Monday, October 21, 2013

ಖ್ಯಾತ ಚಲನಚಿತ್ರ ಬರಹಗಾರ ಹಾಗೂ ಸಾಯಿ ಬಂಧು ಶ್ರೀ.ಕೊಂಪೆಲ್ಲ ವಿಶ್ವಂ ಆಲಿಯಾಸ್ ಸಾಯಿ ಚರಣ ದೀಪ್ ವಿಧಿವಶ -ಕೃಪೆ:ಸಾಯಿಅಮೃತಧಾರಾ.ಕಾಂ



ಖ್ಯಾತ ಚಲನಚಿತ್ರ ಬರಹಗಾರ ಹಾಗೂ ಸಾಯಿ ಬಂಧು ಶ್ರೀ.ಕೊಂಪೆಲ್ಲ ವಿಶ್ವಂ ಆಲಿಯಾಸ್ ಸಾಯಿ ಚರಣ ದೀಪ್ ರವರು ಇದೇ  ತಿಂಗಳ 1ನೇ ಅಕ್ಟೋಬರ್ 2013, ಮಂಗಳವಾರ ದಂದು ರಾತ್ರಿ 11.30 ಕ್ಕೆ ಚನ್ನೈನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.ಅವರಿಗೆ 62 ವರ್ಷ ವಯಸ್ಸಾಗಿತ್ತು. ಶ್ರೀ ಸಾಯಿಬಾಬಾರವರ ತತ್ವಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಿದ್ದ ಸಾಯಿ ಚರಣ ದೀಪ್ ರವರು ಇತ್ತೀಚಿನ ವರ್ಷಗಳಲ್ಲಿ ಸಾಂಸಾರಿಕ ಜೀವನವನ್ನು ತೊರೆದು ಸಂತರ ಜೀವನವನ್ನು ನಡೆಸುತ್ತಿದ್ದರು. ತೆಲುಗಿನಲ್ಲಿ ಶಿರಡಿ ಸಾಯಿಬಾಬಾರವರ ಆರತಿಯನ್ನು ಕುರಿತು ಇವರು ರಚಿಸಿದ ಪುಸ್ತಕವು ಎಲ್ಲ ತೆಲುಗು ಸಾಯಿಭಕ್ತರಿಗೆ ಉಲ್ಲೇಖನೀಯ ಪುಸ್ತಕವಾಗಿತ್ತು ಎಂಬುದು ಇಲ್ಲಿ ಗಮನಾರ್ಹ. ಇವರು ಇತ್ತೀಚೆಗಷ್ಟೇ ಅಂದರೆ 28ನೇ ಸೆಪ್ಟೆಂಬರ್  2013 ರಂದು ಸಾಯಿಬಾಬಾರವರ ದರ್ಶನವನ್ನು ಮಾಡಿ ಶಿರಡಿಯಿಂದ ಹಿಂತಿರುಗಿದ್ದರು. ಇವರ ಅಂತಿಮ ಕಾರ್ಯಗಳನ್ನು 3ನೇ ಅಕ್ಟೋಬರ್ 2013 ರಂದು ಚನ್ನೈನಲ್ಲಿ ನಡೆಸಲಾಗುವುದೆಂದು ತಿಳಿದುಬಂದಿರುತ್ತದೆ. 

ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ ಹಾಗೂ ಸಾಯಿಅಮೃತವಾಣಿ ಬ್ಲಾಗ್ ನ ತಂಡವು ಈ ಖ್ಯಾತ ಸಾಯಿ ಬಂಧುವಿನ ಅಕಾಲಿಕ ಮರಣಕ್ಕೆ ಅತೀವ ಶೋಕವನ್ನು ವ್ಯಕ್ತಪಡಿಸುತ್ತದೆ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಯಿಬಾಬಾರವರಲ್ಲಿ ಪ್ರಾರ್ಥನೆ ಮಾಡುತ್ತದೆ. ಅಲ್ಲದೇ, ಅವರ ಮನೆಯವರಿಗೆ ಈ  ಅಕಾಲಿಕ ಮರಣದ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಸಾಯಿಬಾಬಾರವರನ್ನು ಪ್ರಾರ್ಥಿಸುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment