Saturday, September 6, 2014

ಬಿಹಾರ ರಾಜ್ಯದ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಕದಂ ಘಾಟ್, ಮಿಸ್ಕಾಟ್, ಮೋತಿಹಾರಿ-845 401, ಪೂರ್ವ ಚಂಪಾರನ್ ಜಿಲ್ಲೆ,ಬಿಹಾರ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ಈ ಮಂದಿರದ ಭೂಮಿ ಪೂಜೆಯನ್ನು 12ನೇ ಡಿಸೆಂಬರ್ 2010 ರಂದು ನೆರವೇರಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 17ನೇ ಏಪ್ರಿಲ್ 2012 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು. ಸಂಸತ್ ಸದಸ್ಯರಾದ ಶ್ರೀ.ರಾಧಾ ಮೋಹನ್ ಸಿಂಗ್ ಹಾಗೂ ಸ್ಥಳೀಯ ವಿಧಾನಸಭೆಯ ಸದಸ್ಯರಾದ ಶ್ರೀ.ಕೆ.ಆರ್.ಪ್ರಮೋದ್ ರವರುಗಳು ಕೂಡ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ಮಂದಿರವನ್ನು ಟ್ರಸ್ಟ್ ಗೆ ಸೇರಿರುವ 40x200 ಚದರ ಅಡಿ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ಶ್ರೀ.ರವಿ ಅಗರವಾಲ್ ರವರು ಮಂದಿರದ ಸಂಸ್ಥಾಪಕ ಟ್ರಸ್ಟಿಯಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು ಮಂದಿರದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ಮಂದಿರದಲ್ಲಿ ಸುಮಾರು 5 ಅಡಿ ಎತ್ತರದ ಸುಂದರವಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, 1 ಅಡಿ ಎತ್ತರದ ಅಮೃತಶಿಲೆಯ ಗಣಪತಿ,  ಅಮೃತಶಿಲೆಯ ಪಾದುಕೆಗಳು ಮತ್ತು ನಂದಿಯ ವಿಗ್ರಹಗಳನ್ನು ಸಹ ಮಂದಿರದಲ್ಲಿ ಪ್ರತಿಷ್ಟಾಪಿಸಲಾಗಿದೆ. 





ಮಂದಿರದ ದಿನನಿತ್ಯದ ಕಾರ್ಯಕ್ರಮಗಳು: 

ಮಂದಿರದ ಸಮಯ: 

ಮಂದಿರವನ್ನು ಬೆಳಿಗ್ಗೆ  5:00 ರಿಂದ ಮಧ್ಯಾನ್ಹ 12:00 ರವರೆಗೆ ಹಾಗೂ ಪುನಃ ಮಧ್ಯಾನ್ಹ 1:00 ರಿಂದ ರಾತ್ರಿ 10:00 ಗಂಟೆಯವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. 

ಆರತಿಯ ಸಮಯ: 

ಬೆಳಿಗ್ಗೆ         : 8:00 ಗಂಟೆ 
ರಾತ್ರಿ         : 8:00 ಗಂಟೆ 

ಗುರುವಾರದ ದಿನಗಳಂದು ಮಂದಿರದಲ್ಲಿ ನಾಲ್ಕು ಆರತಿಗಳನ್ನು ಮಾಡಲಾಗುತ್ತದೆ. ಗುರುವಾರದ ಆರತಿಗಳ ಸಮಯ ಇಂತಿದೆ:  

ಕಾಕಡಾ ಆರತಿ   : 6:00 ಗಂಟೆ 
ಮಧ್ಯಾನ್ಹ ಆರತಿ : 11:30 ಗಂಟೆ 
ಧೂಪಾರತಿ       :  5:30 ಗಂಟೆ 
ಶೇಜಾರತಿ        :  8:00 ಗಂಟೆ

ಪ್ರತಿ ಗುರುವಾರದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಲ್ಲದೆ ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನವನ್ನು ಮಾಡಲಾಗುತ್ತದೆ. ಅನ್ನದಾನ ಸೇವೆಯ ಸೇವಾ ಮೊಬಲಗು 12,000/- ರೂಪಾಯಿಗಳಾಗಿರುತ್ತದೆ.

ವಿಶೇಷ ಉತ್ಸವದ ದಿನಗಳು: 

1.ಹೊಸ ವರ್ಷದ ಆಚರಣೆ 
2.ಶ್ರೀರಾಮನವಮಿ 
3.ಗುರುಪೂರ್ಣಿಮೆ 
4.ವಿಜಯದಶಮಿ

ಟ್ರಸ್ಟ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳು:

ಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಉಚಿತ ಯೋಗ ತರಗತಿಗಳನ್ನು ನಡೆಸಲಾಗುತ್ತಿದೆ. 

ಪ್ರತಿ ಗುರುವಾರಗಳಂದು ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಂದಿರದ ಟ್ರಸ್ಟ್ ನ ವತಿಯಿಂದ ಅನ್ನದಾನವನ್ನು ಮಾಡಲಾಗುತ್ತಿದೆ. 

ಮಂದಿರದ ಟ್ರಸ್ಟ್ ನ ವತಿಯಿಂದ ಪ್ರತಿ ವರ್ಷವೂ ಅತ್ಯಂತ ಕಡಿಮೆ ದರದಲ್ಲಿ ಸುಮಾರು 300 ಜನರನ್ನು ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.  

ದೇಣಿಗೆಗೆ ಮನವಿ: 

ಶ್ರೀ ಸಾಯಿಬಾಬಾ ಟ್ರಸ್ಟ್, ಮೋತಿಹಾರಿಯು ಟ್ರಸ್ಟ್ ನ ವತಿಯಿಂದ ಹಮ್ಮಿಕೊಂಡಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ದಾನಿಗಳಿಂದ ಉದಾರವಾದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ನೀಡಬಯಸುವ ಸಾಯಿ ಭಕ್ತರು ಚೆಕ್/ಡಿಡಿ ಮುಖಾಂತರವಾಗಿ “ಶ್ರೀ ಸಾಯಿಬಾಬಾ ಟ್ರಸ್ಟ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಖಾತೆ ಸಂಖ್ಯೆ: 251300010128084, ಶಾಖೆ: ಮೋತಿಹಾರಿ ಪಟ್ಟಣ, IFSC ಕೋಡ್ ಸಂಖ್ಯೆ:PUNB0251300" ಗೆ ಸಂದಾಯವಾಗುವಂತೆ ಹಣವನ್ನು ಕಳುಹಿಸಬಹುದಾಗಿರುತ್ತದೆ. 

ಮಂದಿರವಿರುವ ಸ್ಥಳ ಮತ್ತು ಮಾರ್ಗಸೂಚಿ:


ಸ್ಥಳ: 
ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. 

ವಿಳಾಸ: 
ಶ್ರೀ  ಶಿರಡಿ ಸಾಯಿಬಾಬಾ ಮಂದಿರ, 
ಕದಂ ಘಾಟ್, ಮಿಸ್ಕಾಟ್, 
ಮೋತಿಹಾರಿ-845 401, 
ಪೂರ್ವ ಚಂಪಾರನ್  ಜಿಲ್ಲೆ,
ಬಿಹಾರ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ರವಿ ಅಗರವಾಲ್ - ಟ್ರಸ್ಟಿ

ದೂರವಾಣಿ ಸಂಖ್ಯೆ: 
+91 95769 09000

ಮಿಂಚಂಚೆ: 
ravi.april04@gmail.com

ಮಾರ್ಗಸೂಚಿ: 
ಈ ಶಿರಡಿ ಸಾಯಿಬಾಬಾ ಮಂದಿರವು ಬಿಹಾರ ರಾಜ್ಯದ ಪೂರ್ವ ಚಂಪಾರನ್  ಜಿಲ್ಲೆಯ ಮೋತಿಹಾರಿ ಪಟ್ಟಣದ ಕದಂ ಘಾಟ್, ಮಿಸ್ಕಾಟ್ ನ ಬಳಿ ಇದೆ. ಈ ಮಂದಿರವು ಮೋತಿಹಾರಿ ಬಸ್ ನಿಲ್ದಾಣದಿಂದ 2 ಕಿಲೋಮೀಟರ್ ದೂರದಲ್ಲೂ ಹಾಗೂ ಮೋತಿಹಾರಿ ರೈಲು ನಿಲ್ದಾಣದಿಂದ 1 ಕಿಲೋಮೀಟರ್ ದೂರದಲ್ಲೂ ಇರುತ್ತದೆ. ಮಂದಿರಕ್ಕೆ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಹೇರಳವಾಗಿ ಆಟೋರಿಕ್ಷಾ ಸೌಲಭ್ಯವಿರುತ್ತದೆ. 

(ಕೃಪೆ: ಶ್ರೀ.ರವಿ ಅಗರವಾಲ್, ಟ್ರಸ್ಟಿ, ಮೋತಿಹಾರಿ ಸಾಯಿಬಾಬಾ ಮಂದಿರ, ಬಿಹಾರ).

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment