Saturday, September 4, 2010

ಭಾರತದ ಸುಪ್ರಸಿದ್ದ ಕ್ರಿಕೆಟ್ ಪಟು ವೆಂಕಟ ಸಾಯಿ ಲಕ್ಷ್ಮಣ್ ರಿಂದ "ಸಾಯಿ ಭೋಧ" ತೆಲುಗು ಸಿಡಿ ಬಿಡುಗಡೆ - ಶ್ರೀ. ಎನ್.ಜಗನ್ನಾಥ್ ದಾಸ, ಎಕ್ಸ್ಪ್ರೆಸ್ ಬಜ್.ಕಾಂ 

ಭಾರತದ ಸುಪ್ರಸಿದ್ದ ಕ್ರಿಕೆಟ್ ಪಟು ಶ್ರೀ.ವೆಂಕಟ ಸಾಯಿ ಲಕ್ಷ್ಮಣ್ ತಮ್ಮ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ನಂತರ ತಮಗೆ ಇರುವ ಆಧ್ಯಾತ್ಮಿಕ ಆಸಕ್ತಿಯನ್ನು ಪ್ರಪಂಚದ ಎಲ್ಲಾ ಜನತೆಗೆ ತೋರ್ಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ನಲ್ಲಿ ಆಕರ್ಷಕ ಆಟವಾಡಿ ಭಾರತಕ್ಕೆ ವಿಜಯ ಮಾಲೆಯನ್ನು ತಂದು ಕೊಟ್ಟ ಲಕ್ಷ್ಮಣ್ ಭಾರತಕ್ಕೆ ಮರಳಿ ಬಂದ ಕೂಡಲೇ ನೇರ ಹೈದರಾಬಾದ್ ಗೆ ತೆರಳಿ ಅಲ್ಲಿ ಶಿರಡಿ ಸಾಯಿಬಾಬಾರವರ ಮೇಲೆ ಹೆಣೆಯಲಾದ ತೆಲುಗು ಹಾಡುಗಳ ಸಿಡಿಯನ್ನು 11ನೇ ಆಗಸ್ಟ್ 2010 ರಂದು  ಬಿಡುಗಡೆ ಮಾಡಿದ್ದಾರೆ. ಶ್ರೀ.ಲಕ್ಷ್ಮಣ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು.

ಲಕ್ಷ್ಮಣ್ ಮತ್ತು ಬಾಬಾ ಕೃಷ್ಣ ಮೋಹನ್ "ಸಾಯಿ ಭೋಧ" ಬಿಡುಗಡೆ ಸಮಾರಂಭದಲ್ಲಿ

ಸುಪ್ರಸಿದ್ದ ತೆಲುಗು ಚಲನಚಿತ್ರ ನಟರಾದ ಶ್ರೀ.ವೆಂಕಟೇಶ್, ಪ್ರಸಿದ್ದ ಬ್ಯಾಡ್ ಮಿಂಟನ್ ಪಟು ಶ್ರೀ.ಪುಲ್ಲೇಲ ಗೋಪಿಚಂದ್, ಹೈದರಾಬಾದ್ ಪೋಲಿಸ್ ಮಹಾ ಆಯುಕ್ತ ಶ್ರೀ.ಗಿರೀಶ್ ಕುಮಾರ್ ಮತ್ತು ಲಕ್ಷ್ಮಣ್ ರವರ ಚಿಕ್ಕಪ್ಪನವರಾದ  ಶ್ರೀ.ಬಾಬಾ ಕೃಷ್ಣ ಮೋಹನ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಆರ್.ಬಾಬಾ ಕೃಷ್ಣ ಮೋಹನ್ ಮತ್ತು  ಆರ್.ಸುಧಾ ರವರು ನಿರ್ಮಾಪಕರಾಗಿರುವ ಈ ಧ್ವನಿಸುರಳಿಯಲ್ಲಿ ಸಾಯಿ ಸಚ್ಚರಿತೆಯಲ್ಲಿ ತಿಳಿಸಿರುವ ಸಾಯಿಬಾಬಾರವರ ಉಪದೇಶಗಳನ್ನು ಅಳವಡಿಸಿ ತೆಲುಗಿನಲ್ಲಿ ಹಾಡುಗಳನ್ನು ರಚಿಸಲಾಗಿದೆ.

ಈ ಧ್ವನಿಸುರಳಿಯಲ್ಲಿ ಸುಪ್ರಸಿದ್ದ ಗಾಯಕರಾದ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಂ, ಶಂಕರ ಮಹಾದೇವನ್, ಬಾಂಬೆ ಜಯಶ್ರೀ ಮತ್ತು ಪ್ರಿಯ ಸಹೋದರಿಯರು ಹಾಡಿರುವ ಸಾಯಿಬಾಬಾರವರ ತೆಲುಗು ಭಕ್ತಿ ಗೀತೆಗಳಿವೆ. ಅಷ್ಟೇ ಆಲ್ಲದೇ, ಪ್ರತಿ ಭಕ್ತಿ ಗೀತೆಯ ಪ್ರಾರಂಭದಲ್ಲಿ ಆ ಹಾಡಿನ ಬಗ್ಗೆ ವಿವರವಾಗಿ ವ್ಯಾಖ್ಯಾನ ನೀಡಲಾಗಿದೆ.

ಈ ಸುಂದರ ಸಮಾರಂಭದ ವೀಡಿಯೋವನ್ನು ನೋಡಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ಕಿಸಿ:


No comments:

Post a Comment