Saturday, February 1, 2014

ಪ್ರಪಂಚದ ಪ್ರಪ್ರಥಮ ಶ್ರೀ ಸಾಯಿಬಾಬಾರವರ ಬ್ಲೆಸ್ಸಿಂಗ್ ಕಾರ್ಡ್ - ಕೃಪೆ: ಸಾಯಿಅಮೃತಧಾರಾ.ಕಾಂ



ನವಿ ಮುಂಬೈನ ಪಬ್ಲಿಷಿಂಗ್ ಸಂಸ್ಥೆಯಾದ ಪ್ರಸಾರ್ ಕಮ್ಯುನಿಕೇಷನ್ಸ್ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ಶ್ರೀ ಸಾಯಿಬಾಬಾರವರ ಬ್ಲೆಸ್ಸಿಂಗ್ ಕಾರ್ಡ್ಅನ್ನು ಹೊರತಂದಿದೆ. 

ಈ ಬ್ಲೆಸ್ಸಿಂಗ್ ಕಾರ್ಡ್  ಗಳು ಟಾರಟ್ ಮತ್ತು ಏಂಜಲ್ ಕಾರ್ಡ್ ಗಳಂತಿದ್ದು ಶ್ರೀ ಸಾಯಿಬಾಬಾರವರ ಮಾರ್ಗದರ್ಶನದಂತೆ  ಅವರ 60 ಸೂಕ್ತಿಗಳನ್ನು ಆಯ್ದುಕೊಂಡು ಅವುಗಳನ್ನು ನಯನ ಮನೋಹರವಾದ ವಿನ್ಯಾಸದೊಂದಿಗೆ ಬಳಸಿಕೊಂಡು ಚಿತ್ರಗಳ  ಮುಖಾಂತರ ಅವರ ಸಂದೇಶವನ್ನು ಭಕ್ತರಿಗೆ ತಲುಪಿಸುವ ಉತ್ತಮ ಪ್ರಯತ್ನವನ್ನು ಮಾಡಲಾಗಿದೆ. ಸಾಯಿಬಾಬಾರವರ ಈ ಸಂದೇಶವನ್ನು ಓದಿ ಅರ್ಥ ಮಾಡಿಕೊಳ್ಳಲು ಯಾವುದೇ ವಿಶೇಷ ಪರಿಣತಿಯ ಅಗತ್ಯವಿರುವುದಿಲ್ಲ. ಇನ್ನೂ ಹೇಳಬೇಕೆಂದರೆ ಈ ಬ್ಲೆಸ್ಸಿಂಗ್ ಕಾರ್ಡ್  ಗಳ ಜೊತೆಗೆ ಇದನ್ನು ಬಳಸುವ ವಿಧಾನವನ್ನು ಕುರಿತು ಒಂದು ಮಾರ್ಗದರ್ಶಿ ಪುಸ್ತಕವನ್ನು ಸಹ ಕೊಡಲಾಗಿದೆ. 

"ಶ್ರೀ ಸಾಯಿಬಾಬಾರವರನ್ನು ಮನದಲ್ಲಿ ನೆನೆಸಿಕೊಂಡಾಗ ಅವರು ನಮ್ಮ ಬಳಿ ಬಂದು ನಮ್ಮ ಪ್ರಶ್ನೆಗೆ ಉತ್ತರವನ್ನು ನೀಡುವುದನ್ನು ನಾವುಗಳೆಲ್ಲಾ ನೋಡಿದ್ದೇವೆ. ಆದರೆ ನಾವುಗಳು ಸಂಕಷ್ಟಕ್ಕೆ ಸಿಲುಕಿ ನಮ್ಮ ಮನಸ್ಸು ಅಸ್ತವ್ಯಸ್ತವಾಗಿದ್ದಾಗ ಶ್ರೀ ಸಾಯಿಬಾಬಾರವರ ದನಿಯಾಗಲಿ ಅವರ ಮಾರ್ಗದರ್ಶನವಾಗಲಿ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದ ಕಾರಣ, ಶ್ರೀ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳು ಅಂತಹ ಸಂದರ್ಭಗಳಲ್ಲಿ ನಮಗೆ ಬಹಳ ಸಹಾಯಕವಾಗುತ್ತವೆ. ಈ ಬ್ಲೆಸ್ಸಿಂಗ್ ಕಾರ್ಡ್ ಗಳು  ನಮ್ಮ ಮನಸ್ಸಿನಲ್ಲಿ ಏಕಾಗ್ರತೆಯನ್ನು ತಂದುಕೊಂಡು ಶ್ರೀ ಸಾಯಿಬಾಬಾರವರಿಂದ ಅಥವಾ ಇನ್ಯಾವುದೇ ಆಧ್ಯಾತ್ಮಿಕ ಗುರುಗಳಿಂದ ಮಾರ್ಗದರ್ಶನ ಪಡೆಯಲು ಸಹಾಯ ಮಾಡುತ್ತವೆ" ಎಂದು ಪ್ರಸಾರ್ ಕಮ್ಯುನಿಕೇಷನ್ಸ್ ನ ಮಾಲೀಕರಾದ ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

"ಶ್ರೀ ಸಾಯಿಬಾಬಾರವರು ಈ ಅನನ್ಯ ಸ್ಪೂರ್ತಿದಾಯಕ ಕಲ್ಪನೆ ನನಗೆ ನೀಡಿ ಈ ಬ್ಲೆಸ್ಸಿಂಗ್ ಕಾರ್ಡ್ ಗಳ ಪರಿಕಲ್ಪನೆ, ತಯಾರಿಕೆ ಹಾಗೂ ವಿತರಣೆಯ ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶನ ನೀಡಿದ್ದಾರೆ" ಎಂದು ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

ಶ್ರೀ ಸಾಯಿಬಾಬಾರವರು ನನಗೆ ಈ ಕಲ್ಪನೆಯನ್ನು ಪ್ರಥಮ ಬಾರಿಗೆ 2010 ನೇ ಇಸವಿಯಲ್ಲಿ ನೀಡಿದ್ದರೂ ಸಹ ಆ ಕಾರ್ಯವನ್ನು ಕೈಗೆತ್ತಿಕೊಳ್ಳಲು ನಾನು ಹಿಂಜರಿದೆ. ಏಕೆಂದರೆ, ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಟಾರಟ್ ಮತ್ತು ಏಂಜಲ್ ಕಾರ್ಡ್ ಗಳು ಇರುವಾಗ ನನ್ನ ಈ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಯಾರು ಸ್ವೀಕರಿಸುತ್ತಾರೆ" ಎಂದು ನಾನು ಯೋಚನೆ ಮಾಡಿದೆ ಎಂದು ಶಂಷಾದ್ ಆಲಿ ಬೇಗ್ ರವರು ಹೇಳುತ್ತಾರೆ.

ಅಲ್ಲದೇ, ಶ್ರೀ ಸಾಯಿಬಾಬಾರವರ ಸಂದೇಶಗಳು ತತ್ವ ಸಂದೇಶಗಳಾಗಿದ್ದು, ಈಗಿನ ಲೌಕಿಕ ಪ್ರಪಂಚದಲ್ಲಿನ ಜನರ ದಿನನಿತ್ಯದ ತೊಂದರೆಗಳಾದ ಹಣಕಾಸು, ಕೆಲಸ, ಪ್ರೀತಿ, ಬಾಂಧವ್ಯ ಮತ್ತಿತರ ಹಲವಾರು ವಿಷಯಗಳನ್ನು ಕುರಿತು ಹೇಗೆ ಈ ಸಂದೇಶಗಳು ಸಹಾಯ ಮಾಡುತ್ತವೆ ಎಂದು ಯೋಚನೆಗೀಡಾದೆ ಎಂದು ಅವರು ಹೇಳುತ್ತಾರೆ. 

ಆದರೆ, ಮೇ 2012 ರಲ್ಲಿ ಒಂದು ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ದಿವ್ಯ ಸಂದೇಶವು ಜೋರಾಗಿ ಹಾಗೂ ಸ್ಪಷ್ಟವಾಗಿ ಕೇಳಿಸಿತು. ಒಂದು ಅಧಿವೇಶನದಲ್ಲಿ ಸಾಯಿಬಾಬಾರವರು ವೇದಿಕೆಯಲ್ಲಿ ನಿಂತು ನನ್ನನ್ನು ಕುರಿತು "ಹಣಕಾಸಿನ ಬಗ್ಗೆ ಏಕೆ ಚಿಂತಿಸುವೆ. ಅದೆಲ್ಲವನ್ನೂ ನಾನು ನೋಡಿಕೊಳ್ಳುವೆ. ಚಿಂತಿಸಬೇಡ. ನೀನು ಕೆಲಸವನ್ನು ಪ್ರಾರಂಭಿಸು. ನಿನಗೆ ನಾನು ಸಹಾಯ ಮಾಡುವೆ" ಎಂದು ಹೇಳುತ್ತಿರುವಂತೆ ಭಾಸವಾಯಿತು ಎಂದು ಶಂಷಾದ್  ನುಡಿಯುತ್ತಾರೆ. 

ಈ ಘಟನೆ ಶಂಷಾದ್ ರವರ ಜೀವನದಲ್ಲಿ ಮಹತ್ವದ ತಿರುವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಶಂಷಾದ್ ರವರು ತಮ್ಮ ಸಂಪೂರ್ಣ ಶಕ್ತಿಯನ್ನು ಈ ಯೋಜನೆಗೆ ವಿನಿಯೋಗಿಸಿದರು. "ಸಾಯಿಬಾಬಾರವರು ನುಡಿದಂತೆ ಅವರೇ ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು" ಎಂದು ಶಂಷಾದ್  ನಿಟ್ಟುಸಿರು ಬಿಡುತ್ತಾರೆ.

"ಬ್ಲೆಸ್ಸಿಂಗ್ ಕಾರ್ಡ್ ಗಳ ಮುದ್ರಣ ನಡೆಯುವಾಗ ಮತ್ತೊಂದು ಪವಾಡ ಜರುಗಿತು. ಎಲ್ಲಾ ಕಾರ್ಡ್ ಗಳು ಬಹಳ ಉತ್ತಮವಾಗಿ ಮುದ್ರಣವಾಗಿದ್ದವು. ಆದರೆ, ಒಂದು ಕಾರ್ಡ್ ನ ಬಣ್ಣವು ಸ್ವಲ್ಪ ಮಾಸಿ ಹೋಗಿ ಅಂದುಕೊಂಡಂತೆ ಮುದ್ರಣವಾಗಿರಲಿಲ್ಲ. ನಾನು ಇದು ಒಂದು ಸಣ್ಣ ತಪ್ಪಾಗಿದ್ದು ಯಾರಿಗೂ ಗೊತ್ತಾಗುವುದಿಲ್ಲ ಎಂದು ತಿಳಿದಿದ್ದೆ. ನನಗೆ ನಾನೇ ಸಮಾಧಾನ ತಂದುಕೊಂಡಿದ್ದರೂ ಸಹ ನನ್ನ ಮನಸ್ಸಿನಲ್ಲಿ ಆ ಒಂದು ಕಾರ್ಡ್ ಬಗ್ಗೆ ಯೋಚನೆ ಸುಳಿಯುತ್ತಲೇ ಇದ್ದಿತು. ಆಗ ನಾನು ಸಾಯಿಬಾಬಾರವರನ್ನು ಕುರಿತು ಪಾರ್ಥನೆ ಮಾಡಿಕೊಂಡೆ. ನಂತರ ಮುದ್ರಕರ ಬಳಿ ಈ ವಿಷಯ ಕುರಿತು ಪ್ರಸ್ತಾಪ ಮಾಡಿದೆ. ಆದರೆ ಮುದ್ರಕರು ಆ ಒಂದು ಕಾರ್ಡ್ ನ ಬಗ್ಗೆ ಏನೂ ಮಾಡಲು ಆಗುವುದಿಲ್ಲ ಎಂದು ತಲೆ ಅಲ್ಲಾಡಿಸಿದರು. ಆಗ ಅಲ್ಲಿಗೆ ಬಂದ ಮುದ್ರಣ ಮೇಲ್ವಿಚಾರಕರನ್ನು ಈ ಬಗ್ಗೆ ಕೇಳಿದಾಗ ಅವರು ಇದರ ಬಣ್ಣವನ್ನು ಸರಿ ಮಾಡಬಹುದು ಎಂದು ನುಡಿದರು. ಅಷ್ಟೇ ಅಲ್ಲದೆ ಆ ಕೂಡಲೇ ಕಾರ್ಯತತ್ಪರರಾಗಿ ಮುದ್ರಣ ಯಂತ್ರಕ್ಕೆ ಕೆಲವು ತಿದ್ದುಪಡಿ ಮಾದಿದರು. ಆ ಕ್ಷಣದಲ್ಲೇ ಆ ಕಳೆಗುಂದಿದ ಕಾರ್ಡ್ ಗೆ ಬದಲಾಗಿ ಉತ್ತಮ ಗುಣಮಟ್ಟದ ಕಾರ್ಡ್ ಗಳು ಹೊರಬರಲಾರಂಭಿಸಿತು" ಎಂದು ಶಂಷಾದ್ ಸಂತೋಷದಿಂದ ನುಡಿಯುತ್ತಾರೆ.

"ಮೊದಲು ಹಣವನ್ನು ಉಳಿಸುವ ಸಲುವಾಗಿ ಬ್ಲೆಸ್ಸಿಂಗ್  ಕಾರ್ಡ್ ಗಳನ್ನು ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಕೇವಲ ಎರಡು ಕರಪತ್ರಗಳನ್ನು ಇರಿಸಲು ಯೋಚನೆ ಮಾಡಿದ್ದೆ. ಆದರೆ, ಆಗಲೂ ಸಹ ಸಾಯಿಬಾಬಾರವರು ಮಾರ್ಗದರ್ಶನ ನೀಡಿ ಒಂದು ಸಣ್ಣ ಮಾರ್ಗದರ್ಶಿ ಪುಸ್ತಕವನ್ನು ಜೊತೆಗಿರಿಸುವಂತೆ ಸಲಹೆ ನೀಡಿದರು" ಎಂದು ಶಂಷಾದ್  ಹೇಳುತ್ತಾರೆ. 

ಸಾಯಿಬಾಬಾರವರು "ನಾನು ನನ್ನ ಭಕ್ತರನ್ನು ಈ ಬ್ಲೆಸ್ಸಿಂಗ್ ಕಾರ್ಡ್ ಗಳಲ್ಲಿರುವ ಚಿತ್ರಗಳ ಮುಖಾಂತರ, ಸಂದೇಶದ ಮುಖಾಂತರ, ಅವರಿಗೆ ವಿವೇಚನಾ ಶಕ್ತಿ ನೀಡುವ ಮುಖಾಂತರ, ಯಾವುದೋ ರೀತಿಯ ಶಬ್ದವನ್ನು ಮಾಡುವ ಮುಖಾಂತರ... ಹಾಗೂ ಇನ್ನು ಬೇರೆ ಬೇರೆ ರೀತಿಯಲ್ಲಿ ಆ ಸಂದರ್ಭಕ್ಕೆ ತಕ್ಕಂತೆ ಸಂದೇಶ ರವಾನಿಸುತ್ತೇನೆ ಎಂದು ಹೇಳುವ ಮುಖಾಂತರ ನನ್ನ ಮನದಲ್ಲಿ ಎದ್ದಿದ್ದ ಮೊದಲನೇ ಪ್ರಶ್ನೆಗೂ ಕೂಡ ಉತ್ತರ ನೀಡಿದರು" ಎಂದು ಶಂಷಾದ್ ಹೇಳುತ್ತಾರೆ.

ಆದರೆ "ಈ ಸಾಯಿಬಾಬಾ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಜ್ಯೋತಿಷ್ಯ ಹೇಳುವ ಸಲುವಾಗಿ ಬಳಸುವಂತಿಲ್ಲ. ಆದರೆ, ಕೇವಲ ದಿನನಿತ್ಯದ ಆಗು-ಹೋಗುಗಳಲ್ಲಿ ನಮಗೆ ಸಾಯಿಬಾಬಾರವರು ಮಾರ್ಗದರ್ಶನ ನೀಡಲು ಮಾತ್ರ ಬಳಸಬೇಕು" ಎಂಬ ಎಚ್ಚರಿಕೆಯ ಮಾತನ್ನು ಹೇಳುವುದನ್ನು ಶಂಷಾದ್ ಮರೆಯುವುದಿಲ್ಲ. 

ಈ ಬ್ಲೆಸ್ಸಿಂಗ್ ಕಾರ್ಡ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಈ ಬ್ಲೆಸ್ಸಿಂಗ್ ಕಾರ್ಡ್ ಗಳನ್ನು ಖರೀದಿಸಲು www.sai-blessings.com  ಜೋಡಣೆಯನ್ನು ಕ್ಲಿಕ್ಕಿಸಿ ಅಥವಾ saiblessings.now@gmail.com ಗೆ ಮಿಂಚಂಚೆಯನ್ನು ಕಳು ಹಿಸಬಹುದಾಗಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment