Saturday, November 19, 2011

ಭಾರತದ ಅಪ್ರತಿಮ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ 

ಭಾರತದ ಅಪ್ರತಿಮ ಕ್ರಿಕೆಟ್ ಆಟಗಾರ ಶ್ರೀ.ವಿ.ವಿ.ಎಸ್.ಲಕ್ಷ್ಮಣ್ ರವರು ಇದೇ ತಿಂಗಳ 19ನೇ ನವೆಂಬರ್ 2011, ಶನಿವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಕ್ಯಾಪ್ಟನ್.ಸುರೇಶ್ ವಾಸುದೇವರವರು ಕೂಡ ಉಪಸ್ಥಿತರಿದ್ದರು. 



ಸಮಾಧಿ ದರ್ಶನದ ನಂತರ ಶ್ರೀ.ಲಕ್ಷ್ಮಣ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಕ್ಯಾಪ್ಟನ್.ಸುರೇಶ್ ವಾಸುದೇವರವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment