Saturday, September 4, 2010

ಪ್ರಪಂಚದಾದ್ಯಂತ ಹರಡುತ್ತಿರುವ ಶಿರಡಿ ಸಾಯಿಬಾಬಾರವರ ಮಂದಿರಗಳು, ಆಂಧ್ರ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಭಾರತದ ಅತಿ ದೊಡ್ಡ ಮಂದಿರ - ಶ್ರೀ. ಮೋಹನ್ ಯಾದವ್, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀ.ಶಿರಡಿ ಸಾಯಿಬಾಬಾ ಸಂಸ್ಥಾನ, ಶಿರಡಿ

ಚೆನ್ನೈ ನಗರದ ಮೈಲಾಪುರ್ ಸಾಯಿಬಾಬಾ ಮಂದಿರದಲ್ಲಿ ಇತ್ತೀಚಿಗೆ ಜರುಗಿದ ಕುಂಭಾಭಿಷೇಕ ಮಹೋತ್ಸವವು ಸಾಯಿಬಾಬಾ ತಮ್ಮ ಭಕ್ತರನ್ನು ಹೇಗೆ ತಮ್ಮೆಡೆಗೆ ಆಕರ್ಷಿಸುತ್ತಾ ಇದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ.

ಭಾರತದ ಆಂಧ್ರಪ್ರದೇಶದಲ್ಲೇ ಸಾವಿರಾರು ಸಾಯಿಬಾಬಾ ಮಂದಿರಗಳಿವೆ. ಆಲ್ಲದೇ, ಚೆನ್ನೈ, ದೆಹಲಿ, ಹರ್ಯಾಣ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಅನೇಕ ಸಾಯಿ ಮಂದಿರಗಳು ತಲೆ ಎತ್ತಿವೆ.

ಸಾಯಿಯವರ ಭಾರತ ದೇಶಕ್ಕಷ್ಟೇ ಸೀಮಿತವಾಗಿರದೆ ಪ್ರಪಂಚದೆಲ್ಲೆಡೆ ಹರಡಿದೆ. ಅಮೇರಿಕ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಕೆನಡಾ, ಸಿಂಗಾಪುರ್, ಕೀನ್ಯ, ಇಂಡೋನೇಶಿಯ, ಮಲೇಶಿಯ, ಮಾರಿಷಸ್, ನ್ಯೂಜಿಲ್ಯಾಂಡ್, ತಾಂಜೇನಿಯ, ಇಂಗ್ಲೆಂಡ್, ಹಾಂಗ್ ಕಾಂಗ್, ಶ್ರೀಲಂಕ, ಕುವೈತ್, ಜಾಂಬಿಯಾ, ಜಪಾನ್, ಸೌದಿ ಅರೇಬಿಯಾ, ರಷ್ಯ, ನೆದರ್ ಲ್ಯಾಂಡ್, ಸ್ಪೇನ್, ಫಿಜಿ, ಬರ್ಮುಡಾ, ನಾರ್ವೆ, ವೆಸ್ಟ್ ಇಂಡೀಸ್ ಮತ್ತು ಇನ್ನು ಹಲವಾರು ರಾಷ್ಟ್ರಗಳಲ್ಲಿ ಸಾಯಿಬಾಬಾ ಮಂದಿರಗಳು ತಲೆ ಎತ್ತಿವೆ. ಈ ಮಂದಿರಗಳಲ್ಲಿ ಪ್ರತಿ ಗುರುವಾರ 500 ರಿಂದ 600 ಭಕ್ತರು ಬಂದು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿ ಹೋಗುವ ವಾಡಿಕೆ ಇಟ್ಟುಕೊಂಡಿದ್ದಾರೆ. 100 ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳು ಎಲ್ಲೆಡೆ ತಲೆ ಎತ್ತಿವೆ. ಚಿಕಾಗೋ ಸಮೀಪದ 120 ವರ್ಷಕ್ಕೂ ಹಳೆಯದಾದ ಪುರಾತನ ಚರ್ಚ್ ಒಂದರಲ್ಲಿ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಿರುವುದೇ ಆಲ್ಲದೇ ಪ್ರತಿನಿತ್ಯ 4 ಆರತಿಗಳನ್ನು ತಪ್ಪದೆ ಮಾಡುತ್ತಾರೆ.  1982 ರಲ್ಲಿ ಅಮೇರಿಕ ದೇಶದ ನ್ಯೂಯಾರ್ಕ್ ನಗರದಲ್ಲಿ ಪ್ರಥಮ ಸಾಯಿಬಾಬಾ ಮಂದಿರ ತಲೆ ಎತ್ತಿತು. ಈ ಮಂದಿರದಲ್ಲಿನ ವಿಗ್ರಹವನ್ನು ಮುಂಬೈನ ಪ್ರಸಿದ್ದ ಶ್ರೀ.ರಾಜು ತಾಲೀಮ್ ನಿರ್ಮಿಸಿದ್ದಾರೆ. ಈ ಸುಂದರ ವಿಗ್ರಹವನ್ನು 1998 ರಲ್ಲಿ ಪ್ರತಿಷ್ಟಾಪಿಸಲಾಯಿತು. ಅಮೇರಿಕಾದ ಸ್ಲೋಶಿಂಗ್ ಮತ್ತು ವಾಲ್ದವಿನ್ ನಗರದಲ್ಲೂ ಸಾಯಿ ಮಂದಿರಗಳಿವೆ. ಅಮೇರಿಕಾದ ಡಾ.ಕಾರ್ಲಿನ್ ಮ್ಯಾಕ್ಲೇನ್ ಮತ್ತು ಮೇರಿ ರಾಬರ್ಟ್ಸ್ ರವರು ಸಾಯಿಬಾಬಾರವರ ಜೀವನ ಚರಿತ್ರೆ ಮತ್ತು ಉಪದೇಶಗಳನ್ನು ವಿಷಯವಾಗಿ ತೆಗೆದುಕೊಂಡು ಅದರ ಬಗ್ಗೆ ಪಿ.ಹೆಚ್.ಡಿ.ಅಧ್ಯಯನ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಇವರುಗಳು 8 ದಿನ ಶಿರಡಿಯಲ್ಲಿ ತಂಗಿದ್ದು ಸಾಯಿಬಾಬಾರವರು ತಂಗುತ್ತಿದ್ದ ಸ್ಥಳಗಳು, ಪುಸ್ತಕಗಳು, ಕ್ಯಾಸೆಟ್ ಮತ್ತು ಸಿಡಿಗಳು, ಪ್ರಸಾದಾಲಯ, ಭಕ್ತಿ ನಿವಾಸ, ಸಾಯಿ ಆಸ್ಪತ್ರೆ ಮತ್ತು ಇನ್ನು ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದು ಹಿಂತಿರುಗಿದ್ದಾರೆ. ಆಸ್ಟ್ರೇಲಿಯದಲ್ಲಿ ಸಾಯಿಬಾಬಾರವರ 5 ಮಂದಿರಗಳಿದ್ದು ಸಿಡ್ನಿಯ ಮಂದಿರ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದೆ. ಕೆನಡಾದ ಟೊರಂಟೊ ಮತ್ತು ವಾನ್ಕುವರ್ ನಲ್ಲಿ ಸಾಯಿ ಮಂದಿರಗಳಿವೆ. ಮುಕ್ಕಾಲು ಪಾಲು ಸಾಯಿಬಾಬಾ ವಿಗ್ರಹಗಳು ರಾಜಸ್ತಾನದ ಜೈಪುರ್ ನಲ್ಲಿ ತಯಾರಾಗುತ್ತವೆ. ಈ ವಿಗ್ರಹಗಳನ್ನು ತಯಾರಿಸುವ ಬಹುತೇಕ ಮಂದಿ ಸಾಯಿಭಕ್ತರು ಎನ್ನುವುದು ಗಮನಾರ್ಹ ಅಂಶ.

ಆಂಧ್ರ ಪ್ರದೇಶ ಅತಿ ಹೆಚ್ಚು ಸಾಯಿ ಮಂದಿರಗಳನ್ನು ಹೊಂದಿರುವ ರಾಜ್ಯ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಅದಕ್ಕೆ ಮತ್ತೊಂದು ಕಿರೀಟ ಎಂಬಂತೆ ಮತ್ತೊಂದು ಬೃಹತ್ ಮಂದಿರ ತಿರುಪತಿಗೆ 35 ಕಿಲೋಮೀಟರ್ ದೂರದಲ್ಲಿ ಚೆನ್ನೈ-ತಿರುಪತಿ ಹೆದ್ದಾರಿಯಲ್ಲಿರುವ ನಗಾರಿಯ ಎಂಬಲ್ಲಿ ತಲೆ ಎತ್ತುತ್ತಿದೆ. ಈ ಮಂದಿರವು ಬೆಟ್ಟದ ಮೇಲೆ ಭೂಮಿಯಿಂದ ಸುಮಾರು 300 ರಿಂದ 400 ಅಡಿ ಎತ್ತರದಲ್ಲಿ ನಿರ್ಮಿತವಾಗುತ್ತಿದೆ. ಈ ಮಂದಿರ ಪೂರ್ಣವಾದಾಗ ಭಾರತದಲ್ಲೇ ಅತಿ ದೊಡ್ಡದಾದ ಸಾಯಿ ಮಂದಿರವೆಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಈ ಮಂದಿರವು 10 ಎಕರೆ ಪ್ರದೇಶದಲ್ಲಿ ಸುಮಾರು 10 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ಶಿರಡಿ ಸಾಯಿಬಾಬಾ ಸಂಸ್ಥಾನವು ಪ್ರತಿ ವರ್ಷ ರಾಮನವಮಿ, ಗುರುಪೂರ್ಣಿಮೆ, ಸಾಯಿಯವರ ಪುಣ್ಯತಿಥಿ ಉತ್ಸವಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಉತ್ಸವದ ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಲ್ಲಕ್ಕಿಯೊಡನೆ ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಾರೆ. ಸಾಯಿಯವರ ಮಹಾ ನಿರ್ವಾಣವಾಗಿ 9 ದಶಕಗಳು ಕಳೆದಿವೆ. ಆದರೆ ಸಾಯಿಯವರ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತಿನಿತ್ಯ ಹೆಚ್ಚುತ್ತಿರುವ ಸಾಯಿಭಕ್ತರ ಅನುಕೂಲಕ್ಕಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದವರು ಬೃಹತ್ ಪ್ರಸಾದಾಲಯ, ಸುಸಜ್ಜಿತ ಆಸ್ಪತ್ರೆ, ಭಕ್ತಿನಿವಾಸ, ದ್ವಾರಾವತಿ ಮತ್ತು ಇನ್ನು ಹಲವಾರು ವ್ಯವಸ್ಥೆಯನ್ನು ಮಾಡುತ್ತಲೇ ಬಂದಿದ್ದಾರೆ.

ಚೆನ್ನೈ ನಗರದ ಸಾಫ್ಟ್ ವೇರ್ ಉದ್ಯಮಿ ಶ್ರೀ.ಕೆ.ವಿ.ರಮಣಿ ಯವರು ಸಾಯಿ ಭಕ್ತರ ಅನುಕೂಲಕ್ಕಾಗಿ ಸಂಸ್ಥಾನಕ್ಕೆ 100 ಕೋಟಿ ರುಪಾಯಿಗಳನ್ನು ದೇಣಿಗೆಯಾಗಿ ನೀಡಿರುತ್ತಾರೆ. ಅಷ್ಟೇ ಆಲ್ಲದೇ "ಸಾಯಿ ಆಶ್ರಮ" ಎಂಬ ಸುಮಾರು 10000 ಭಕ್ತರಿಗೆ ಉಳಿದುಕೊಳ್ಳಲು ಸಹಾಯವಾಗುವಂತೆ ಬೃಹತ್ ಕಟ್ಟಡದ ಮೇಲ್ವಿಚಾರಣೆಯನ್ನು ಕೂಡ ವಹಿಸಿಕೊಂಡಿದ್ದಾರೆ.

ಶಿರಡಿ ಸಾಯಿಬಾಬಾ ಸಂಸ್ಥಾನವು 2018 ರಲ್ಲಿ ನಡೆಯಲಿರುವ ಸಾಯಿಬಾಬಾರವರ ಶತಮಾನೋತ್ಸವ ಸಮಾರಂಭಕ್ಕೆ ಈಗಿನಿಂದಲೇ ಅದ್ದೂರಿ ಸಿದ್ದತೆಗಳನ್ನು ನಡೆಸುತ್ತಿದೆ.

No comments:

Post a Comment