Saturday, May 5, 2012

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ), ಶ್ರೀ  ಭಜನೆ  ಹಟ್ಟಿ  ರಂಗಪ್ಪ ಸರ್ಕಲ್, ದೊಡ್ಡಬಳ್ಳಾಪುರ, ಬೆಂಗಳೂರು  ಗ್ರಾಮಾಂತರ ಜಿಲ್ಲೆ-561 203, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ 


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್ ನ ಬಳಿ  ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿದೆ.

ಈ ದೇವಾಲಯದ ಭೂಮಿಪೂಜೆಯನ್ನು ಫೆಬ್ರವರಿ 2007 ರಲ್ಲಿ ಮಾಡಲಾಯಿತು.

ಈ ದೇವಾಲಯವನ್ನು 29ನೇ ಮಾರ್ಚ್ 2012 ರಂದು "ನಡೆದಾಡುವ ದೇವರು"  ಎಂದೇ  ಪ್ರಸಿದ್ಧಿ  ಪಡೆದಿರುವ  ಡಾಕ್ಟರ್  ಶ್ರೀ  ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಉದ್ಘಾಟಿಸಿದರು. ಬೆಂಗಳೂರಿನ  ಗಿರಿನಗರ  ಶಿರಡಿ  ಸಾಯಿಬಾಬಾ  ಮಂದಿರದ ಶ್ರೀ ಶ್ರೀ ಶ್ರೀ ಗೋಪಾಲಕೃಷ್ಣ ಬಾಬಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀ ಹೆಚ್.ಪಿ.ಶಂಕರ್ ರವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಸೇವಾಶ್ರಮ ಟ್ರಸ್ಟ್ ನ  ಆಡಳಿತ  ಮಂಡಳಿಯ ಸದಸ್ಯರು ಈ ದೇವಾಲಯದ ದಿನನಿತ್ಯದ  ಆಗುಹೋಗುಗಳನ್ನು  ಮತ್ತು  ಅಭಿವೃದ್ಧಿ  ಕಾರ್ಯಗಳನ್ನು  ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿ ಮಂದಿರವಿದ್ದು ಮಂದಿರದ ಮಧ್ಯಭಾಗದಲ್ಲಿ 6 ಅಡಿ ಎತ್ತರದ ಸುಂದರ  ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಇಕ್ಕೆಲದಲ್ಲಿ 3 ಅಡಿ ಎತ್ತರದ ಗಣಪತಿ ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ  ವಿಗ್ರಹದ  ಮುಂಭಾಗದಲ್ಲಿ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಸುಮಾರು 1 ಅಡಿ ಎತ್ತರದ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳನ್ನು ಕೂಡ ಮಂದಿರದಲ್ಲಿ ನೋಡಬಹುದು.

ದೇವಾಲಯದ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದ್ದು, ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8  ಗಂಟೆಯವರೆಗೆ ಮತ್ತು ಸಂಜೆ 6 ಗಂಟೆಯಿಂದ 7:30 ರ ವರೆಗೆ ತೆರೆದಿರುತ್ತದೆ. 

ದೇವಾಲಯದ ಹೊರ ಆವರಣದ ಎಡಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ ದೇವಾಲಯದ  ಹೊರ  ಆವರಣದ ಮಧ್ಯಭಾಗದಲ್ಲಿ ತುಳಸಿ ಬೃಂದಾವನವನ್ನು ಕೂಡ ಸ್ಥಾಪಿಸಲಾಗಿದೆ.
















ದೇವಾಲಯದ ಕಾರ್ಯಚಟುವಟಿಕೆಗಳು:  
 
ದಿನನಿತ್ಯದ ಕಾರ್ಯಕ್ರಮಗಳು:
 
ದೇವಾಲಯದ ಸಮಯ: 
 
ಬೆಳಿಗ್ಗೆ 6:30 ರಿಂದ 12:30 ರವರೆಗೆ.
ಸಂಜೆ 4:30 ರಿಂದ 8:00 ರವರೆಗೆ. 
 
ಆರತಿಯ ಸಮಯ:  
 
ಕಾಕಡಾ ಆರತಿ  - ಬೆಳಿಗ್ಗೆ 6:30 ಗಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ - ಸಂಜೆ 6 ಗಂಟೆಗೆ 
ಶೇಜಾರತಿ - ರಾತ್ರಿ 8 ಗಂಟೆಗೆ 
 
ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ 8:30 ಕ್ಕೆ ಪಂಚಲೋಹದ ಗಣಪತಿ, ದತ್ತಾತ್ರೇಯ ಹಾಗೂ ಸಾಯಿಬಾಬಾರವರ ವಿಗ್ರಹಗಳಿಗೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. 
 
ಮಂದಿರದಲ್ಲಿ  ಶಾಶ್ವತ ಪೂಜೆಯನ್ನು ಮಾಡಲು ಸಾಯಿಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 5000/- ರೂಪಾಯಿಗಳು.
 
ವಿಶೇಷ ದಿನಗಳು:   
 
ತಿಂಗಳ ಪ್ರತಿ ಹುಣ್ಣಿಮೆಯ ದಿನ ಬೆಳಿಗ್ಗೆ 9:30 ರಿಂದ 11:30 ರವರೆಗೆ  ಸತ್ಯನಾರಾಯಣ  ಪೂಜೆಯನ್ನು  ಮಾಡಲಾಗುತ್ತದೆ. ಸೇವಾ ಶುಲ್ಕ 25/- ರೂಪಾಯಿಗಳು. 
 
ವಿಶೇಷ ಉತ್ಸವದ ದಿನಗಳು: 
 
1. ಪ್ರತಿವರ್ಷ  29ನೇ ಮಾರ್ಚ್ ದೇವಾಲಯದ ವಾರ್ಷಿಕೋತ್ಸವ. 
2. ಶ್ರೀ ರಾಮನವಮಿ. 
3. ಗುರುಪೂರ್ಣಿಮೆ. 
4. ಗೋಕುಲಾಷ್ಟಮಿ.
5. ವಿಜಯದಶಮಿ. 
6. ದತ್ತ ಜಯಂತಿ. 
 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಆವರಣದಲ್ಲಿ ವಾರದಲ್ಲಿ ಒಂದು ದಿನ ತಜ್ಞ ವೈದ್ಯರು ಮಕ್ಕಳ  ಆರೋಗ್ಯ  ತಪಾಸಣೆ  ಮಾಡಿ  ಉಚಿತವಾಗಿ  ಔಷಧಿಗಳನ್ನು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ದೇವಾಲಯದ ಧ್ಯಾನಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ಮತ್ತು ಧ್ಯಾನದ ತರಗತಿಯನ್ನು ನಡೆಸಲಾಗುತ್ತಿದೆ. 

ದೇಣಿಗೆಗೆ ಮನವಿ: 
 
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ) ಯು ದೇವಾಲಯದ ಅಭಿವೃದ್ಧಿ  ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು / ಚೆಕ್/ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ),ದೊಡ್ಡಬಳ್ಳಾಪುರ" ಇವರಿಗೆ  ಸಂದಾಯವಾಗುವಂತೆ  ಕಾರ್ಪೋರೇಶನ್  ಬ್ಯಾಂಕ್ ಖಾತೆ ಸಂಖ್ಯೆ 22817 ಮತ್ತು ಟಿ.ಎಂ.ಸಿ.ಬ್ಯಾಂಕ್ ಖಾತೆ ಸಂಖ್ಯೆ 463  ಖಾತೆಗಳಿಗೆ  ಹಣವನ್ನು  ಸಂದಾಯ ಮಾಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ: 

ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್.
 
ವಿಳಾಸ: 
 
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಮತ್ತು ಸೇವಾಶ್ರಮ ಟ್ರಸ್ಟ್ (ನೋಂದಣಿ)
ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್,
ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ-561 203, 
ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಹೆಚ್.ಪಿ.ಶಂಕರ್ - ಗೌರವ ಅಧ್ಯಕ್ಷರು / ಶ್ರೀ.ಬಿ.ಸಿ.ಅನಂತ ಮುರ್ತಿ - ಕಾರ್ಯದರ್ಶಿ / ಶ್ರೀ.ಬಿ.ಸಿ.ಜನಾರ್ಧನ - ಕಾನೂನು  ಸಲಹೆಗಾರರು / ಶ್ರೀ.ಕೆ.ಎನ್.ದೇವರಾಜ್ - ಖಚಾಂಚಿ.

ದೂರವಾಣಿ ಸಂಖ್ಯೆಗಳು: 

+91 94803 66165 -  ಕಾರ್ಯದರ್ಶಿ / +91 99800 52055 - ಕಾನೂನು ಸಲಹೆಗಾರರು /  +91 99640 49005 - ಖಚಾಂಚಿ.

ಇ ಮೇಲ್ ವಿಳಾಸ:

Vijay.bcj5@gmail.com 


ಮಾರ್ಗಸೂಚಿ: 

ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೃದಯ ಭಾಗವಾದ ಶ್ರೀ ಭಜನೆ ಹಟ್ಟಿ ರಂಗಪ್ಪ ಸರ್ಕಲ್ ನ ಬಳಿ ಇದೆ. ದೇವಾಲಯವು ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ನಡಿಗೆಯ  ಅಂತರದಲ್ಲಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೇರಳವಾಗಿ ಬಿಎಂಟಿಸಿ ಬಸ್ ಗಳು (285M),  ಕರ್ನಾಟಕ  ರಾಜ್ಯ  ರಸ್ತೆ  ಸಾರಿಗೆ  ಸಂಸ್ಥೆ ಬಸ್ ಗಳು ಮತ್ತು ಖಾಸಗಿ ಬಸ್ ಗಳ ಸೌಲಭ್ಯವಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment