Saturday, October 27, 2012


ಶ್ರೀ ಶಿವಸಾಯಿ ಟ್ರಸ್ಟ್ ನ ವತಿಯಿಂದ ಸಾಯಿಬಾಬಾರವರ 94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಆಚರಣೆ - ಕೃಪೆ: ಸಾಯಿ ಪರಮೇಶ್ ಕುಮಾರ್, ಬಂಗಾರಪೇಟೆ

ಶ್ರೀ ಶಿವಸಾಯಿ ಟ್ರಸ್ಟ್ ಇದೇ ತಿಂಗಳ 24ನೇ ಅಕ್ಟೋಬರ್ 2012, ಬುಧವಾರದಂದು ಬಂಗಾರಪೇಟೆಯ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸಾಯಿಬಾಬಾರವರ  94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಭಜನೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿತು. 

ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀ.ಪರಮೇಶ್ ಕುಮಾರ್, ಸ್ಥಳೀಯ ಸಾಯಿ ಭಕ್ತರುಗಳಾದ ಶಿವಕುಮಾರ್, ರತ್ನಮ್ಮ ಚಂದ್ರಪ್ಪ, ವರುಣ್, ಉಮೇಶ್, ಅನಿಲ್, ಸಂಪಂಗಿರಾಮ ಗುಪ್ತಾ, ರಾಮಕೃಷ್ಣಪ್ಪ, ಬಾಬು, ರಾಕೇಶ್, ಮಣಿ, ನಾಗರಾಜ್, ರಾಮಚಂದ್ರಪ್ಪ ಮತ್ತು ಇನ್ನು ಹಲವಾರು ಟ್ರಸ್ಟ್ ನ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಕಾರ್ಯಕ್ರಮದ ಬಗ್ಗೆ ಪ್ರಕಟವಾದ ವಿವಿಧ ಪತ್ರಿಕಾ ವರದಿಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ.







ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment