Monday, July 15, 2013

ಗ್ಲಾಸಿ ಪ್ರಿಂಟ್ಸ್, ಬೆಂಗಳೂರಿನ ವತಿಯಿಂದ ಕನ್ನಡ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿನಾಥ ಸಗುಣೋಪಾಸನ" ಪುಸ್ತಕದ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ




ಬೆಂಗಳೂರಿನ ಗ್ಲಾಸಿ ಪ್ರಿಂಟ್ಸ್ ಸಂಸ್ಥೆಯು ಕನ್ನಡದ ಸಾಯಿ ಭಕ್ತರಿಗೋಸ್ಕರ "ಶ್ರೀ ಶಿರಡಿ ಸಾಯಿನಾಥ ಸಗುಣೋಪಾಸನ" ಎಂಬ ಪುಸ್ತಕವನ್ನು ಹೊರ ತರುತ್ತಿದೆ. ಈ ಪುಸ್ತಕವು ಶ್ರೀ ಶಿರಡಿ ಸಾಯಿಬಾಬಾರವರ ಹನ್ನೊಂದು ಅಭಿವಚನಗಳು, ಶ್ರೀ ಶಿರಡಿ ಸಾಯಿಬಾಬಾರವರ ಆರತಿ, ಅಷ್ಟೋತ್ತರ, ಸಹಸ್ರನಾಮ, ಸ್ತವನ ಮಂಜರಿಯ ರಚನಕಾರರ ಕಿರುಪರಿಚಯ, ಶ್ರೀ ಶಿರಡಿ ಸಾಯಿಬಾಬಾರವರಿಗೆ ಸಲ್ಲಿಸುವ ಪಂಚಾರತಿಯ ಮಹತ್ವ, ಶ್ರೀ ಸಾಯಿನಾಥ ಸ್ತವನ ಮಂಜರಿಯ ಮಹತ್ವ, ಪರಮ ಪೂಜ್ಯ ಶ್ರೀ.ಬಿ.ವಿ.ನರಸಿಂಹ ಸ್ವಾಮೀಜಿಯವರು ರಚಿಸಿರುವ ಶ್ರೀ ಶಿರಡಿ ಸಾಯಿಬಾಬಾರವರ ಅಷ್ಟೋತ್ತರ, ಸಹಸ್ರನಾಮ, ಸಂತ ಕವಿ ದಾಸಗಣು ವಿರಚಿತ ಶ್ರೀ ಸಾಯಿನಾಥ ಸ್ತವನ ಮಂಜರಿ, ಶಿರಡಿ ಸಾಯಿಬಾಬಾರವರ ನಾಲ್ಕು ಆರತಿಗಳು, ಶಿರಡಿಯ ಸಮಾಧಿ ಮಂದಿರದಲ್ಲಿ ನಡೆಯುವ ನಿತ್ಯ ಕಾರ್ಯಕ್ರಮಗಳು, ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ ಪ್ರತಿದಿನ ನಡೆಯುವ ಪೂಜಾ ಹಾಗೂ ದೇಣಿಗೆ ವಿವರಗಳು, ಸಾಯಿಬಾಬಾರವರ 106 ಸೂಕ್ತಿಗಳನ್ನು ಒಳಗೊಂಡಿದ್ದು ಶಿರಡಿ ಸಾಯಿಬಾಬಾರವರ ಸಗುಣೋಪಾಸನೆಗೆ ಅಗತ್ಯವಿರುವ ಎಲ್ಲವನ್ನೂ ಒಟ್ಟಿಗೆ ದೊರೆಯುವಂತೆ ಮಾಡುವ ಒಂದು ಸಣ್ಣ ಪ್ರಯತ್ನ ಇದಾಗಿರುತ್ತದೆ.

ಈ ಪುಸ್ತಕವನ್ನು ಇದೇ ತಿಂಗಳ 22.07.2013 ರ ಪವಿತ್ರ ಗುರು ಪೂರ್ಣಿಮೆಯಂದು ಶಿರಡಿ ಸಾಯಿಬಾಬಾರವರ ಪಾದ ಕಮಲಗಳಿಗೆ ಅರ್ಪಣೆ ಮಾಡುವ ಮುಖಾಂತರ ಬಿಡುಗಡೆಗೊಳಿಸಲಾಗುತ್ತದೆ. ಈ ಪುಸ್ತಕದ ಬೆಲೆ ಕೇವಲ 50/- ರೂಪಾಯಿಗಳಾಗಿದ್ದು ಪುಸ್ತಕವನ್ನು ಖರೀದಿಸಲು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:

ಗ್ಲಾಸಿ ಪ್ರಿಂಟ್ಸ್
ನಂ.8,  1ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ,
20, ಪುಕ್ ರಾಜ್ ಲೇ ಔಟ್, ಆಡುಗೋಡಿ,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-560 030.
ದೂರವಾಣಿ: +91 80 2212 8796 / +91 80 4218 5146
ಇ-ಮೈಲ್: glossyprints@yahoo.com

ಕನ್ನಡ ಅನುವಾದ: ಶ್ರೀಕಂಠಶರ್ಮ

No comments:

Post a Comment