Tuesday, June 29, 2010

ಸಾಯಿ ಭಜನ ಗಾಯಕರು - ಶ್ರೀ. ಗಂಗಾಧರ ತಿಲಕ್, ಶ್ರೀ. ಕಾರ್ತಿಕ್ ಮತ್ತು ಶ್ರೀ. ಶಿವಚರಣ್ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಶ್ರೀ. ಗಂಗಾಧರ ತಿಲಕ್ ರವರು ಶಿರಡಿ ಸಾಯಿಬಾಬಾರವರ ದಿವ್ಯಗಾನಾಮೃತವನ್ನು ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ತಮ್ಮ ಇಬ್ಬರು ಪುತ್ರರಾದ ಶ್ರೀ. ಕಾರ್ತಿಕ್ ಹಾಗೂ ಶ್ರೀ ಶಿವಚರಣ್ ರವರೊಂದಿಗೆ 1985 ರಲ್ಲಿ ಪ್ರಾರಂಭಿಸಿದರು. ಇವರ ಕುಟುಂಬದವರೆಲ್ಲರೂ ಅನನ್ಯ ಸಾಯಿ ಭಕ್ತರಾಗಿದ್ದು ಅನೇಕ ಭಕ್ತರಿಗೆ ಸಾಯಿಬಾಬಾರವರ ಮಹಿಮೆಯನ್ನು ಕುರಿತು ಭೋದನೆಯನ್ನು ಮಾಡಿ ಅವರು ಕೂಡ ಅನನ್ಯ ಸಾಯಿಭಕ್ತರಾಗುವಂತೆ ಅನವರತವೂ ಶ್ರಮಿಸುತ್ತಿದ್ದಾರೆ.

ಶ್ರೀ. ಗಂಗಾಧರ ತಿಲಕ್ ರವರು ತಮ್ಮ ಸುಶ್ರಾವ್ಯವಾದ ಧ್ವನಿಯಿಂದ ಸಾವಿರಾರು ಸಾಯಿ ಭಜನೆಗಳನ್ನು ಹಾಡಿ ಬೆಂಗಳೂರಿನ ಸಾಯಿಭಕ್ತರಿಗೆಲ್ಲ ಚಿರಪರಿಚಿತರಾಗಿದ್ದರೆ. ಇವರ "ದೇವಿ ಭವಾನಿ ಮಾ" ಹಾಗೂ "ಭಸ್ಮ ಭೂಷಿತಾಂಗ ಸಾಯಿ ಚಂದ್ರಶೇಖರ" ಭಜನೆಗಳು ಸಾಯಿಭಕ್ತರನ್ನು ಮಂತ್ರಮುಗ್ದರನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಶ್ರೀ. ಕಾರ್ತಿಕ್ ರವರು ಕೇವಲ ಸುಶ್ರಾವ್ಯವಾಗಿ ಸಾಯಿ ಭಜನೆಯನ್ನು ಹಾಡುವುದೇ ಆಲ್ಲದೇ ಉತ್ತಮ ತಬಲಾ ವಾದಕರಾಗಿದ್ದು ತಮ್ಮ ಸುಮಧುರ ಧ್ವನಿಯಿಂದ ಮತ್ತು ತಬಲಾ ವಾದನದಿಂದ ಎಲ್ಲ ಸಾಯಿ ಭಕ್ತರ ಮನಸೂರೆಗೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ ಇವರು ತಮ್ಮ ಎಲ್ಲ ಕೆಲಸದ ಒತ್ತಡಗಳ ನಡುವೆಯು  ಸಾಯಿ ಸೇವೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡುತ್ತ ಬಂದಿದ್ದಾರೆ.

ಶ್ರೀ. ಶಿವಚರಣ್ ರವರು ಬಾಲ್ಯದಿಂದಲೇ ವೇದ, ಸಂಸ್ಕೃತ, ಉಪನಿಷತ್ ಮತ್ತು ಇನ್ನು ಹಲವಾರು ವಿದ್ಯೆಗಳನ್ನು ಯಾರ ಮಾರ್ಗದರ್ಶನವೂ ಇಲ್ಲದೆ, ಕೇವಲ ಸಾಯಿಬಾಬಾರವರ ಕೃಪಾಕಟಾಕ್ಷದಿಂದ ಚೆನ್ನಾಗಿ ಕಲಿತಿದ್ದಾರೆ. ಇವರ ಸಂಸ್ಕೃತದ ಮೇಲಿನ ಪಾಂಡಿತ್ಯ ಎಲ್ಲರನ್ನು ಬೆರಗುಗೊಳಿಸುತ್ತದೆ. ಇವರು ಸಂಸ್ಕೃತದಲ್ಲಿ "ಶಿವ-ಪಾರ್ವತೀ ಕಲ್ಯಾಣ" ಎಂಬ ಕಾವ್ಯವನ್ನು ರಚಿಸಿದ್ದಾರೆ. ಆಲ್ಲದೇ ಶಿರಡಿ ಸಾಯಿಬಾಬಾರವರ "ಶ್ರೀ. ಸಾಯಿ ಸಹಸ್ರನಾಮ" ಕ್ಕೆ ಭಾಷ್ಯವನ್ನು "ಸಾಯಿ ಅಮೃತಧಾರ.ಕಾಂ" ನ ಅಂತರ್ಜಾಲದ ತಿಂಗಳ ವಾರ್ತಾ ಪತ್ರವಾದ "ಸಾಯಿ ಅಮೃತವಾಣಿ" ಯಲ್ಲಿ ಬರೆಯುತ್ತಿದ್ದಾರೆ. ಇವರ ಪ್ರತಿಭೆ ಇಷ್ಟಕ್ಕೆ ಸೀಮಿತವಲ್ಲ. ಇವರು ಎಲ್ಲ ಹೋಮ ಪ್ರಯೋಗವನ್ನು, ರುದ್ರಾಭಿಷೇಕದ ಕ್ರಮವನ್ನು ಕೂಡ ಯಾರ ಮಾರ್ಗದರ್ಶನವೂ ಇಲ್ಲದೆ, ಕೇವಲ ಸಾಯಿಬಾಬಾರವರ ಕೃಪಾಕಟಾಕ್ಷದಿಂದ ಚೆನ್ನಾಗಿ ಕಲಿತಿದ್ದಾರೆ ಹಾಗೂ ಬೆಂಗಳೂರಿನ ಅನೇಕ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ಹಾಗೂ ಸಾಯಿ ಭಕ್ತರ ಮನೆಗಳಲ್ಲಿ ಮಾಡಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯಲ್ಲಿ ಎಂ.ಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿರುವ ಇವರು ತಮ್ಮ ಎಲ್ಲ ಕೆಲಸದ ಒತ್ತಡಗಳ ನಡುವೆಯು ಸಾಯಿ ಸೇವೆಯನ್ನು ಬಹಳ ಉತ್ತಮ ರೀತಿಯಲ್ಲಿ ಮಾಡುತ್ತ ಬಂದಿದ್ದಾರೆ.

ಶ್ರೀಮತಿ.ಅನ್ನಪೂರ್ಣ ಗಂಗಾಧರ ತಿಲಕ್ ರವರು ಶ್ರೀ.ಗಂಗಾಧರ ತಿಲಕ್ ರವರ ಧರ್ಮಪತ್ನಿ. ಇವರು ತಮ್ಮ ಯಜಮಾನರಿಗೆ ಹಾಗೂ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರಾಗಿರುವುದೇ ಆಲ್ಲದೇ ಸ್ವತಃ ಒಳ್ಳೆಯ ಬರಹಗಾರ್ತಿಯಾಗಿದ್ದು ಕನ್ನಡದ ಕೃತಿಯಾದ "ಶ್ರೀ ಸಾಯಿಬಾಬಾ ಹೇಳಿದ ಮಾತುಗಳು" ಎಂಬ ಗ್ರಂಥವನ್ನು "ಶ್ರೀ ಸಾಯಿಬಾಬಾ ವಾಕ್ಸುಧಾಮೃಥಮು" ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದಿಸಿದ್ದಾರೆ. ಆಲ್ಲದೇ ಪ್ರಸಿದ್ದ ಅವಧೂತರಾದ "ಶ್ರೀ ಶಂಕರ ಲಿಂಗ ಭಾಗವನ್" ರವರ ಜೀವನ ಚರಿತ್ರೆ, "ತುಂಬಿಗೆರೆಯ ಬ್ರಹ್ಮಾನಂದ" ರ ಜೀವನ ಚರಿತ್ರೆಗಳನ್ನು ಕೂಡ ಕನ್ನಡದಿಂದ ತೆಲುಗು ಭಾಷೆಗೆ ಅನುವಾದಿಸಿದ್ದಾರೆ.

ಶ್ರೀ.ಗಂಗಾಧರ ತಿಲಕ್ ರವರು 1991 ರಲ್ಲಿ "ಸಾಯಿ ಸೌರಭ" ಎಂಬ ದ್ವನಿಸುರಳಿಯನ್ನು ಕನ್ನಡದಲ್ಲಿ ಬಿಡುಗಡೆ ಮಾಡಿರುತ್ತಾರೆ.


ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:


ವಿಳಾಸ: 
"ದ್ವಾರಕಮಾಯಿ" , ನಂ. 1775, 27ನೇ  ಮುಖ್ಯರಸ್ತೆ, 9ನೇ ಬಡಾವಣೆ, ಜಯನಗರ, ಬೆಂಗಳೂರು-560 069.

ದೂರವಾಣಿ:
+91 80 22450365 / +91 99015 05022

ಈ ಮೇಲ್ ವಿಳಾಸ:

sivatilak@gmail.com


ಅಂತರ್ಜಾಲ ತಾಣ:
http://www.saiamrithadhara.com/

ಅಲ್ಬಮ್ ಗಳು: 
ಸಾಯಿ ಸೌರಭ

ಭಜನೆ ವೀಡಿಯೋಗಳು:  





































ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment