಗಳ 20ನೇ ಡಿಸೆಂಬರ್ 2010 ರಂದು ಟವೇರಾ ಆಂಬುಲೆನ್ಸ್ ಕಾಣಿಕೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿ ಡಾ.ಏಕನಾಥ್ ಗೊಂಡಕರ್ ರವರು ಶ್ರೀ.ರಾಕೇಶ್ ಸಬರ್ವಾಲ್ ಮತ್ತು ಶ್ರೀಮತಿ.ನೀರಾ ಸಬರ್ವಾಲ್ ರವರನ್ನು ಸನ್ಮಾನಿಸಿದರು. ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಅಶೋಕ್ ಕಂಬೇಕರ್ ಮತ್ತು ಶ್ರೀ.ಪ್ರೀತೇಶ್ ಷಾ ರವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 





ಕನ್ನಡ ಅನುವಾದ : ಶ್ರೀಕಂಠ ಶರ್ಮ

No comments:

Post a Comment