Tuesday, February 25, 2014

ಶ್ರೀ ಸಾಯಿನಾಥ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ


ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರ ಸಹಯೋಗದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಶ್ರೀ ಸಾಯಿನಾಥ ಆಸ್ಪತ್ರೆಯು ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 343 ಕಣ್ಣಿನ ರೋಗಿಗಳಿಗೆ ಉಚಿತವಾಗಿ ಕನ್ನಡಕವನ್ನು ವಿತರಣೆ ಮಾಡಲಾಯಿತು ಎಂದು ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

16ನೇ ಫೆಬ್ರವರಿ 2014, ಭಾನುವಾರ ದಿಂದ 18ನೇ ಫೆಬ್ರವರಿ 2014, ಮಂಗಳವಾರ ದವರೆಗೆ ಶ್ರೀ ಸಾಯಿನಾಥ ಅಸ್ಪತ್ರೆಯಲ್ಲಿ ಈ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಉಚಿತ ಕನ್ನಡಕಗಳ ವಿತರಣೆ ಹಾಗೂ ಉಚಿತ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಎಂದು ಶ್ರೀ. ಅಜಯ್ ಮೋರೆಯವರು ತಿಳಿಸಿದರು. 


ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಒಟ್ಟು 450 ಕಣ್ಣಿನ ರೋಗಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ನೇತ್ರ ತಪಾಸಣೆಯ ನಂತರ 25 ರೋಗಿಗಳಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಯಿತು ಹಾಗೂ 343 ಕಣ್ಣಿನ ರೋಗಿಗಳಿಗೆ ಮುಂಬೈನ ಸಾಯಿಭಕ್ತರಾದ ಶ್ರೀ.ಪ್ರಕಾಶ್ ಗಂಗವಾನಿಯವರು ನೀಡಿದ ಉದಾರವಾದ ದೇಣಿಗೆಯ ಸಹಾಯದಿಂದ ಉಚಿತವಾಗಿ ಕನ್ನಡಕವನ್ನು ವಿತರಣೆ ಮಾಡಲಾಯಿತು. 


ಈ ಶಿಬಿರವನ್ನು ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಶ್ರೀ.ಅಪ್ಪಾಸಾಹೇಬ್ ಶಿಂಧೆ, ವೈದ್ಯಕೀಯ ಅಧೀಕ್ಷಕರಾದ ಡಾ.ಕೌಶಿಕ್ ಮಕ್ವಾನ, ವೈದ್ಯಕೀಯ ನಿರ್ದೇಶಕರಾದ ಶ್ರೀ.ಸಂಜಯ್ ಪತಾರೆ, ನೇತ್ರ ತಜ್ಞ ಡಾ.ಸುನೀಲ್ ಸೊಂಟಕ್ಕೆ, ಡಾ.ಎಸ್.ಮನೀಷಾ ಅಗರವಾಲ್ ಮತ್ತು ಇತರ ಆಸ್ಪತ್ರೆಯ ನೌಕರರ ಸಹಾಯದಿಂದ ಬಹಳ ಉತ್ತಮವಾಗಿ ಆಯೋಜಿಸಲಾಗಿತ್ತು ಹಾಗೂ ಅತ್ಯಂತ ಯಶಸ್ವಿಯಾಯಿತು.



ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment