Saturday, September 25, 2010

ರಾಯಲ್ ಆಲ್ಬರ್ಟ್ ಹಾಲ್ , ಲಂಡನ್ ನಲ್ಲಿ 19ನೇ ಸೆಪ್ಟೆಂಬರ್ 2010 ರಂದು ನಡೆದ ಸಾಯಿ ಭಕ್ತ ಸಮ್ಮೇಳನ - ಕೃಪೆ-ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ. 

ಇದೇ ಮೊದಲ ಬಾರಿಗೆ ಲಂಡನ್ ನ ರಾಯಲ್ ಆಲ್ಬರ್ಟ್ ಹಾಲ್ ನಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನವು 19ನೇ ಸೆಪ್ಟೆಂಬರ್ 2010, ಭಾನುವಾರದಂದು ಸಾಯಿ ಭಕ್ತ ಸಮ್ಮೇಳನವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಶ್ರೀ.ಜಯಂತ್ ಸಾಸನೆ, ಶ್ರೀ.ವಿಶ್ವನಾಥ್ ಕೃಷ್ಣಚಂದ್ರ ಪಾಂಡೆ, ಶ್ರೀ.ಶೈಲೇಶ್ ಕುಟೆ, ಕ್ಯಾಪ್ಟೆನ್ ಸುರೇಶ ವಾಸುದೇವ, ಪ್ರಸಿದ್ದ ಸಾಯಿ ಭಜನ ಗಾಯಕರಾದ "ಭಜನ ಸಾಮ್ರಾಟ್" ಶ್ರೀ.ಅನುಪ್ ಜಲೋಟ ಮತ್ತು ಶ್ರೀಮತಿ.ಅನುಪ್ ಜಲೋಟ ರವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಶುಭ ಸಂದರ್ಭದಲ್ಲಿ ಶ್ರೀ.ಅನುಪ್ ಜಲೋಟರವರು ತಮ್ಮ ಸುಮಧುರ ಸಾಯಿ ಭಜನೆಗಳಿಂದ ಸಾಯಿಭಕ್ತರನ್ನು ಮೈಮರೆಯುವಂತೆ ಮಾಡಿದರು.


ರಾಯಲ್ ಆಲ್ಬರ್ಟ್ ಹಾಲ್ ನ ಹೊರನೋಟ


ಭಜನ ಸಂಧ್ಯಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ಶ್ರೀ.ಅನುಪ್ ಜಲೋಟ

ಭಜನ ಸಂಧ್ಯಾ ಕಾರ್ಯಕ್ರಮದಲ್ಲಿ ನರೆದಿರುವ ಸಾವಿರಾರು ಸಾಯಿ ಭಕ್ತರು

ಸಾಯಿ ಭಕ್ತ ಸಮ್ಮೇಳನದಲ್ಲಿ ಪಾಲ್ಗೊಂಡ ಗಣ್ಯರು

ಶ್ರೀ ಜಯಂತ್ ಸಾಸನೆಯವರು ಶ್ರೀಮತಿ ಮತ್ತು ಶ್ರೀ.ಅನುಪ್ ಜಲೋಟ ರವರನ್ನು ಸನ್ಮಾನಿಸುತ್ತಿರುವುದು

No comments:

Post a Comment