Wednesday, September 17, 2014

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ಸಾಯಿ ಮಹಾಭಕ್ತ ಡಾ.ಕೇಶವ ಭಗವಂತ ಗಾವಂಕರ್ ರವರ ಪುತ್ರ ಡಾ.ಸಾಯಿನಾಥ ಕೆ ಗಾವಂಕರ್ ರವರಿಂದ ತಮ್ಮ ಕುಟುಂಬದವರು ಅನುಭವಿಸಿದ ಸಾಯಿಲೀಲೆಯ ಕುರಿತು ಭಾಷಣ ಹಾಗೂ ಉತ್ತರಪ್ರದೇಶದ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶ್ರೀ ಸಾಯಿಬಾಬಾ ಮಂದಿರದ ವತಿಯಿಂದ ಸಾಯಿ ಮಹಾಭಕ್ತ ಡಾ.ಕೇಶವ ಭಗವಂತ ಗಾವಂಕರ್ ರವರ ಪುತ್ರ ಡಾ.ಸಾಯಿನಾಥ ಕೆ ಗಾವಂಕರ್ ರವರಿಂದ ತಮ್ಮ ಕುಟುಂಬದವರು ಅನುಭವಿಸಿದ ಸಾಯಿಲೀಲೆಯ ಕುರಿತು ಭಾಷಣ ಹಾಗೂ ಉತ್ತರಪ್ರದೇಶದ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣದ ಆಯೋಜನೆಯನ್ನು ಇದೇ ತಿಂಗಳ 28ನೇ ಸೆಪ್ಟೆಂಬರ್ 2014, ಭಾನುವಾರ ದಂದು ಆಯೋಜಿಸಲಾಗಿದೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಕಂಡ ಆಹ್ವಾನ ಪತ್ರಿಕೆಯಲ್ಲಿ ನೀಡಲಾಗಿದೆ: 



ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಕೆ.ಸಾಯಿನಾಥ ಗಾವಂಕರ್ ರವರ ಬಾಯಿಯಿಂದಲೇ ನೇರವಾಗಿ  ಅವರ ಕುಟುಂಬದವರಿಗಾದ ಸಾಯಿಲೀಲೆಯನ್ನು ಕೇಳಿ ಆನಂದಿಸಬೇಕೆಂದು ಹಾಗೂ ಉತ್ತರಪ್ರದೇಶದ ಪ್ರಖ್ಯಾತ ಶ್ರೀ.ಶುಕ್ಲಾ ಮತ್ತು ತಂಡದವರಿಂದ "ಸುಂದರಕಾಂಡ" ಪಾರಾಯಣವನ್ನು ಆಲಿಸಿ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಮಂದಿರದ ಆಡಳಿತ ಮಂಡಳಿಯವರು ಈ ಮೂಲಕ ಮನವಿ ಮಾಡಿಕೊಳ್ಳುತ್ತಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment