Saturday, July 20, 2013

ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ವತಿಯಿಂದ ಗುರುಪೂರ್ಣಿಮೆ ಉತ್ಸವದ ಆಚರಣೆ ಹಾಗೂ ಸಾಯಿಬಾಬಾರವರ ಮೇಲಿನ ಕನ್ನಡ ಹಾಡುಗಳ ಧ್ವನಿಸುರಳಿ "ಸಾಯಿ ಸಿರಿ" ಬಿಡುಗಡೆ - ಕೃಪೆ: ಸಾಯಿ ರಮೇಶ್, ಶಿರಡಿ




ಬೆಂಗಳೂರಿನ ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ಇದೇ ತಿಂಗಳ 22ನೇ ಜುಲೈ 2013, ಸೋಮವಾರದಂದು ಪವಿತ್ರ ಗುರುಪೂರ್ಣಿಮೆಯ ಅಂಗವಾಗಿ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದೆ. ಉತ್ಸವದ ಅಂಗವಾಗಿ ಸಾಯಿಬಾಬಾರವರ ಮೇಲಿನ ಕನ್ನಡ ಹಾಡುಗಳ ಧ್ವನಿಸುರಳಿ "ಸಾಯಿ ಸಿರಿ" ಯನ್ನು ಬಿಡುಗಡೆಗೊಳಿಸಲಾಗುತ್ತಿದೆ   ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷರಾದ  ಡಾ. ಮಹರ್ಷಿ ಆನಂದ ಗುರೂಜಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಧ್ವನಿಸುರಳಿಯನ್ನು ಸಹ ಬಿಡುಗಡೆ ಮಾಡಲಿದ್ದಾರೆ. 



ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಭಕ್ತರು ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿ ಜನ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment