Monday, November 21, 2011

ಗೋವಾ ರಾಜ್ಯದ ಮುಖ್ಯಮಂತ್ರಿಗಳ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ  

ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ.ದಿಗಂಬರ ಕಾಮತ್ ಮತ್ತು ಅವರ ಕುಟುಂಬದವರು ಇದೆ ತಿಂಗಳ 21ನೇ ನವೆಂಬರ್ 2011, ಸೋಮವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ್ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಅವರುಗಳು ಕೂಡ ಉಪಸ್ಥಿತರಿದ್ದರು.  



ಸಾಯಿಬಾಬಾರವರ ಸಮಾಧಿ ದರ್ಶನದ ನಂತರ ಶ್ರೀ.ದಿಗಂಬರ ಕಾಮತ್ ಮತ್ತು ಅವರ ಕುಟುಂಬದವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಸುರೇಶ್ ವಾಬ್ಲೆ ಮತ್ತು ಶ್ರೀ.ಅಶೋಕ್ ಕಂಬೇಕರ್ ಅವರುಗಳು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ನೀಡುವ ಮುಖಾಂತರ ಸನ್ಮಾನಿಸಿದರು. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment