Saturday, May 19, 2012

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದ ವತಿಯಿಂದ 2ನೇ ವಾರ್ಷಿಕೋತ್ಸವದ ಆಚರಣೆ  - ಕೃಪೆ: ಸಾಯಿಅಮೃತಧಾರಾ.ಕಾಂ  

ಬೆಂಗಳೂರಿನ ಜಯನಗರದಲ್ಲಿರುವ ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರವು ಇದೇ ತಿಂಗಳ 25, 26 ಮತ್ತು 27ನೇ ಮೇ 2012 ರಂದು ತನ್ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಕಾರ್ಯಕ್ರಮದ ವಿವರಗಳು ಈ ಕೆಳಕಂಡಂತೆ ಇವೆ:

25ನೇ ಮೇ 2012, ಶುಕ್ರವಾರ  

ಸಂಜೆ 6 ರಿಂದ 8 ರವರೆಗೆ   
 
ರಮಣ ಮಹರ್ಷಿ ಅಂಧರ ಶಾಲೆ ಹಾಗೂ ಸಮರ್ಥನಂ ಟ್ರಸ್ಟ್ ನ ಮಕ್ಕಳಿಂದ ನೃತ್ಯ ಕಾರ್ಯಕ್ರಮ. ನೃತ್ಯ ನಿರ್ದೇಶನ - ರಕ್ಷಾ ಡ್ಯಾನ್ಸ್ ಗ್ರೂಪ್.

ರಾತ್ರಿ 8 ರಿಂದ 8:30 ರವರೆಗೆ 

ಆರತಿ ಮತ್ತು ಪ್ರಸಾದ ವಿನಿಯೋಗ. 

26ನೇ ಮೇ 2012, ಶನಿವಾರ 

ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ 

ಅಖಂಡ ಶ್ರೀ ಸಾಯಿ ಸಚ್ಚರಿತ್ರೆ ಪಾರಾಯಣ (ಎಲ್ಲಾ ಭಾಷೆಗಳಲ್ಲಿ).

ಸಂಜೆ 6 ರಿಂದ 10 ಗಂಟೆಯವರೆಗೆ 

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದಿಂದ ಬಿಟಿಎಂ ಬಡಾವಣೆಯಲ್ಲಿರುವ ಶ್ರೀ ಸಾಯಿಬಾಬಾ ಆನಂದ  ಆಶ್ರಮದ  ವರೆಗೆ ಮತ್ತು ಪುನಃ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದವರೆಗೆ  ಪಲ್ಲಕ್ಕಿ ಉತ್ಸವ.

ರಾತ್ರಿ 10 ಗಂಟೆಗೆ 
 
ಆರತಿ ಮತ್ತು ಪ್ರಸಾದ ವಿನಿಯೋಗ. 
 
27ನೇ ಮೇ 2012, ಭಾನುವಾರ 

ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ 

ಅಖಂಡ ಸಾಯಿನಾಮ ಜಪವಾದ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಕಾರ್ಯಕ್ರಮ. ನಾಮಜಪ ಮುಕ್ತಾಯವಾದ ನಂತರ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರದ ಆವರಣದಲ್ಲಿ ಪಲ್ಲಕ್ಕಿ ಉತ್ಸವ.
 
ರಾತ್ರಿ 8 ರಿಂದ 8:30 ರವರೆಗೆ 
 
ಆರತಿ ಮತ್ತು ಪ್ರಸಾದ ವಿನಿಯೋಗ.
 

ಸ್ಥಳ: 
 
ಶ್ರೀ.ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ, 3ನೇ ಮಹಡಿ, (ಕೆಫೆ ಕಾಫಿ ಡೇ ಮೇಲೆ)
ನಂ.1481, ಸೌತ್ ಎಂಡ್ "ಬಿ" ಅಡ್ಡರಸ್ತೆ, 28ನೇ ಮುಖ್ಯರಸ್ತೆ, 
9ನೇ ಬ್ಲಾಕ್, ರಾಗಿಗುಡ್ಡ ದೇವಾಲಯದ ಬಳಿ, 
ಜಯನಗರ, ಬೆಂಗಳೂರು-560 069.
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀಮತಿ.ಇಂದು ಮತ್ತು ಶ್ರೀ.ಆರ್.ಸತೀಶ್ 
ದೂರವಾಣಿ ಸಂಖ್ಯೆ: +91 93412 64696 
ಮಾರ್ಗಸೂಚಿ: ಈಸ್ಟ್ ಎಂಡ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ಧ್ಯಾನಮಂದಿರ ಸಿಗುತ್ತದೆ. 


ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಲಿಫ್ಟ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಧ್ಯಾನ ಮಂದಿರದ ಕಾರ್ಯಕಾರಿ ಸಮಿತಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment