Monday, February 10, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರು ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ನೀಡಿರುವ ಉದಾರವಾದ ಕಾಣಿಕೆಯ ಸಹಾಯದಿಂದ ಶ್ರೀ ಸಾಯಿನಾಥ ಆಸ್ಪತ್ರೆಯು ಇದೇ ತಿಂಗಳ 16ನೇ ಫೆಬ್ರವರಿ 2014, ಭಾನುವಾರ ದಂದು ಒಂದು ದಿನದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ಈ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇತ್ರ ತಜ್ಞರನ್ನು ಕಾಣಬಯಸುವ ರೋಗಿಗಳು 16ನೇ ಫೆಬ್ರವರಿ 2014, ಭಾನುವಾರ ದಂದು ಶ್ರೀ ಸಾಯಿನಾಥ ಅಸ್ಪತ್ರೆಯಲ್ಲಿ ನಡೆಯಲಿರುವ ಈ ಶಿಬಿರಕ್ಕೆ ಆಗಮಿಸಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ತಪಾಸಣೆಯ ನಂತರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ರೋಗಿಗಳು ತಮ್ಮ ಹೆಸರನ್ನು ನೋಂದಾಯಿಸಬೇಕಾಗಿರುತ್ತದೆ. 17ನೇ ಫೆಬ್ರವರಿ  2014 ರಿಂದ 19ನೇ ಫೆಬ್ರವರಿ 2014 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಹಲವಾರು ನುರಿತ ನೇತ್ರ ತಜ್ಞರು ಸುಮಾರು 100 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಿದ್ದಾರೆ. ಅಲ್ಲದೇ, ಕಣ್ಣಿನ ದೃಷ್ಟಿ ಮಂದವಾಗಿರುವವರಿಗೆ ಉಚಿತ ಕನ್ನಡಕವನ್ನು ಸಹ ವಿತರಿಸಲಾಗುತ್ತದೆ ಹಾಗೂ ಇದರ ಸಂಪೂರ್ಣ ವೆಚ್ಚವನ್ನು ಸಹ ಮುಂಬೈನ ಸಾಯಿ ಭಕ್ತರಾದ ಶ್ರೀ. ಪ್ರಕಾಶ್ ಗಂಗವಾನಿಯವರೇ ಭರಿಸಲಿದ್ದಾರೆ ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಆದ ಕಾರಣ, ಯಾವುದೇ ರೀತಿಯ ಕಣ್ಣಿನ ತೊಂದರೆಯಿಂದ ಬಳಲುತ್ತಿರುವ ರೋಗಿಗಳು ದಿನಾಂಕ 16ನೇ ಫೆಬ್ರವರಿ 2014, ಭಾನುವಾರ ದಂದು ಬೆಳಿಗ್ಗೆ 7 ರಿಂದ ಮಧ್ಯಾನ್ಹ 1 ಗಂಟೆಯ ಒಳಗೆ  ಶ್ರೀ ಸಾಯಿನಾಥ ಅಸ್ಪತ್ರೆಗೆ ಬಂದು ತಮ್ಮ ಹೆಸರನ್ನು ನೋಂದಾಯಿಸಿ ಈ ನೇತ್ರ ತಪಾಸಣಾ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಅಜಯ್ ಮೋರೆಯವರು ಮನವಿ ಮಾಡಿಕೊಂಡಿದ್ದಾರೆ.


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment