Monday, January 13, 2014

ಖ್ಯಾತ ಸಾಯಿ ಬಂಧು ಶ್ರೀ.ಮಾಸಿಲಪುರಂ ಮಾಣಿಕ್ಯಂ ಆಲಿಯಾಸ್ "ಉಧಿ ಬಾಬಾ" ಇನ್ನಿಲ್ಲ - ಕೃಪೆ:ಸಾಯಿಅಮೃತಧಾರಾ.ಕಾಂ

ಖ್ಯಾತ ಸಾಯಿ ಬಂಧು ಶ್ರೀ.ಮಾಸಿಲಪುರಂ ಮಾಣಿಕ್ಯಂ ಆಲಿಯಾಸ್ "ಉಧಿ ಬಾಬಾ" ರವರು ಇದೇ  ತಿಂಗಳ 13ನೇ ಜನವರಿ  2014, ಸೋಮವಾರ ದಂದು ಬೆಳಿಗ್ಗೆ  ತಮಿಳುನಾಡಿನ ವೆಲ್ಲೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.ಅವರಿಗೆ 60 ವರ್ಷ ವಯಸ್ಸಾಗಿತ್ತು.  ಇವರು ತಮಿಳುನಾಡು ಸರ್ಕಾರದ  ಸಹಕಾರಿ ಇಲಾಖೆಯಲ್ಲಿ  ಸಹಾಯಕ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದರು. ಉಧಿ ಬಾಬಾರವರು ದೀರ್ಘಕಾಲದ ಖಾಯಿಲೆಯಿಂದ ಬಳಲುತ್ತಿರುವ ಸಾವಿರಾರು ರೋಗಿಗಳ ಹಣೆಯ ಮೇಲೆ ಸಾಯಿಬಾಬಾರವರ ಪವಿತ್ರ ಉಧಿಯನ್ನು ಹಚ್ಚುವ  ಮುಖಾಂತರ ಅವರ ಖಾಯಿಲೆಗಳನ್ನು ಗುಣಪಡಿಸುವುದಕ್ಕೆ ಹೆಸರುವಾಸಿಯಾಗಿದ್ದರು. ಸರ್ಕಾರಿ ವೃತ್ತಿಯಿಂದ ನಿವೃತ್ತರಾದ  ನಂತರ ಇವರು ಒಂದು ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ  ಅದರ ಮುಖಾಂತರ ಪ್ರತಿ ವರ್ಷ ಬಡ ಮಹಿಳೆಯರಿಗೆ ಉಚಿತವಾಗಿ  ಹೊಲಿಗೆ ಯಂತ್ರವನ್ನು ನೀಡುವ ಉತ್ತಮ ಕೆಲಸವನ್ನು  ಮಾಡುತ್ತಿದ್ದರು. ಇತ್ತೀಚೆಗಷ್ಟೇ ಅಂದರೆ 1ನೇ ಜನವರಿ  2014 ರಂದು ಸಾಯಿಬಾಬಾರವರ ದರ್ಶನವನ್ನು ಮಾಡಿ ಶಿರಡಿಯಿಂದ ಹಿಂತಿರುಗಿದ್ದರು. 

ಸಾಯಿಅಮೃತಧಾರಾ.ಕಾಂ ಅಂತರ್ಜಾಲ ತಾಣ ಹಾಗೂ ಸಾಯಿಅಮೃತವಾಣಿ ಬ್ಲಾಗ್ ನ ತಂಡವು ಈ ಖ್ಯಾತ ಸಾಯಿ ಬಂಧುವಿನ ಅಕಾಲಿಕ ಮರಣಕ್ಕೆ ಅತೀವ ಶೋಕವನ್ನು ವ್ಯಕ್ತಪಡಿಸುತ್ತದೆ ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಾಯಿಬಾಬಾರವರಲ್ಲಿ ಪ್ರಾರ್ಥನೆ ಮಾಡುತ್ತದೆ. ಅಲ್ಲದೇ, ಅವರ ಮನೆಯವರಿಗೆ ಈ  ಅಕಾಲಿಕ ಮರಣದ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲಿ ಎಂದು ಸಾಯಿಬಾಬಾರವರನ್ನು ಪ್ರಾರ್ಥಿಸುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment