Saturday, July 27, 2013

ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ ನ ವತಿಯಿಂದ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ "ಶ್ರೀ ಸಾಯಿ ಟಿವಿ" ಯ ಲೋಕಾರ್ಪಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಹೈದರಾಬಾದ್  ನ  ಶ್ರೀ ಸಾಯಿ ಲೀಲಾ ಬ್ರಾಡ್ಕಾಸ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದೇ ತಿಂಗಳ 22ನೇ ಜುಲೈ 2013 ರ ಪವಿತ್ರ ಗುರುಪೂರ್ಣಿಮೆಯ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಶ, ಕಾಶಿಬುಗ್ಗಾದ ಶಿರಡಿ ಸಾಯಿಬಾಬಾ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ 10:33 ಕ್ಕೆ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ www. srisaitv.com ನ ಲೋಕಾರ್ಪಣೆಯನ್ನು ಶಿರಡಿ ಸಾಯಿಬಾಬಾರವರ ದಿವ್ಯ ಸಾನಿಧ್ಯದಲ್ಲಿ ಒಬ್ಬ ಪುಟ್ಟ ಬಾಲಕಿಯು ಅಮೃತ ಹಸ್ತದಿಂದ ಗಣಕ ಯಂತ್ರದ ಬಟನ್ ಒತ್ತುವ ಮುಖಾಂತರ ಚಾಲನೆ ನೀಡಿತು. ಕಾರ್ಯಕ್ರಮದಲ್ಲಿ ನೂರಾರು ಸ್ಥಳೀಯ ಸಾಯಿ ಭಕ್ತರು ಪಾಲ್ಗೊಂಡಿದ್ದರು. 
ಲೋಕಾರ್ಪಣೆಯ ಹಿಂದಿನ ದಿನವಾದ 21ನೇ ಜುಲೈ 2013 ರಂದು ಪತ್ರಿಕಾಗೋಷ್ಠಿಯನ್ನು  ಉದ್ದೇಶಿಸಿ ಮಾತನಾಡಿದ ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕ ಹಾಗೂ ಚಾನಲ್ ನ ಸಂಯೋಜಕರಾದ ಶ್ರಿ.ಸಿ.ಸಾಯಿಬಾಬಾ ಅಂತರ್ಜಾಲ ತಾಣದಲ್ಲಿ ಚಾನಲ್ ಪ್ರಾರಂಭಿಸುತ್ತಿರುವ ಹಿಂದಿರುವ ಉದ್ಧೇಶವನ್ನು ಕುರಿತು ಮಾತನಾಡಿದರು. ಕಾರ್ಯದರ್ಶಿಗಳಾದ ಶ್ರೀ.ಜಿ.ಜೆ.ಎಸ್.ರೆಡ್ಡಿ, ಖಚಾಂಚಿಗಳಾದ ಶ್ರಿ.ಚಲಪತಿ ರಾವ್, ಶ್ರೀ.ಕೃಷ್ಣಾ ರೆಡ್ಡಿ, ಟಾಟಾ ಸಂಸ್ಥಾನದ ಅವಧೂತ ರಾಮಿರೆಡ್ಡಿ, ಕೊಲ್ಲೂರು ರವರುಗಳು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರಿ.ಸಿ.ಸಾಯಿಬಾಬಾರವರು ಈ ಚಾನಲ್ ನ ಅಧ್ಯಕ್ಷರು ಸ್ವಯಂ ಸಾಯಿಬಾಬಾರವರೇ ಆಗಿರುತ್ತಾರೆ. ಈ ಚಾನಲ್ ಸಾಯಿಬಾಬಾರವರ ಆದೇಶದ ಮೇರೆಗೆ ಸಾಯಿ ಭಕ್ತರಿಂದ ಸಾಯಿ ಭಕ್ತರಿಗಾಗಿ ಸಾಯಿಭಕ್ತರೆಲ್ಲರೂ ಸೇರಿ ನಡೆಸಲು ಉದ್ದೇಶಿಸಿರುವ ಚಾನಲ್ ಆಗಿರುತ್ತದೆ ಎಂದು ಒತ್ತಿ ಹೇಳಿದರು. 











ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕರವರು ಮಾತನಾಡಿ ಈ ಚಾನಲ್ ಪ್ರಾರಂಭಿಸಲು ಬೇಕಾಗಿರುವ ಎಲ್ಲಾ ಸೌಕರ್ಯಗಳನ್ನು ನೋಡಿಕೊಳ್ಳುವ ಸಲುವಾಗಿ ಶ್ರೀ ಸಾಯಿ ಪ್ರಸನ್ನ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನೋಂದಣಿಯನ್ನು ಸಹ ಮಾಡಲಾಗಿರುತ್ತದೆ. ಈ ಚಾನಲ್ ಗೆ ಉತ್ತೇಜನ ನೀಡಲು ಇಚ್ಛಿಸುವ ಸಾಯಿ ಭಕ್ತರು ಪೋಷಕ, ಗೌರವ ಪೋಷಕ ಅಥವಾ ಪ್ರಧಾನ ಪೋಷಕರಾಗಿ ಸೇರುವ ಮುಖಾಂತರ ಸೇವೆ ಸಲ್ಲಿಸುವ ಅವಕಾಶವಿರುತ್ತದೆ ಎಂದು ನುಡಿದರು.

22ನೇ ಜುಲೈ 2013 ರ ಪವಿತ್ರ ಗುರುಪೂರ್ಣಿಮೆಯ ದಿನದಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಶ, ಕಾಶಿಬುಗ್ಗಾದ ಶಿರಡಿ ಸಾಯಿಬಾಬಾ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ 10:33 ಕ್ಕೆ ನಡೆದ ತೆಲುಗಿನ ಪ್ರಪ್ರಥಮ ಅಂತರ್ಜಾಲ ಟಿವಿ ತಾಣ www. srisaitv.com ನ ಲೋಕಾರ್ಪಣೆಯ ಮುಂದುವರಿದ ಭಾಗವಾಗಿ ಇದೇ ತಿಂಗಳ 25ನೇ ಜುಲೈ 2013, ಗುರುವಾರದಂದು ಶಿರಡಿಯಲ್ಲಿ  ಸಾಯಿಬಾಬಾರವರ ದಿವ್ಯ ಸಾನಿಧ್ಯದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಗಣಕ ಯಂತ್ರದ ಬಟನ್ ಒತ್ತುವ ಮುಖಾಂತರ ಅಂತರ್ಜಾಲ ತಾಣವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಹೈದರಾಬಾದ್ ನ ರಾಜಿರೆಡ್ಡಿನಗರ, ಚಾಮಾಪೇಟ್ ನ ಸಾಯಿಬಾಬಾ ಮಂದಿರದ ಶ್ರೀಮತಿ.ಜಿ. ಅನಂತಲಕ್ಷ್ಮೀ, ಶ್ರೀ ಸಾಯಿ ಟಿವಿಯ ನಿರ್ದೇಶಕರಾದ ಶ್ರೀ.ಅನಿಲ್ ಕುಮಾರ್ ರಪಾಕ, ಶ್ರೀ ಸಾಯಿ ಪ್ರಸನ್ನ ಸೊಸೈಟಿಯ ಸಹ ಪ್ರವರ್ತಕಿ ಶ್ರೀಮತಿ ಸಾಯಿ ವಾಹಿನಿಯವರುಗಳು ಕೂಡ ಉಪಸ್ಥಿತರಿದ್ದರು.



 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment